ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಇಂದಿನ ಟ್ವಿಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ !!
ಮಂಗಳೂರು : ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಒಂದಾಗಿದ್ದರೂ ಕೂಡ ತುಳುನಾಡಿನ ರಾಜಕಾರಣಿಗಳ ಹಿತಾಸಕ್ತಿಯ ಕೊರತೆಯಿಂದಾಗಿಯೋ,ಸರಕಾರದ ನಿರ್ಲಕ್ಷ್ಯ ದಿಂದಾಗಿಯೋ,ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹಾಗೂ 8 ನೇ ಪರಿಚ್ಛೇದಕ್ಕೆ ಸೇರದೇ ಉಳಿದಿದೆ ಇದರ ಪರಿಣಾಮವಾಗಿ “Tweet Tulunad” ಅಭಿಯಾನವು ಇಂದು ಬೆಳಗ್ಗೆ 6 ರಿಂದ ಆರಂಭಗೊಂಡು ರಾತ್ರಿ 12ರ ತನಕ ಟ್ವೀಟ್ ಮಾಡಬಹುದಾಗಿದೆ.
ಇಂದು ಮುಂಜಾನೆ ಆರಂಭಗೊಂಡ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ದ.ಕ,ಉಡುಪಿ,ಕಾಸರಗೋಡು,ಕೊಡಗು ಮುಂತಾದ ಜಿಲ್ಲೆಯ ತುಳುವರು ದೇಶ ವಿದೇಶಗಳಿಂದ ಟ್ವೀಟ್ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.