Sunday, September 8, 2024
spot_img
More

    Latest Posts

    ತುರವೇ ಉಡುಪಿ ಜಿಲ್ಲಾ ವೈದ್ಯರ ಘಟಕದ ತುರ್ತು ಸಭೆ. ನೂತನ ಜಿಲ್ಲಾ ಅಧ್ಯಕ್ಷರಾಗಿ ಸಂದೀಪ್ ಸನಿಲ್ ಆಯ್ಕೆ , ವೈದ್ಯರ ತಾರತಮ್ಯ ನೀತಿ ನಿವಾರಣೆಗೆ ಆಗ್ರಹ,

    ಉಡುಪಿ: ವೈದ್ಯರ ಮೇಲಿನ ಹೊಸ ತಾರತಮ್ಯ ನೀತಿ ಖಂಡಿಸಿ
    ದಿನಾಂಕ 15- 06- 2024 ರಂದು ಶನಿವಾರ ಮಧ್ಯಾಹ್ನ 2.00 ಗಂಟೆಗೆ* ಸರಿಯಾಗಿ *ಉಡುಪಿ ಸಿಟಿ ಸೆಂಟರ್ ಸಮೀಪದ ಅಕ್ಷಯ ಟವರ್ ನಲ್ಲಿರುವ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ ಕುಂದಾಪುರ ರವರ ಅಧ್ಯಕ್ಷತೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕದ ತುರ್ತು
    ಸಭೆ ನಡೆಯಿತು. ಮುಂದಿನ ದಿನಗಳಲ್ಲಿ ಸರ್ಕಾರ ವೈದ್ಯರ ಮದ್ಯೆ ತಾರತಮ್ಯ ನೀತಿ ಮತ್ತು ಆಯುರ್ವೇದ ವೈದ್ಯರ ಮೇಲೆ ಬಲವಂತದ ಕಾನೂನು ಏರಿಕೆ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿ ಶೀಘ್ರದಲ್ಲಿ ತಾರತಮ್ಯ ನಿವಾರಣೆಗೆ ಕ್ರಮಕ್ಕೆ ಆಗ್ರಹಿಸಲು ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ನೂತನ ಉಡುಪಿ ಜಿಲ್ಲಾ ವೈದ್ಯರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂದೀಪ್ ಸನಿಲ್ ಉಡುಪಿ ರವರನ್ನು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಮಾಲೆ ಹಾಕಿ ಗೌರವಿಸಿದ್ದರು. ಪ್ರಾಸ್ತಾವಿಕ ಭಾಷಣವನ್ನು ಕೇಂದ್ರ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮಾಡಿದರು. ಧನ್ಯವಾದ ಅರ್ಪಣೆಯನ್ನು ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ಕೊಳಲಗಿರಿ ಮಾಡಿದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss