ಮಂಗಳೂರು: ರೈಲು ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪಚ್ಚನಾಡಿ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ಪಚ್ಚನಾಡಿ – ವಾಮಂಜೂರು ಸಂಪರ್ಕದ ರೈಲ್ವೇ ಮೇಲ್ಸೆತುವೆಯ ಬಳಿ ಈ ಘಟನೆ ಇಂದು ಬೆಳಗ್ಗೆ 11.30 ಸುಮಾರಿಗೆ ನಡೆದಿದೆ. ಮತ್ಯ್ಸಗಂಧ ರೈಲು ಡಿಕ್ಕಿ ಹೊಡೆದು ಈ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿ ಸುಮಾರು 52ವರ್ಷ ಪ್ರಾಯದವರು ಆಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ರೈಲು ಡಿಕ್ಕಿಯಾಗಿ ವ್ಯಕ್ತಿಯ ಮುಖ ಜಜ್ಜಿ ಹೋಗಿರುವುದರಿಂದ ಅವರ ಗುರುತು ಪತ್ತೆ ಇನ್ನಷ್ಟೇ ಆಗಬೇಕಿದೆ. ಸ್ಥಳಕ್ಕೆ ಆರ್ ಪಿ ಎಫ್, ಜಿ ಆರ್ ಪಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
©2021 Tulunada Surya | Developed by CuriousLabs