ಮಂಗಳೂರು ನಗರದಲ್ಲಿ ಮತ್ತೆ ಅಮಾನವೀಯ ಘಟನೆ ನಡೆದಿದೆ. ದುಷ್ಕರ್ಮಿಗಳು ಬೀದಿ ನಾಯಿಯೊಂದನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ನಗರದ ಶಿವಭಾಗ್ ಎಂಬಲ್ಲಿ ಘಟನೆ ನಡೆದಿದೆ. ಸ್ಥಳೀಯರು ಸತ್ತು ಬಿದ್ದಿದ್ದ ನಾಯಿಯನ್ನು ಗಮನಿಸಿತ್ತು. ಆ ಸಂದರ್ಭದಲ್ಲಿ ಅದರ ದೇಹದಲ್ಲಿ ಗಾಯ ಕಂಡುಬಂದಿದೆ. ಬಳಿಕ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ನಾಯಿಯ ದೇಹದೊಳಗೆ ಗುಂಡು ಪತ್ತೆಯಾಗಿದೆ. ಯಾರೋ ಕಿಡಿಗೇಡಿಗಳು ನಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ತಿಳಿದುಬಂದಿದೆ.
©2021 Tulunada Surya | Developed by CuriousLabs