ಬಜಪೆ : ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕೊಳ್ತಮಜಲು ಬಡಗ ಬೆಳ್ಳೂರು ನಿವಾಸಿ ತೇಜಾಕ್ಷ ಪೂಜಾರಿ(22),ಬಂಟ್ವಾಳ ತಾಲೂಕಿನ ದೇರ್ಲಕ್ಕೆ ಮೊಡಂಕಾಪು ನಿವಾಸಿ ಸಂತೋಷ ಪೂಜಾರಿ(24) ಹಾಗೂ ತೆಂಕ ಎಡಪದವು ಶಿಬ್ರಿಕೆರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ (26) ಬಂಧಿತರು. ಬಜಪೆ ಪೊಲೀಸ್ ಠಾಣೆಯ ಪಿಎಸ್ ಐ ಗುರಪ್ಪಕಾಂತಿ ಹಾಗೂ ಸಿಬ್ಬಂದಿಗಳು ಕೈಕಂಬದ ಪೊಳಲಿ ದ್ವಾರದ ಬಳಿಯ ಕಾಜಿಲ ಎಂಬಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.ಈ ವೇಳೆ ಅಡ್ಡೂರು ಕಡೆಯಿಂದ ಸ್ಕೂಟರ್ ನಲ್ಲಿ ಮೂವರು ಬರುತ್ತಿದ್ದನ್ನು ಗಮನಿಸಿ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು.ಈ ವೇಳೆ ವಾಹನವನ್ನು ನಿಲ್ಲಿಸಿ ಮೂವರು ಪರಾರಿಯಾಗಲು ಯತ್ನಿಸಿದ್ದು, ವಿಚಾರಣೆಯ ವೇಳೆ ಆರೋಪಿಗಳು ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಬಾಯ್ಬಿಟ್ಟಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು,ಆರೋಪಿಗಳಿಂದ 6000 ರೂ ಮೌಲ್ಯದ 340 ಗ್ರಾಂ ತೂಕದ ಮಾದಕವಸ್ತುಗಾಂಜಾ ಹಾಗೂ 40000 ಮೌಲ್ಯದ ಸ್ಕೂಟರ್ ನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
©2021 Tulunada Surya | Developed by CuriousLabs