Tuesday, April 30, 2024
spot_img
More

    Latest Posts

    ಪುತ್ತೂರು: ದರೋಡೆಕೋರರ ಬೈಕ್ ಅಪಘಾತ – ಒಬ್ಬ ಗಂಭೀರ, ಇಬ್ಬರು ಪರಾರಿ

    ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಘಟನೆ ನಡೆದಿದೆ. ಇದೇ ಬೆನ್ನೆಲ್ಲೇ ನೆಲ್ಯಾಡಿ ಸಮೀಪದ ಅರಳ ಎಂಬಲ್ಲಿ ವಾಸವಾಗಿರುವ ಆಂಧ್ರಪ್ರದೇಶ ಮೂಲದ ಕೆಲ ಕಾರ್ಮಿಕರನ್ನು ಬೆದರಿಸಿ ಅವರ ಬಳಿ ಇದ್ದ ಮೊಬೈಲ್, ನಗದು ಹಾಗೂ ಬೈಕನ್ನು ದರೋಡೆಕೋರರು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದು, ಅದರಲ್ಲಿ ಒಂದು ಬೈಕ್ ಅಪಘಾತಕ್ಕೀಡಾಗಿ ಸವಾರನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಂಧ್ರಪ್ರದೇಶದ ಕೊಮ್ಮವರಂ ಗ್ರಾಮದ ಬಟ್ಟಲು ವೆಂಕಟೇಶ್ವರಲು (30) ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೆದ್ದಾರಿ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶ ಮೂಲದ ಕೆಲ ಕಾರ್ಮಿಕರು ಬಾಡಿಗೆ ಕೊಠಡಿಯಲ್ಲಿ ವಾಸವಿದ್ದಾರೆ. ಜನವರಿ 13ರ ರಾತ್ರಿ ವ್ಯಕ್ತಿಯೊಬ್ಬ ಬಂದು ಬೈಕನ್ನು ತನಗೆ ಒಪ್ಪಿಸುವಂತೆ ಒತ್ತಾಯಿಸಿದ್ದು, ಅವನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಬೆದರಿಸಿ ನನ್ನ ಅಂಗಿಯ ಜೇಬಿನಲ್ಲಿಟ್ಟಿದ್ದ 200 ರೂ. ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಕೋಣೆಗೆ ನುಗ್ಗಿದ ವ್ಯಕ್ತಿ, ಬ್ಯಾಗ್‌ನಲ್ಲಿದ್ದ ನಗದು ಹೊರತುಪಡಿಸಿ ನಾಲ್ಕು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ನಮ್ಮಿಂದ ಸುಮಾರು 1. 3 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss