ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ನಿತ್ಯ ಇದ್ದಿದ್ದೆ, ಅದರಲ್ಲೂ ಮಳೆ ಟೈಮು ವೀಕ್ ಎಂಡ್ ಅಂದ್ರೆ ಮುಗಿದೇ ಹೋಯಿತು ಟ್ರಾಫಿಕ್ ನಲ್ಲಿ ಸಿಲಿಕಿದ್ರೆ ಯಾವ ಟೈಂಗೆ ಸೇರಬೇಕಾದ ಜಾಗಕ್ಕೆ ಸೇರ್ತಿವೋ ಗೊತ್ತಿಲ್ಲ. ಕಾಮನ್ ಜನಕ್ಕೆ ಈ ಟ್ರಾಫಿಕ್ ಜಾಮ್ ಕಿರಿಕಿರಿ ಅಭ್ಯಾಸ ಆಗಿ ಹೋಗಿದೆ. ಆದ್ರೆ ನಗರದ ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ವೈದ್ಯರೊಬ್ಬರು ಸಕಾಲಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಕಾರಣಕ್ಕೆ ಕಾರನ್ನು ಬಿಟ್ಟು ಮೂರು ಕಿಲೋಮೀಟರ್ ಓಡಿಕೊಂಡು ಹೋಗಿಆಸ್ಪತ್ರೆ ತಲುಪಿರುವ ಘಟನೆ ನಡೆದಿದೆ.
ಡಾ. ಗೋವಿಂದ ನಂದಕುಮಾರ್ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದು ಇವರು ರೋಗಿಯೊಬ್ಬರಿಗೆ ತುರ್ತು ಲ್ಯಾಪ್ರೋಸ್ಕೋಪಿಕ್ ಗಾಲ್ ಬ್ಲಾಡರ್ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾಗಿತ್ತು. ಮನೆಯಿಂದ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ
ಹೊರಟಿದ್ದ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ. ಆ ಜಾಗದಿಂದ ಆಸ್ಪತ್ರೆ ತಲುಪಲು ಕೇವಲ 10 ನಿಮಿಷ ಸಾಕಾಗಿತ್ತು ಆದ್ರೆ ಟ್ರಾಫಿಕ್ ಕಾರಣಕ್ಕೆ ಗೂಗಲ್ ಮ್ಯಾಪ್ ನಲ್ಲಿ 45 ನಿಮಿಷ ತೋರಿಸುತ್ತಿತ್ತು.
ಇದ್ರಿಂದ ಡಾಕ್ಟರ್ ಹಿಂದೆ ಮುಂದೆ ನೋಡದೆ ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಕಾರಣಕ್ಕೆ ಚಾಲಕನಿಗೆ ಕಾರು ತರಲು ಹೇಳಿ ಕಾರು ಇಳಿದು ಓಡಿಕೊಂಡೇ ಹೋಗಿ ಆಸ್ಪತ್ರೆ ತಲುಪಿದ್ದಾರೆ. ಬಳಿಕ ನಿಗದಿತ ಸಮಯಕ್ಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.