Friday, July 26, 2024
spot_img
More

    Latest Posts

    ತುಳುನಾಡು ರಕ್ಷಣಾ ವೇದಿಕೆ ಉಡುಪಿ ಘಟಕದ ಪದಾಧಿಕಾರಿಗಳ ಸಭೆ

    ಉಡುಪಿ: ತುಳುನಾಡು ರಕ್ಷಣಾ ವೇದಿಕೆ ಉಡುಪಿ ಘಟಕದ ಸಭೆ ದಿನಾಂಕ 20- 08 -2023ರಂದು ಹೋಟೆಲ್ ನೈವೇದ್ಯ ಸಭಾಂಗಣದಲ್ಲಿ ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶೆಟ್ಟಿ ಜಪ್ಪು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

    ಮುಂದಿನ ಕ್ರಿಯಾ ಯೋಜನೆ ಹಾಗೂ ಸಂಘಟನೆ ಬಲಪಡಿಸುವ ಬಗ್ಗೆ ಮಾತುಕತೆ ನಡೆದಿದ್ದು ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳನ್ನು ಪುನರ್ ರಚಿಸಲು ತೀರ್ಮಾನಿಸಲಾಯಿತು. ಹೊಸ ಘಟಕಗಳಿಗೆ ನಿಷ್ಕ್ರಿಯ ಪದಾಧಿಕಾರಿಗಳನ್ನು ಬದಲಾಯಿಸಿ ಸಕ್ರಿಯ ನಿಷ್ಠಾವಂತ ಕಾರ್ಯಕರ್ತರನ್ನು ಪದಾಧಿಕಾರಿಗಳಾಗಿ ನೇಮಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜಾ ಕೊಳಲಗಿರಿ ತಾಲೂಕ ಅಧ್ಯಕ್ಷ ಕೃಷ್ಣಕುಮಾರ್ ಗೌರವಾಧ್ಯಕ್ಷ ರವಿ ಆಚಾರ್, ಸಲಹೆಗಾರರಾದ ಸುದಕರ್, ಉಪಾಧ್ಯಕ್ಷರಾದ ಜಯ ಪೂಜಾರಿ ಗಣೇಶ್ ಮಲ್ಯ, ಪ್ರಧಾನ ಕಾರ್ಯದರ್ಶಿ ಸುನಿಲ್ ಫರ್ನಾಂಡೀಸ್ ,ರೋಶನ್, ಉಮೇಶ್ ಶೆಟ್ಟಿ,ಅನಿಲ್ ಪೂಜಾರಿ, ಮಹಿಳಾ ಮುಖಂಡರಾದ ನಾಗಲಕ್ಷ್ಮಿ, ಸುನಂದ ,ಯಶಸ್ವಿನಿ, ಹೆಲನ್ ಮತ್ತಿತರರು ಉಪಸ್ಥಿತರಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss