ಪುತ್ತೂರು : ಅಪ್ಪ ಅಂದ್ರೆ ಆಕಾಶ ತಂದೆ ಜೊತೆಗಿದ್ದಾರೆ ಅಂದ್ರೆ ರಕ್ಷಣೆಯ ಚಿಂತಿಯೇ ಇರಲ್ಲಾ.. ಆದ್ರೆ ಎಣ್ಮೂರು ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ತಂದೆಯೇ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ತಂದೆ ನಾರಾಯಣ ನಾಯ್ಕನಿಗೆ ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಪರಾಧಿ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿದೆ.
ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರನ್ನೊಳಗೊಂಡ ನ್ಯಾಯಪೀಠ ಆರೋಪಿಗೆ 5 ವರ್ಷದ ಕಠಿಣ ಕಾರಾಗೃಹ 25 ಸಾವಿರ ರೂಪಾಯಿ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆಯನ್ನು ವಿಧಿಸಿ ಜೂನ್ 21 ರಂದು ತೀರ್ಪು ನೀಡಿದೆ.ಅದೇ ರೀತಿ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ನಾಲ್ಕು ತಿಂಗಳ ಸಾದಾ ಶಿಕ್ಷೆ, 1000 ರೂಪಾಯಿ ದಂಡ, ದಂಡ ತಪ್ಪಿದಲ್ಲಿ ಒಂದು ತಿಂಗಳು ಹೆಚ್ಚುವರಿ ಶಿಕ್ಷೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ತಿಂಗಳ ಸಾದಾ ಶಿಕ್ಷೆ 500 ರೂ ದಂಡ ವಿಧಿಸಲಾಗಿದೆ.
ಸರಕಾರದ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ್ ಅಡ್ಯಂತಾಯ ವಾದ ಮಂಡಿಸಿದ್ದರು. ಕಡಬ ತಾಲೂಕಿನ ಎಣ್ಮೂರಿನಲ್ಲಿ 2015ರ ಮೇ 24ರಂದು ಆರೋಪಿ ನಾರಾಯಣ ನಾಯ್ಕ ತನ್ನ ಪುತ್ರಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ ಇದನ್ನು ತಡೆಯಲು ಬಂದ ಪತ್ನಿಯ ಮೇಲೆ ಹಲ್ಲೆ, ಜೀವಬೆದರಿಕೆ ಒಡ್ಡಿದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
©2021 Tulunada Surya | Developed by CuriousLabs