Saturday, July 27, 2024
spot_img
More

    Latest Posts

    ಶಾಕಿಂಗ್‌ ನ್ಯೂಸ್‌: NCC ವಿದ್ಯಾರ್ಥಿಗಳಿಗೆ ಘನಘೋರ ಶಿಕ್ಷೆ

    ಮಹಾರಾಷ್ಟ್ರದ ಥಾಣೆಯಲ್ಲಿರುವ ವಿದ್ಯಾ ಪ್ರಸಾರಕ್ ಮಂಡಲ್ ಕಾಲೇಜಿನಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ತರಬೇತಿ ಪಡೆಯುತ್ತಿದ್ದ ಕೆಲ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಘಟನೆ ವರದಿಯಾಗಿದೆ. ಹಿರಿಯ ಎನ್‌ಸಿಸಿ ತರಬೇತುದಾರರು ಜೂನಿಯರ್ ವಿದ್ಯಾರ್ಥಿಗಳಿಗೆ ಕಾರ್ಪೋರಲ್ ಶೈಲಿಯಲ್ಲಿ ಥಳಿಸುವ ವೀಡಿಯೊ ಹೊರಬಂದಿದೆ. ವೀಡಿಯೊದಲ್ಲಿ ಅರ್ಧ ಡಜನ್ ಎನ್‌ಸಿಸಿ ವಿದ್ಯಾರ್ಥಿಗಳನ್ನು ಮಳೆನೀರು ಮತ್ತು ಕೆಸರು ತುಂಬಿದ ನೆಲದ ಮೇಲೆ ಮಲಗಿಸಲಾಗಿದ್ದು, ಅವರಿಗೆ ಹಿರಿಯ ತರಬೇತುದಾರರು ಮೃಗೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಭಯಭೀತರಾದ ವಿದ್ಯಾರ್ಥಿಗಳು ಅಳುವುದು ವಿಡಿಯೋದಲ್ಲಿದ್ದು, ಹೊಡೆಯದಂತೆ ಗೋಗರೆಯುವುದನ್ನು ಕಾಣಬಹುದಾಗಿದೆ. ಈ ಘಟನೆ ವೈರಲ್‌ ಆಗುತ್ತಿದ್ದಂತೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಜಿತೇಂದ್ರ ಅವದ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಈ ವಿಷಯದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ಐಎಎನ್‌ ಎಸ್‌ ಪ್ರಯತ್ನ ನಡೆಸಿದ ಹೊರತಾಗಿಯೂ ವಿದ್ಯಾಪ್ರಸಾರಕ್‌ ಮಂಡಲ ಅಧಿಕಾರಿಗಳು, ಪ್ರತಿಕ್ರಿಯೆ ನೀಡಿಲ್ಲ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss