Tuesday, April 30, 2024
spot_img
More

    Latest Posts

    ನೆಲಸಮ ವೇಳೆ ಕಾನೂನು ಪಾಲನೆ ಅಗತ್ಯ: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ!

    ಯಾವುದೇ ಕಟ್ಟಡ ಅಥವಾ ಮನೆ ಧ್ವಂಸಗೊಳಿಸಬೇಕಾದರೆ ಏಕಾಏಕಿ ಮಾಡುವಂತದ್ದಲ್ಲ. ಇಂತಹ ವಿಷಯಗಳಲ್ಲಿ ಕಾನೂನು ಪಾಲಿಸುವುದು ಅತ್ಯಗತ್ಯ ಎಂದು ಉತ್ತರ ಪ್ರದೇಶಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ.

    ಕಾನ್ಪುರ್‌ ಮತ್ತು ಪ್ರಯಾಗ್‌ ರಾಜ್‌ ನಲ್ಲಿ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರ ಏಕಾಏಕಿ ಅಲ್ಪ ಸಂಖ್ಯಾತರ ಮುಖಂಡನ ಮನೆಯ ಮೇಲೆ ಬುಲ್ಡೋಜರ್‌ ಹರಿಸಿ ಧ್ವಂಸಗೊಳಿಸಿತ್ತು.

    ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌, ಪ್ರಯಾಗ್‌ ರಾಜ್‌ ಮತ್ತು ಕಾನ್ಪುರ ಸ್ಥಳೀಯ ಸಂಸ್ಥೆಗಳಿಂದ ಮಾಹಿತಿ ಕೇಳಿದೆ.

    ಪ್ರತಿಯೊಂದು ಪಾರದರ್ಶಕವಾಗಿರಬೇಕು. ಅಧಿಕಾರಿಗಳು ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ರಕ್ಷಣೆ ನೀಡಬೇಕಾದ ಅಧಿಕಾರಿಗಳು ಈ ರೀತಿ ಅನಗತ್ಯ ಕ್ರಮಗಳಿಗೆ ಮುಂದಾಗುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಸುಪ್ರೀಂಕೋರ್ಟ್‌ ಚಾಟಿ ಬೀಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss