ಉಡುಪಿ:ಯುವಕನನ್ನು ತಂಡವೊಂದು ಅಪಹರಿಸಿರುವ ಘಟನೆ ಶಿರ್ವ ಪಣಿಯೂರು -ಬೆಳಪು ಮಾರ್ಗದ ಮಧ್ಯೆ ನಡೆದಿದೆ.
ಬೈಕಿನಲ್ಲಿ ಮನೆಯಿಂದ ಬೆಳಪು ಮಸೀದಿಗೆ ಹೋಗುತ್ತಿದ್ದ ಅಬ್ದುಲ್ ಖಾದರ್ ಎಂಬವರ ಮಗ ನೌಫಿಲ್(19) ಎಂಬಾತನನ್ನು ತಂಡವೊಂದು ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ ಅಪಹರಿಸಿದೆ.ಕಾರಿನಲ್ಲಿ ಬಂದ ದಾವೂದು ಇಬ್ರಾಹಿಂ ಸೇರಿದಂತೆ ನಾಲ್ಕು ಮಂದಿ ತಂಡ ಅಪಹರಿಸಿಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ. ಘಟನೆ ಜು.8ರಂದು ಮಧ್ಯಾಹ್ನ 1ಗಂಟೆಯ ವೇಳೆ ನಡೆದಿದೆ.ಆದರೆ ತಡವಾಗಿ ವರದಿಯಾಗಿದೆ.ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.