Monday, October 21, 2024
spot_img
More

    Latest Posts

    ಪುತ್ತೂರು: ಕತ್ತಿ, ದೊಣ್ಣೆ ಹಿಡಿದು ಭಾಯ್ ಗಳಾಗೋದು ಬೇಡ – ಶಾಸಕ ಅಶೋಕ್ ರೈ

    ಪುತ್ತೂರು : ಕೈಯಲ್ಲಿ ಕತ್ತಿ,ದೊಣ್ಣೆ ಹಿಡಿದು ಭಾಯ್ ಗಳಾಗೋದು ಬೇಡ, ಸಮಾಜಮುಖಿಯಾಗಿ ಕೆಲಸ ಮಾಡಿ ಅಭಿವೃದ್ಧಿ ಹೊಂದುವುದರ ಮೂಲಕ ಭಾಯ್‌ಗಳಾಗಿ ಎಂದು ಶಾಸಕ ಅಶೋಕ್‌ ಕುಮಾರ್ ರೈ ಯುವಕರಿಗೆ ಕರೆ ನೀಡಿದ್ದಾರೆ.ಕೈಕಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕರು, ಯುವಕರು ಈ ಸಮಾಜದ ಶಕ್ತಿ. ಆದರೇ ಈಗ ಕೆಲವು ಯುವಕರಿಗೆ ಕೈಯಲ್ಲಿ ಕತ್ತಿ, ದೊಣ್ಣೆ ಹಿಡಿದರೆ ನಾವು ಭಾಯ್‌ಗಳಾಗುತ್ತೇವೆ ಎಂಬ ಸಣ್ಣ ಆಲೋಚನೆ ಮನಸ್ಸಿನಲ್ಲಿದೆ.

    ಈ ರೀತಿ ಭಾಯ್‌ಗಳಾಗುವ ಬದಲು ನೀವು ಸಮಾಜಸೇವೆ, ಸಮಾಜಮುಖಿಯಾಗಿ ಕೆಲಸ ಮಾಡಿ ಸ್ವಂತ ಅಭಿವೃದ್ಧಿ ಹೊಂದುವ ಮೂಲಕ ಭಾಯ್‌ಗಳಾಗಿ ಎಂದು ಸಲಹೆ ನೀಡಿದರಲ್ಲದೆ, ಪಕ್ಷ ಸಂಘಟನೆ ಬೇರೆಬೇರೆಯಾಗಿದ್ದರೂ ಅಭಿವೃದ್ಧಿ, ಸಮಾಜಸೇವೆ ವಿಚಾರ ಬಂದಾಗ ನಾವೆಲ್ಲರೂ ಒಂದೇ ಕೋಣೆಯೊಳಗೆ ನಿಂತು ಕೆಲಸ ಮಾಡುವ ಮನೋಭಾವ ಅಗತ್ಯ. ಈ ರೀತಿ ಸಂಘಟನೆಗಳು ಕೆಲಸ ಮಾಡಬೇಕು ಎಂದು ಹೇಳಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss