ಮಂಗಳೂರು: ಡಾ ವಿಕೆ ಯಾದವ್ ಸಸಿಹಿತ್ಲು ಅವರು ಬರೆದ ತುಳು ಲಿಪಿ ಮೊದಲ ಪಿಹೆಚ್ ಡಿ ಅದ್ಯಯನ ’ಮೊಗವೀರೆರ್ನ ಸಾಂಸ್ಕೃತಿಕ ಬದ್ ಕ್ ಬೊಕ್ಕ ಚಿಂತನೆ’ ಎಂಬ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವು ಆ.27ರಂದು ಭಾನುವಾರ ಬಪ್ಪನಾಡು ಶ್ರೀ ದುರ್ಗಾ ಪರಮೆಶ್ವರಿ ದೆವಸ್ಥಾನದ ಅನ್ನ ಪೂರ್ಣ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಲ್ಕಿ ಅರಮನೆ ಅರಸರಾದ ದುಗ್ಗಣ್ಣ ಸಾವಂತರು ಪಾಲ್ಗೊಳ್ಳಲಿದ್ದಾರೆ.
’ಮೊಗವೀರ ರತ್ನ’ ನಾಡೋಜ ಡಾ.ಬಿ. ಶಂಕರ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಸಂಸ್ಥಾಪಕರಾದ ಡಾ.ಎಂ ಮೊಹನ್ ಆಳ್ವ ಇವರು ಗ್ರಂಥ ಬಿಡುಗಡೆಗೊಳಿಸಲಿದ್ದಾರೆ.
ಶಶಿಹಿತ್ಲು ಭಗವತಿ ಕ್ಷೇತ್ರದ ಅನುವಂಶಿಕ ಆಡಳಿತ ಮುಖ್ಯಸ್ಥರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಇವರು ಆಶೀರ್ವಚನ ನೀಡಲಿದ್ದಾರೆ
ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್,ಯಶ್ ಪಾಲ್ ಸುವರ್ಣ,ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಸೆರಿದಂತೆ ಮತ್ತಿತರ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.