ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉಡುಪಿ ಶ್ರಿ ಕೃಷ್ಣ ಮಠದ ಪೇಜಾವರ ಶ್ರೀಗಳು ಆಗಮಿಸಿ, ದೇವಸ್ಥಾನದ ಜೀರ್ಣೋದ್ದಾರಕ್ಕೆ ಸಹಕಾರವನ್ನು ನೀಡುತ್ತಾರೆ ಎಂದು ಹೇಳಿದರು ಹಾಗೂ, ನಮ್ಮ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಗೌರವಧ್ಯಕ್ಷರಾಗಲು ಪೂರ್ಣ ಮನಸ್ಸಿನಿಂದ ಒಪ್ಪಿದರು, ಮತ್ತು ದೇವಸ್ಥಾನ ದ ಪರಿಸರವನ್ನು ನೋಡಿ ತುಂಬಾ ಖುಷಿಪಟ್ಟರು.
ಈ ಸಂದರ್ಭದಲ್ಲಿ ದೇವಸ್ಥಾನ ದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಿದ್ಧಾರ್ಥ ಹೆಗ್ಗಡೆ ಮತ್ತು ಪೇಜಾವರ ಮಠದ ಕಾರ್ಯದರ್ಶಿ ವಾಸುದೇವ ಭಟ್ ಹಾಗೂ ದೇವಸ್ಥಾನ ದ ಅರ್ಚಕರು ಆದ ರವೀಂದ್ರ ಭಟ್ ಮತ್ತು ಜೀರ್ಣೋದ್ದಾರ ಸಮಿತಿಯ ಸದಸ್ಯರು ಆದ ಸತೀಶ್ ಶೆಟ್ಟಿ ಬಾಣಬೆಟ್ಟು, ಗಣಪತಿ ನಾಯಕ್, ಸುಂದರ್ ಕೆಎಂಸಿ, ಸಾದು ಪೂಜಾರಿ, ರಾಮಚಂದ್ರ ನಾಯಕ್, ಸತೀಶ್ ಪೂಜಾರಿ ಕೀಳಂಜೆ, ಹರೀಶ್ ಶೆಟ್ಟಿ, ಸಂತೋಷ್, ವಿಕ್ರಾಂತ್ ಶೆಟ್ಟಿ, ಉಮೇಶ್ ಪೂಜಾರಿ, ಸುಂದರ್ ಹುಬ್ಬಳ್ಳಿ, ರತ್ನಾಕರ ಮೊಗವೀರ. ಅಶೋಕ್ ನಾಯಕ್.ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.