ಧರ್ಮಸ್ಥಳ: ಗಂಡ ಹೆಂಡತಿ ಜಗಳ ತಾರಕಕ್ಕೇರಿ ಪತ್ನಿಗೆ ಕಡಿದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ಸಮೀಪದ ಗಂಗೆತ್ಯಾರ್ನಲ್ಲಿ ನಡೆದಿದೆ.
ರಾಮಣ್ಣ ಗೌಡ ಎಂಬಾತ ಪತ್ನಿಗೆ ಕಡಿದು ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಪತ್ನಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.