Monday, July 22, 2024
spot_img
More

    Latest Posts

    ಸಿದ್ದಾಪುರ- ಕುಮಟಾ ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆಗಳು ಬಂದ್

    ಶಿರಸಿ: ಭಾರಿ ಮಳೆಯಿಂದ ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತವೂ ಶುರುವಾಗಿದ್ದು ಬೆಳಕಿಗೆ ಬಂದಿದೆ’

    ಭಾನುವಾರ ರಾತ್ರಿ ಶಿರಸಿ ತಾಲೂಕಿನ ರಾಗಿ ಹೊಸಳ್ಳಿ‌ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು, ಶಿರಸಿ- ಕುಮಟಾ ನಡುವಿನ ವಾಹನ ಸಂಚಾರ ಬಂದಾಗಿತ್ತು.

    ರಸ್ತೆಯ ಮೇಲೆ ಬಿದ್ದ ಮಣ್ಣನ್ನು ತೆರವು ಮಾಡಿ ಬೆಳಗಿನ ಹೊತ್ತಿಗೆ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊರತುಪಡಿಸಿ ಬೇರೆ ವಾಹನ ಸಂಚಾರಕ್ಕೆ‌ ಅವಕಾಶವಿಲ್ಲ. ಈಗ ಸಿದ್ದಾಪುರ- ಕುಮಟಾ ರಸ್ತೆಯಲ್ಲೂ ಕುಸಿತವಾಗಿದೆ.‌

    ಬಿಳಗಿ ಸಮೀಪ ಭಾರಿ ಪ್ರಮಾಣದಲ್ಲಿ ಮಣ್ಣು‌ ಬಿದ್ದಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ತೆರವು ಮಾಡಲು ಇನ್ನೂ ಕೆಲ ತಾಸು ಬೇಕು ಎಂದು ಪಿಡಬ್ಲುಡಿ ಇಲಾಖೆ ಅಧಿಕಾರಿಗಳಿಂದ ತಿಳಿದು ಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss