Friday, July 26, 2024
spot_img
More

    Latest Posts

    ವಿಟ್ಲ: ಅಕ್ರಮ ಗೋಸಾಗಾಟ: ಇಬ್ಬರ ಬಂಧನ

    ವಿಟ್ಲ: ಅಕ್ರಮವಾಗಿ ಜಾನಾವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳ ಬಂಧಿಸಿ, ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಬೋಳಂತರು ಎಂಬಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಗ್ರಿ ನಿವಾಸಿ ಸಾಹೇಬ್ ಬ್ಯಾರಿ ಹಾಗೂ ಪ್ರದೀಪ್ ಸ್ವಿಕೇರಾ ಎಂಬವರನ್ನು ಬಂಧನ ಮಾಡಲಾಗಿದ್ದು ಜಾನಾವಾರುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    ವಿಟ್ಲ ಎಸ್.ಐ. ಸಂದೀಪ್ ಮತ್ತು ಅವರ ತಂಡ ರೌಂಡ್ಸ್ ನಲ್ಲಿದ್ದ ವೇಳೆ ಬೋಳಂತೂರು ಎಂಬಲ್ಲಿ ಟೆಂಪೋ ರಿಕ್ಷಾವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ.

    ನಸುಕಿನ ವೇಳೆ ಕರ್ತವ್ಯದಲ್ಲಿರುವ ಸಂದರ್ಭ ಸಂಶಯಗೊಂಡು ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಬಳಿಕ ವಾಹನ ನಿಲ್ಲಿಸಿ ತಪಾಸಣೆ ನಡಸಿದಾಗ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಮೂರು ದನಗಳನ್ನು ಕಟ್ಟಿ ಹಾಕಿ ವದೆ ಮಾಡಲು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಆರೋಪಿ ಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಗೋವಧೆ ಹಾಗೂ ಅಕ್ರಮ ಸಾಗಾಟ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss