ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಕಾರ್ಕಳ ತಾಲೂಕಿನ ಕೆಲವೆಡೆ ಮನೆಗಳಿಗೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಕುಕ್ಕುಂದೂರು ಗ್ರಾಮದ ಜಲಜ ಪೂಜಾರಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಸುಮಾರು 25,000 ರೂ. ನಷ್ಟವಾಗಿದೆ.
ಇರ್ವತ್ತೂರು ಗ್ರಾಮದ ರಮೇಶ್ ಶೆಟ್ಟಿ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದೆ.ನೀರೆ ಗ್ರಾಮದ ಮೊವಿನ್ ಎಂಬವರ ವಾಸದ ಮನೆ ಬಿದ್ದು ಹಾನಿ ಸಂಭವಿಸಿದೆ.