Saturday, July 27, 2024
spot_img
More

    Latest Posts

    ಇಂದಿರಾ ಕ್ಯಾಂಟಿನ್‌ ಮತ್ತೆ ಶುರು- ಸಿಎಂ ಸಿದ್ದರಾಮಯ್ಯ ಘೋಷಣೆ

    ಬೆಂಗಳೂರು: ಇಂದಿರಾ ಕ್ಯಾಂಟಿನ್‌ ಮತ್ತೆ ಶುರು ಮಾಡುವುದರ ಬಗ್ಗೆ ಇಂದು ಚರ್ಚೆ ಮಾಡಲಿದ್ದೇವೆ, ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲಿ ಸೇರಿದಂತೆ 250 ಇಂದಿರಾ ಕ್ಯಾಂಟಿನ್‌ಗಳನ್ನು ಶುರುಮಾಡಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

    ಅವರು ಇಂದು ನಗರದಲ್ಲಿ ಸುದ್ದಿಗಾರ ಜೊತೆಗೆ ಮಾತನಾಡುತ್ತ, ಇಂದಿರ ಕ್ಯಾಂಟಿನ್‌ನಲ್ಲಿ ಜನರಿಗೆ ಲಭ್ಯವಾಗಲಿರುವ ಆಹಾರದ ಶುಚಿತ್ವ, ಮತ್ತು ಮೆನುವಿನಲ್ಲಿ ಬದಲಾವಣೆ ಮಾಡುವುದರ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ. ಇದಲ್ಲದೇ ಆಹಾರದ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅಂತ ತಿಳಿಸಿದರು. ಇನ್ನೂ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಇಂದಿರಾ ಕ್ಯಾಂಟಿನ್‌ ಅನ್ನು ಮುಚ್ಚಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss