ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಆಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ ಇವರ ನೇತೃತ್ವದಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷರಾದ ಕೃಷ್ಣಕುಮಾರ್ ಅವರು ಸ್ವಾತಂತ್ರ್ಯ ದಿನಾಚರಣೆ ಚರಿತ್ರೆ ಬಗ್ಗೆ ಮಾತನಾಡಿದರು.
ಕಾರ್ಮಿಕರ ಘಟಕದ ಅಧ್ಯಕ್ಷರಾದ ಜಯ ಪೂಜಾರಿ ಅವರು ಎಲ್ಲರಿಗೂ ಸ್ವಾತಂತ್ರ್ಯ ಶುಭಾಶಯ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಜರುದ್ದೀನ್ ಸುಬ್ರಹ್ಮಣ್ಯ ನಗರರವರು ಸಂಘಟನೆ ಸದಸ್ಯರು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದರು.
ಸಂಘಟನಾ ಕಾರ್ಯದರ್ಶಿಯಾದ ಅನಿಲ್ ಪೂಜಾರಿ ಅವರು ಅವರ ಸ್ವಾತಂತ್ರ್ಯ ಕುರಿತು ಅನಿಸಿಕೆಯನ್ನು ಹೇಳಿದರು. ಪ್ರಮುಖರಾದ ಸುನಿಲ್ ಫರ್ನಾಂಡಿಸ್ ಹಿರಿಯರ ತ್ಯಾಗ ರಿಂದ ಪಡೆದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಯುವಕರು ಜಾಗ್ರತೆ ರಾಗಬೇಕೆಂದರು.
ಮಹಿಳಾ ಅಧ್ಯಕ್ಷರಾದ ಶೋಭಾ ಪಾಂಗಳರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹಿಳೆಯರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಕೃಷ್ಣಕುಮಾರ್,
ಪ್ರಧಾನ ಕಾರ್ಯದರ್ಶಿ ಅಜರುದ್ದೀನ್, ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಮಹಿಳಾ ಅಧ್ಯಕ್ಷರಾದ ಶೋಭಾ ಪಾಂಗಾಳ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಿಲ್ ಪೂಜಾರಿ, ಜಾಲತಾಣ ಸಂಚಾಲಕ ರೋಷನ್ ಡಿಸೋಜಾ, ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಾಸ್ಟರ್, ಕಾರ್ಮಿಕ ಯುವ ಘಟಕದ ಅಧ್ಯಕ್ಷ ರೋಶನ್ ಬಂಗೇರ, ಕಾರ್ಮಿಕ ಜೊತೆ ಕಾರ್ಯದರ್ಶಿ ಮಜೀದ್,
ಮಹಿಳಾ ಕೋಶಾಧಿಕಾರಿ ಸುನಂದ ಮೇಡಂ,
ಕಾರ್ಯಕಾರಿ ಸದಸ್ಯರಾದ ಸಾಹಬುದ್ದೀನ್, ಪ್ರೀತಮ್, ಕುಮಾರಿ ಸಂಗೀತ, ರೇಣುಕಾ, ಜ್ಯೋತಿ, ಭಾಗ್ಯಶ್ರೀ, ಸರೋಜಾ, ಪುಷ್ಪ, ಮತ್ತಿತರರು ಉಪಸ್ಥಿತರಿದ್ದರು
©2021 Tulunada Surya | Developed by CuriousLabs