ಮಂಗಳೂರು: ತುಳುವೆರೆ ಆಯನೊ ಕೊಟ ಕುಡ್ಲ (ರಿ.) ವತಿಯಿಂದ ಮಂಗಳೂರು ಪುರಭವನದಲ್ಲಿ ಪ್ರಪ್ರಥಮ ಬಾರಿಗೆ ತುಳು ಭಾಗವತಿಕೆ ಸಹಿತ ಯಕ್ಷಲೋಕದ ನಾಮಾಂಕಿತ ಕಲಾವಿದರ ಸಮಾಗಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ್ ಶೆಟ್ಟಿ ಇವರ ಸಂಯೋಜನೆಯಲ್ಲಿ “ಸಿರಿ ದೇವಿ ಮಾತ್ಮೆ” ಎಂಬ ಸಂಪೂರ್ಣ ತುಳು ಯಕ್ಷಗಾನವು ಸೆಪ್ಟೆಂಬರ್ 30ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಪ್ರವೇಶವು ಉಚಿತವಾಗಿರುತ್ತದೆ.


ಅಂದು ಸದಾಶಿವ ಶೆಟ್ಟಿ ಕನ್ಯಾನರವರಿಗೆ ತುಳುವೆರೆ ಕರ್ಣೆ ಎಂಬ ಬಿರಿದು ನೀಡಿ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಭಾಗವಹಿಸಲಿರುವರು.


