Wednesday, July 24, 2024
spot_img
More

    Latest Posts

    ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯಕ್ತ ಆ.15: ಪುಂಜಾಲಕಟ್ಟೆಯಲ್ಲಿ ಯಕ್ಷಗಾನ


    ಬಂಟ್ವಾಳ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯಕ್ತ  ಯಕ್ಷಾಭಿಮಾನಿಗಳು ಪುಂಜಾಲಕಟ್ಟೆ  ಇದರ ವತಿಯಿಂದ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ, ಶ್ರೀ ಮುರುಘೇಂದ್ರ ವನಿತಾ ಸಮಾಜ ಪುಂಜಾಲಕಟ್ಟೆ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ, ಯಕ್ಷ ಕೂಟ ಮಧ್ವ, ಯಕ್ಷ ಧ್ರುವ ಪಟ್ಲ ಫೌಂಡೇಶನ್, ಪುಂಜಾಲಕಟ್ಟೆ ಘಟಕ, ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಇವರ ಸಹಕಾರದಲ್ಲಿ  ರಾಯಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕೇಂದ್ರ ಹಾಗೂ ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಕುಮಾರ ವಿಜಯ ಆ.15ರಂದು ಸಂಜೆ 6 ಗಂಟೆಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.


    ಬೆಳಗ್ಗೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯಲ್ಲಿ ಯೋಧ ಅಶೋಕ್ ಕುಮಾರ್ ಅವರು ಧ್ವಜಾರೋಹಣ ನಡೆಸಲಿರುವರು. ಬಳಿಕ ಭೀಷ್ಮ ಸೇನಾಧಿಪತ್ಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss