ನವದೆಹಲಿ: ಭಾರತವು ಭಾನುವಾರ ಪ್ಯಾಲೆಸ್ಟೈನ್ ಗೆ ಎರಡನೇ ನೆರವನ್ನು ಕಳುಹಿಸಿದೆ. ಈ ಬೆಳವಣಿಗೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ದೃಢಪಡಿಸಿದ್ದು, “ನಾವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.
“ಭಾರತೀಯ ವಾಯುಪಡೆಯ ಎರಡನೇ ಸಿ 17 ವಿಮಾನವು 32 ಟನ್ ಸಹಾಯವನ್ನು ಹೊತ್ತು ಈಜಿಪ್ಟ್ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ. ಭಾರತವು ಅಕ್ಟೋಬರ್ 22 ರಂದು ಪ್ಯಾಲೆಸ್ಟೈನ್ ಗೆ ವೈದ್ಯಕೀಯ ಮತ್ತು ವಿಪತ್ತು ಪರಿಹಾರ ಸೇರಿದಂತೆ ಮೊದಲ ನೆರವನ್ನು ಕಳುಹಿಸಿದೆ.