Sunday, July 21, 2024
spot_img
More

    Latest Posts

    ಉಡುಪಿ: ಮೇಲ್ಚಾವಣಿಗೆ ಕಾಂಕ್ರೀಟ್ ಮಾಡಿ ಕೊಡುವುದಾಗಿ ಹೇಳಿ 1.25ಲಕ್ಷ ರೂ ವಂಚನೆ

    ಉಡುಪಿ : ಮೇಲ್ಚಾವಣಿ ಕಾಂಕ್ರೀಟ್ ಮಾಡಿ ಕೊಡುವುದಾಗಿ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    80 ಬಡಗಬೆಟ್ಟು ಗ್ರಾಮದ ಪ್ರಗತಿ ನಗರ ಎಂಬಲ್ಲಿ ಪುಟ್ಟು ನಾಯ್ಕ ಎಂಬಾತ ಮನೆಯ ಮೇಲ್ಚಾವಣಿ ಕಾಂಕ್ರೀಟ್ ಮಾಡಿ ಕೊಡುವುದಾಗಿ 2,15,000ರೂ.ಗೆ ಜು.5ರಂದು ಪ್ರಶಾಂತ್ ನಾಯ್ಕ(45) ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಶಾಂತ್ ಮತ್ತು ಅವರ ಮಿತ್ರ ಎನ್.ರಾಘವ ನಾಯ್ಕ ಒಟ್ಟು 1.25ಲಕ್ಷ ರೂ. ಹಣ ನೀಡಿದ್ದರು. ಸೆ.4ರಂದು ಮೇಲ್ಚಾವಣಿ ಮಾಡಲು ಪ್ರಾರಂಭಿಸಿ 10 ದಿನಗಳೊಳಗೆ ಮಾಡಿ ಕೊಡುವುದಾಗಿ ಪೊಲೀಸ್ ಠಾಣೆಯಲ್ಲಿ ಲಿಖಿತವಾಗಿ ನೀಡಿದ್ದರು. ಆದರೆ ಪುಟ್ಟು ನಾಯ್ಕ ಮನೆಯ ಮೇಲ್ಚಾವಣಿ ಕಾಂಕ್ರೀಟ್ ಮಾಡಿ ಕೊಡದೇ, ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದ್ದಾಗಿ ದೂರು ನೀಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss