ಉಡುಪಿ: ನಮ ತುಳುವೆರ್ ಕಲಾ ಸಂಘಟನೆ (ರಿ.) ಮುದ್ರಾಡಿ ಉಡುಪಿ ಸಹಯೋಗದೊಂದಿಗೆ ದಿನಾಂಕ 01-01-2024ರಂದು ಎಸ್. ಆರ್. ಹಾಲ್ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರು ವಿ.ಸುನೀಲ್ ಕುಮಾರ್ ನೆರವೇರಿಸಲಿದ್ದಾರೆ.
ಅದ್ಯಕ್ಷತೆಯನ್ನು ಪ್ರಾಂಶುಪಾಲರು ಮಂಜುನಾಥ ಕೋಟ್ಯಾನ್, ಮುಖ್ಯ ಅತಿಥಿಗಳಾಗಿ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಿ ಸನ್ನಿದಿಯ ಆಡಳಿತ ಮೊಕ್ತೇಸರರು ಕೆ.ದಿವಾಕರ ಶೆಟ್ಟಿ ಯುವ ವಾಹಿನಿ ಅದ್ಯಕ್ಷರು ಅರುಣ್ ಪೂಜಾರಿ, ಮಂಜ ಭಾಗವಹಿಸಲಿದ್ದಾರೆ.
ರಿಜ್ವಾನ್ ಅಹಮ್ಮದ್, ಜಾರಪ್ಪ ಪೂಜಾರಿ, ರಮಣ ಆಚಾರ್ಯ, ಡಿ.ಆರ್ ರಾಜು, ಶ್ರೀಮತಿ ಆಯಿಷಾ ಬಾನು ಇವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧಾನ ಪುರಸ್ಕಾರ ನಡೆಯಲಿದೆ.