ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಮಂಗಳೂರು ಹಾಗೂ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು. ಸಹಬಾಗಿತ್ವದಲ್ಲಿ ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ ಸಂಗ್ರಾಮ ತುಳುನಾಡ ಅಮರ ಸುಳ್ಯ ಸಮರ 1837 ಸಂಸ್ಮರಣೆ ವಿಜಯ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ರಸಪ್ರಶ್ನೆ ಸ್ಪರ್ಧೆ ಬಾವುಟ ಗುಡ್ಡದಲ್ಲಿ ಏಪ್ರಿಲ್ ಐದರಂದು ಬೆಳಿಗ್ಗೆ 9 ರಿಂದ ನಡೆಯಲಿದೆ. 1ರಿಂದ 4 ತರಗತಿ ರಿಂದ 7, 8 ರಿಂದ 10 ನೇ ತರಗತಿ ಹಾಗೂ ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆ ಪ್ರಥಮ ಪಿಯುಸಿ ಯಿಂದ ಅಂತಿಮ, ಪದವಿ, ಡಿಪ್ಲೋಮ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು. ಒಕ್ಕಲಿಗರ ಸೇವಾ ಸಂಘ ಎರಡನೇ ಮಹಡಿ ಒಕ್ಕಲಿಗರ ಭವನ ಶ್ರೀ ಸಾಯಿ ಬಾಬಾ ಮಂದಿರದ ಎದುರುಗಡೆ ಚಿಲಿಂಬಿ, ಲೇಡಿ ಹಿಲ್ ಮಂಗಳೂರು ದೂ. ಸಂಖ್ಯೆ -9448254396
ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ
©2021 Tulunada Surya | Developed by CuriousLabs