Sunday, September 8, 2024
spot_img
More

    Latest Posts

    ಉಡುಪಿ: ಯಶಸ್ವಿಯಾಗಿ ನಡೆದ ಉಡುಪಿ ಜಿಲ್ಲಾ ಮಹಿಳಾ ಘಟಕದ ಸೌಹಾರ್ದ ಸಭೆ

    ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕ ವತಿಯಿಂದ ಉಡುಪಿ ಜಿಲ್ಲಾ ಕಚೇರಿಯಲ್ಲಿ ದಿನಾಂಕ 13-07 2024 ರಂದು ಸಂಜೆ 4:30ಕ್ಕೆ ಮಹಿಳಾ ಸೌಹಾರ್ದ ಕೂಟ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮಹಿಳಾ ಅಧ್ಯಕ್ಷ ಶೋಭಾ ಪಾಂಗಳ ವಹಿಸಿದರು.

    ಪ್ರಾಸ್ತವಿಕ ಭಾಷಣ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಮಾಡಿದರು. ಉದ್ಘಾಟನೆಯನ್ನು ಮಾಡಿ ಮಾತನಾಡಿದ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ನಮ್ಮನ್ನು ದೇವರು ಯಾವುದೊ ಒಂದು ಅಗತ್ಯ ಕಾರಣಕ್ಕಾಗಿ ಈ ಭೂಮಿಗೆ ಕಳುಹಿಸಿದ್ದಾರೆ ನಾವು ನಮ್ಮಿಂದದಷ್ಟು ಇತರರಿಗೆ ಸಹಾಯ ಮಾಡುತ್ತಾ ಅನ್ಯಾಯಗೊಳಗಾದವರಿಗೆ ರಕ್ಷಣೆ ನೀಡಲು ಪ್ರಯತ್ನಿಸಬೇಕು. ಸಂಘಟಿತ ಹೋರಾಟದಿಂದ ಸರಕಾರದಿಂದ ನ್ಯಾಯೋಚಿತವಾಗಿ ಜನರಿಗೆ ಸಿಗಬೇಕಾದ ಹಕ್ಕುಗಳನ್ನು ನೀಡಲು ಪ್ರಯತ್ನಿಸಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯಲ್ಲಿ ಪ್ರಬಲ ಸಂಘಟನೆಯಾಗಿ ಜನರ ಪ್ರೀತಿ ಗಳಿಸುವಲ್ಲಿ ಮಹಿಳಾ ಕಾರ್ಯಕರ್ತರು ಪ್ರಯತ್ನಿಸುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್, ಕಾರ್ಮಿಕರ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ , ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ , ಗುಲಾಬಿ, ಗುಣವತಿ ಇದ್ದು ಅಭಿಪ್ರಾಯ ಮಂಡಿಸಿದರು.


    ಜಿಲ್ಲಾ ಕಾರ್ಮಿಕ ಉಪಾಧ್ಯಕ್ಷ ಕುಶಲ್ ಅಮೀನ್,
    ಜ್ಯೋತಿ , ಲಕ್ಷ್ಮಿ ಆದಿ ಉಡುಪಿ , ಶಾಂಭವಿ ಕಟಪಾಡಿ, ನಿರ್ಮಲ ಮೆಂಡನ್, ಲಕ್ಷ್ಮಿಬಾಯಿ , ವಸಂತಿ , ಸಂಗೀತ ಶೆಟ್ಟಿ ಹಿರಿಯಡ್ಕ , ಮುತ್ತು ಬೀರಪ್ಪ ಮಾದ್ಯಮ ಘಟಕ ಮುಖಂಡರುಗಳಾದ ಬ್ರಿಜೇಶ್ , ತನ್ವೀರ್ , ಬಾಲಚಂದ್ರ ಮತ್ತಿತರರ ಗಣ್ಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಭೆಯನ್ನು ಚಂದಗಾಣಿಸಿಕೊಟ್ಟರು. ಸಭೆಯಲ್ಲಿ ಹಲವಾರು ನೂತನ ಸದಸ್ಯರು ಸೇರ್ಪಡೆ ಗೊಂಡರು. ಮಹಿಳಾ ಜಿಲ್ಲಾ ಕೋಶಾಧಿಕಾರಿ ಸುನಂದ ಕೋಟ್ಯಾನ್ ಧನ್ಯವಾದ ಅರ್ಪಣೆ ಗೈದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss