ಉಡುಪಿ: ದಿನಾಂಕ 07-08-2022 ರಂದು ರಾಜಾಂಗಣ ಪಾರ್ಕಿಂಗ್ ಬಳಿ ಇರುವ ಹೋಟೆಲ್ ಮಥುರಾ ಕಂಫರ್ಟ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು.
ಸದರಿ ಸಭೆಯಲ್ಲಿ ವಿವಿಧ ಘಟಕದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಂಘಟಣೆಯ ಅಭಿವೃದ್ಧಿ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಯಿತು ಹಾಗೂ ಗುರುತಿನ ಚೀಟಿಯ ಬಗ್ಗೆ ಚರ್ಚಿಸಿ ಎಲ್ಲರ ಸಮ್ಮತದಲ್ಲಿ ಎಲ್ಲರಿಗೂ ಅವಶ್ಯಕತೆಯಿದೆ ಎಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ಸಲಹಾಗಾರರಾದ ಸುಧಾಕರ್ ಎ. ಅಮೀನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಮೊಹಮ್ಮದ್ ಹಾರಿಸ್, ಜಿಲ್ಲಾ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣ ಕುಮಾರ್, ಜಿಲ್ಲಾ ಜೊತೆ ಕಾರ್ಯದರ್ಶಿಯಾದ ಸರ್ವೋತ್ತಮ್, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಸುಕನ್ಯ, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿಯಾದ ವಿಜಯಲಕ್ಷ್ಮಿ, ಮಹಿಳಾ ಘಟಕ ಗೌರವ ಸಲಹೆಗಾರರಾದ ಶೋಭ ಹೆಚ್. ಪಾಂಗಳ, ಮಹಿಳಾ ಘಟಕ ಜಿಲ್ಲಾ ಉಪಾಧ್ಯಕ್ಷರು ಹಾಗೂ ಕಾನೂನು ಸಲಹೆಗಾರರಾದ ನಾಗಲಕ್ಷ್ಮಿ, ಮಹಿಳಾ ಘಟಕ ಸಂಘಟನಾ ಕಾರ್ಯದರ್ಶಿಯಾದ ಶಾಂಭವಿ, ಮಹಿಳಾ ಘಟಕ ಜೊತೆ ಕಾರ್ಯದರ್ಶಿಯಾದ ಅನುಪಮ ಉಪಸ್ಥಿತರಿದ್ದರು.