Sunday, July 21, 2024
spot_img
More

    Latest Posts

    ನಾಟಿ ಔಷಧಿ ಸೇವಿಸುವ ಮುನ್ನ ಎಚ್ಚರ: ಔಷಧಿ ಸೇವಿಸಿ ಬಾಲಕ ಸಾವು

    ಚಿಕ್ಕಬಳ್ಳಾಪುರ: ಮಂತ್ರವಾದಿಯೊಬ್ಬ ಕೊಟ್ಟ ನಾಟಿ ಔಷಧಿ ಸೇವಿಸಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ, ಇದೇ ವೇಳೆ ಘಟನೆಯಲ್ಲಿ, ಬಾಲಕನ ತಂದೆ ಹಾಗೂ ಸಹೋದರಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರ ಪರಿಸ್ಥಿತಿ ಗಂಭಿರವಾಗಿದೆ ಅಂತ ತಿಳಿದು ಬಂದಿದೆ.

    ಗ್ರಾಮದ ಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿ ಮಗ ವೇದೇಶ್ (7) ಮೃತ ಬಾಲಕನಾಗಿದ್ದಾರೆ. ಭೋಯಿನಹಳ್ಳಿ ಗ್ರಾಮದ ಸತ್ಯನಾರಾಯಣ ಎಂಬವರ ಬಳಿ ಶ್ರೀನಿವಾಸ್ ಔಷಧಿ ಪಡೆದಿದ್ದ ಎನ್ನಲಾಗಿದ್ದು, ಔಷಧಿ ಸೇವಿಸಿದ, ಬಾಲಕ ತೀವ್ರ ಅಸ್ವಸ್ಥನಾಗಿದ್ದಾನೆ ಎನ್ನಲಾಗಿದೆ. ಬಳಿಕ ಈತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss