Thursday, September 19, 2024
spot_img
More

    Latest Posts

    ಪುತ್ತೂರು : ಯುವಕರ ನಡುವೆ ಗಲಾಟೆ : ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆ ನಡೆಸಿ ಪರಾರಿ..!

    ಪುತ್ತೂರು : ಯುವಕರ ನಡುವೆ ಗಲಾಟೆ ನಡೆದು ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬನ್ನೂರು ಜೈನರಗುರಿ ಸಮೀಪ ನಡೆದಿದೆ.ಯುವಕರ ಗುಂಪೊಂದು ಜುಲೈ 6ರಂದು ಕುಳಿತುಕೊಂಡು ಮಾತನಾಡುತ್ತಿದ್ದ ಸಂದರ್ಭ ಇನ್ನೊಂದು ಕೋಮಿನ ಗುಂಪೊಂದು ಅಲ್ಲಿಗೆ ಆಗಮಿಸಿತ್ತು.

    ಈ ವೇಳೆ ಕ್ಷುಲ್ಲಕ ವಿಚಾರಕ್ಕಾಗಿ ಇತ್ತಂಡಗಳ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದಿದೆ.ನಂತರದ ಬೆಳವಣಿಗೆಯಲ್ಲಿ ಸ್ಥಳೀಯ ಅಂಗಡಿಯೊಂದರಲ್ಲಿದ್ದ ಕೆಲವು ಯುವಕರ ಮೇಲೆ ಇನ್ನೊಂದು ಕೋಮಿನ ಇಬ್ಬರು ಯುವಕರು ತಲವಾರಿನಿಂದ ಹತ್ಯೆ ಮಾಡಲು ಯತ್ನಿಸಿ ಪರಾರಿಯಾಗಿದ್ಧಾರೆ.

    ಘಟನೆಯ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ.ಘಟನೆಯ ಬಗ್ಗೆ ಫಯಾಝ್‌ ಎನ್ನುವವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅಭಿಜಿತ್ ಹಾಗೂ ಶರತ್ ಎಂಬವರು ತಲವಾರು ಪ್ರದರ್ಶಿಸಿ ಬೆದರಿಕೆಯೊಡ್ಡಿದ್ದಾಗಿ ಆರೋಪಿಸಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss