Thursday, September 19, 2024
spot_img
More

    Latest Posts

    ಮಂಗಳೂರು: ಲಿಂಬೆ ಹಣ್ಣು ಸಾಗಾಟದ ವಾಹನದಲ್ಲಿ ಟ್ರೇಗಳ ಮಧ್ಯೆ ಗಾಂಜಾ ಸಾಗಾಟ :ಇಬ್ಬರ ಬಂಧನ

    ಮಂಗಳೂರು: ಲಿಂಬೆ ಹಣ್ಣು ಸಾಗಾಟದ ವಾಹನದಲ್ಲಿ ಟ್ರೇಗಳ ಮಧ್ಯೆ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರಿಂದ 40 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಕಾಸರಗೋಡಿನ ಕಂಬಲ್ಲೂರಿನ ಶಿಹಾಬುದ್ದೀನ್ ವಿ.ವಿ ಮತ್ತು ಲತೀಫ್ ಎಂದು ಗುರುತಿಸಲಾಗಿದೆ.

    ಉರ್ವ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟೆಯವರು ಕೊಟ್ಟಾರ ಚೌಕಿ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಉಡುಪಿ ಕಡೆಯಿಂದ ಬಂದ ಬುಲೆರೋ ವಾಹನದಲ್ಲಿ ಈ ಮಾದಕ ವಸ್ತುಗಳು ಪತ್ತೆಯಾಗಿದೆ. ಪ್ಲಾಸ್ಟಿಕ್ ಟ್ರೇಗಳಲ್ಲಿ ಲಿಂಬೆ ಹಣ್ಣು ತುಂಬಿ ಅದರ ಮಧ್ಯೆ ತಲಾ ಎರಡು ಕೆಜಿ ತೂಕದ ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss