ಬೆಳ್ತಂಗಡಿ: ವೇಣೂರಿನ ಪೆರ್ಮುಡದಲ್ಲಿ ಶನಿವಾರ ಆರಂಭಗೊಂಡ 29ನೇ ವರ್ಷದ ಸೂರ್ಯ- ಚಂದ್ರ ಜೋಡುಕರೆ ಕಂಬಳ ಭಾನುವಾರ ಸಂಪನ್ನಗೊಂಡಿತು.
ಕನೆಹಲಗೆ ವಿಭಾಗದಲ್ಲಿ 3 ಜತೆ, ಅಡ್ಡಹಲಗೆ ವಿಭಾಗದಲ್ಲಿ 8, ಹಗ್ಗ ಹಿರಿಯ ವಿಭಾಗದಲ್ಲಿ 13, ನೇಗಿಲು ಹಿರಿಯ ವಿಭಾಗದಲ್ಲಿ 28, ಹಗ್ಗ ಕಿರಿಯ ವಿಭಾಗದಲ್ಲಿ 13, ನೇಗಿಲು ಕಿರಿಯ ವಿಭಾಗದಲ್ಲಿ 86 ಹೀಗೆ ಒಟ್ಟು 151 ಜತೆ ಕೋಣಗಳು ಭಾಗವಹಿಸಿದ್ದವು.
ಫಲಿತಾಂಶದ ವಿವಿರ:
ಕನೆಹಲಗೆ: ಪ್ರಥಮ- ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ, ಹಲಗೆ ಮುಟ್ಟಿದವರು- ಬೈಂದೂರು ಭಾಸ್ಕರ ದೇವಾಡಿಗ. ದ್ವಿತೀಯ- ಬಾರ್ಕೂರು ಶಾಂತರಾಮ್ ಶೆಟ್ಟಿ, ಹಲಗೆ ಮೆಟ್ಟಿದವರು- ಮಂದಾರ್ತಿ ಶಿರೂರು ಗೋಪಾಲ ನಾಯ್ಕ್.
ಅಡ್ಡ ಹಲಗೆ: ಪ್ರಥಮ- ಬೋಳಾರ ತ್ರಿಶಾಲ್ ಕೆ ಪೂಜಾರಿ ‘ಎ’, ಹಲಗೆ ಮುಟ್ಟಿದವರು- ಸಾವ್ಯ ಗಂಗಯ್ಯ ಪೂಜಾರಿ. ದ್ವಿತೀಯ- ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ‘ಎ’, ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುಧೀರ್ ದೇವಾಡಿಗ.
ಹಗ್ಗ ಹಿರಿಯ: ಪ್ರಥಮ- ಪದವು ಕಾನಡ್ಕ ಫ್ಲೇವಿ ಡಿಸೋಜ ‘ಎ’, ಓಡಿಸಿದವರು- ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ. ದ್ವಿತೀಯ- ಮಾಳ ಆನಂದ ನಿಲಯ ಶೇಖರ್ ಎ ಶೆಟ್ಟಿ ‘ಎ’, ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್.
ಹಗ್ಗ ಕಿರಿಯ: ಪ್ರಥಮ- ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಓಡಿಸಿದವರು- ಕೊಳಕೆ ಇರ್ವತ್ತೂರು ಆನಂದ್. ದ್ವಿತೀಯ- ಗುರುಪುರ ಕಾರಮೊಗರಗುತ್ತು ಯಶ್ ಜಗದೀಶ್ ಆಳ್ವ. ಓಡಿಸಿದವರು- ಬೈಂದೂರು ವಿವೇಕ್ ಪೂಜಾರಿ.
ನೇಗಿಲು ಹಿರಿಯ: ಪ್ರಥಮ- ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಎ’, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ- ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಬಿ’, ಓಡಿಸಿದವರು- ಬೈಂದೂರು ವಿವೇಕ್ ಪೂಜಾರಿ
ನೇಗಿಲು ಕಿರಿಯ: ಪ್ರಥಮ- ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ‘ಎ’, ಓಡಿಸಿದವರು- ಬೈಂದೂರು ವಿವೇಕ್ ಪೂಜಾರಿ, ದ್ವಿತೀಯ- ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ ‘ಬಿ’, ಓಡಿಸಿದವರು- ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ.
ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ನೇತೃತ್ವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.