- ಕೃಷ್ಣಾಪುರ ಉಸ್ತಾದ್ ಮೇಲಿನ ಹಲ್ಲೆ ಖಂಡನೀಯ; ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ: ಇಕ್ಬಲ್ ಮೂಲ್ಕಿ ಆಗ್ರಹ
- ಕೃಷ್ಣಾಪುರ ಉಸ್ತಾದ್ ಮೇಲಿನ ಹಲ್ಲೆ ಖಂಡನೀಯ; ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ: ಇಕ್ಬಲ್ ಮೂಲ್ಕಿ ಆಗ್ರಹ
- ಜುಲೈ 12ರಂದು ಸುಳ್ಯದಲ್ಲಿ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖ ಪದಾಧಿಕಾರಿಗಳ ಸಭೆ
- ಪುತ್ತೂರು ಆಘಾತ ಸುದ್ದಿ: ಕಂಬಳ ಲೋಕದ ಖ್ಯಾತ ವೀಕ್ಷಕ ವಿವರಣೆಗಾರ ನಿರಂಜನ್ ರೈ ಮಠಂತಬೆಟ್ಟು ಹೃದಯಾಘಾತದಿಂದ ನಿಧನ
- ಹಿರಿಯಡ್ಕ ರೆಸಾರ್ಟ್ನಲ್ಲಿ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ; 26 ಮಂದಿ ವಶಕ್ಕೆ
- ಗ್ರಾಮ ಪಂಚಾಯತ್ ಚುನಾವಣೆಗೆ ವೇಗ; ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಸಿದ್ಧತೆ, ಕೆಲವೇ ತಿಂಗಳಲ್ಲಿ ಚುನಾವಣೆ ?
- ಹೆಬ್ರಿ ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ತೀವ್ರ: ಖಾಲಿ ಹುದ್ದೆಗಳ ಭರ್ತಿಗೆ ಜಿಲ್ಲಾಧಿಕಾರಿಗಳಿಗೆ ಜೆಡಿಎಸ್ ಮನವಿ
- ವೆನ್ಲಾಕ್ ಕ್ಯಾಥ್ ಲ್ಯಾಬ್ನ ಯಶೋಗಾಥೆ ಒಂದು ದೃಷ್ಟಿಯಿಂದ ಜೀವ ರಕ್ಷಕ ಮೈಲಿಗಲ್ಲಿನವರೆಗೆ…ಕೆಎಂಸಿ ಸಹಭಾಗಿತ್ವದ PPP ಮಾದರಿಯಲ್ಲಿ 1,000ಕ್ಕೂ ಅಧಿಕ ಯಶಸ್ವಿ ಹೃದಯ ಚಿಕಿತ್ಸೆಗಳು; ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವಮಟ್ಟದ ಸೇವೆಗೆ ಹೊಸ ಅಧ್ಯಾಯ
Author: Tulunada Surya
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ-ನಿರ್ದೇಶಕರು, ಬಂಟರ ಸಂಘ ಮುಂಬೈ ಇದರ ಟ್ರಸ್ಟಿ, ರಾಕ್ಷಿ ದೇವಲಪರ್ಸ್ ಪ್ರೈ. ಲಿ.ಮುಂಬೈ ಇದರ ಸಿ. ಎಂ. ಡಿ. ಹಾಗೂ ಅತ್ತೂರು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರು ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಕೊಡುಗೈ ದಾನಿ ಅತ್ತೂರು ಭಂಡಾರಮನೆ ಶ್ರೀ ರಾಜೇಶ್ ಎನ್. ಶೆಟ್ಟಿಯವರ ಮಾತೃಶ್ರೀಯವರು ಮಾನವೀಯತೆಯ ಸಾಕಾರ ಮೂರ್ತಿ,ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಸರ್ವರಿಗೂ ಪ್ರೀತಿಪಾತ್ರರಾದ ಅತ್ತೂರು ಭಂಡಾರಮನೆ ಆಶಾಲತಾ ನಾರಾಯಣ್ ಶೆಟ್ಟಿಯವರ 80ನೇ ವರ್ಷದ ಜನ್ಮದಿನದ ಸಂಭ್ರಮಕ್ಕೆ ಒಕ್ಕೂಟದ ಪರವಾಗಿ ಶ್ರೀ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹೂ ಗುಚ್ಛ ನೀಡಿದರು ದೇವರು ಶತಾಯುಷ್ಯ ಆರೋಗ್ಯಭಾಗ್ಯ ಕೊಟ್ಟು ಸದಾ ಕಾಪಾಡಲಿ ಎಂದು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ , ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ , ಗೌರವ ಕಾರ್ಯದರ್ಶಿಯಾದಜಯಕರ್ ಶೆಟ್ಟಿ ಇಂದ್ರಾಳಿ ,ಕೋಶಾಧಿಕಾರಿಉಳ್ತೂರು ಮೋಹನದಾಸ್ ಶೆಟ್ಟಿ ,ಜೊತೆ -ಕಾರ್ಯದರ್ಶಿಚಂದ್ರಹಾಸ್ ಡಿ. ಶೆಟ್ಟಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು.…
ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಭಾರೀ ಮೇಘಸ್ಫೋಟ ಮತ್ತು ಭೂಕುಸಿತ ಸಂಭವಿಸಿ, ಗಂಗೋತ್ರಿ ಧಾಮಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನೇಕರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಉತ್ತರಾಖಂಡ್ನ ಉತ್ತರಕಾಶಿಯಲ್ಲಿ ಭಾರೀ ಮೇಘಸ್ಪೋಟ ಸಂಭವಿಸಿದ್ದು, ಇದರ ಬೆನ್ನಲ್ಲಿಯೇ ಭೂಕುಸಿತವಾಗಿದೆ. ಇದರಿಂದಾಗಿ ಧರಾಲಿ ಎನ್ನುವ ಗ್ರಾಮ ಸಂಪೂರ್ಣವಾಗಿ ನಿರ್ನಾಮವಾಗಿದೆ. ಮೇಘಸ್ಫೋಟದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಆರ್ಯ ಮಾತನಾಡಿದ್ದು, ಹರ್ಸಿಲ್ ಬಳಿಯ ಧರಾಲಿಯಲ್ಲಿ ದೊಡ್ಡ ಮೋಡ ಸ್ಫೋಟ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ಧಾವಿಸುತ್ತಿವೆ. ಸೇನೆಯನ್ನೂ ಕರೆಸಲಾಗಿದೆ ನೀರು ತುಂಬಿಕೊಂಡು ಕೆಸರಿನ ಮಣ್ಣು ಗ್ರಾಮಕ್ಕೆ ನುಗ್ಗಿದ್ದು, ಅನೇಕ ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಾವುನೋವುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಂದಾಜಿನ ಪ್ರಕಾರ 65 ಮಂದಿ ಜಲಸಮಾಧಿಯಾಗಿರುವ ಸಾಧ್ಯತೆ ಇದೆ “ಧರಾಲಿ (ಉತ್ತರಕಾಶಿ) ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾದ ಭಾರೀ ಹಾನಿಯ ಸುದ್ದಿ ಅತ್ಯಂತ ದುಃಖಕರವಾಗಿದೆ. ಎಸ್ಡಿಆರ್ಎಫ್, ಎನ್ಡಿಆರ್ಎಫ್, ಜಿಲ್ಲಾಡಳಿತ ಮತ್ತು…
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ “ಆಟಿದ ಪೊರ್ಲು” ಮತ್ತು ಅಭಿನಂದನಾ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ವೇದಿಕೆಯನ್ನು ದನಗಳನ್ನು ಕಟ್ಟಲಾಗಿರುವ ಸಾಂಪ್ರದಾಯಿಕ ಹಟ್ಟಿಯ ಸ್ವರೂಪದಲ್ಲಿ ನಿರ್ಮಿಸಲಾಗಿತ್ತು. ಭತ್ತದ ಪೈರು ಹೊಡೆಯುವ ಪಡಿ ಮಂಚಕ್ಕೆ ಪೊಲಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತಾಡಿದ ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ನಿಟ್ಟೆಗುತ್ತು ರವಿರಾಜ್ ಶೆಟ್ಟಿ ಅವರು, “ಬಂಟ ಸಮುದಾಯದ ಯುವಕರು ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಬಂಟರ ಸಂಘ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖುಷಿಯ ವಿಚಾರ. ಕಾರ್ಯಕ್ರಮ ಯಶಸ್ವಿಯಾಗಲಿ“ ಎಂದರು. ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು ಮಾತಾಡಿ, ”ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ಸಂತಸದ ವಿಷಯ. ಆಟಿ ತಿಂಗಳ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇಲ್ಲಿ ನಿರ್ಮಾಣವಾದ ಸುಂದರ ವೇದಿಕೆ ಕಾರ್ಯಕ್ರಮದ ಸೊಬಗನ್ನು…
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಯ ಲಿಪಿಕ ನೌಕರರ / ವಾಹನ ಚಾಲಕ ಮತ್ತು ಗ್ರೂಪ್ ಡಿ ನೌಕರರ ಸಂಘ (ರಿ ) ಜಿಲ್ಲಾ ಶಾಖೆ ಮಂಗಳೂರು ಇದರ ಸಹ ಕಾರ್ಯದರ್ಶಿ ಯಾಗಿ ಅವಿರೋಧವಾಗಿ ” ಸಮಾಜ ಸೇವಕ” ” ಕಲಾ ರತ್ನ” “ಕಲಾ ತಿಲಕ ” “ಪ್ಲಾಸ್ಮಾ ದಾನಿ” ಶ್ರೀ ಯು. ಆರ್. ಶೆಟ್ಟಿ ಆಯ್ಕೆಯಾಗಿದ್ದಾರೆ
ಸರಕಾರಿ ಪದವಿ ಪೂರ್ವ ಕಾಲೇಜು( ಪ್ರೌಢ ಶಾಲಾ ವಿಭಾಗ) ಮಣಿನಾಲ್ಕೂರು ಬಂಟ್ವಾಳ ತಾಲೂಕುಹಸಿರು ಮಣಿ ಇಕೋಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ -ರೋಟರಿ ಕ್ಲಬ್ ಬಂಟ್ವಾಳ ಇವರ ಸಹಯೋಗದೊಂದಿಗೆ ವಿದ್ಯಾರ್ಥಿ ಗಳಿಗೆ ಕೃಷಿ ಯ ಮಹತ್ವದ ಬಗ್ಗೆ ತಿಳಿಸುವ ದೃಷ್ಟಿಯಿಂದ ಕಾರ್ಯಕ್ರಮ ಸಂಯೋಜಿಸಲಾಯಿತು. ಮುಂದಿನ ದಿನಗಳಲ್ಲಿ ಯುವ ಜನಾಂಗ ಕೃಷಿ ಮೂಲಕ ಆಹಾರ ತಯಾರಿಸುವ ಅಗತ್ಯತೆ ಆಹಾರ ಕೊರತೆ ಸಮಾಜದಲ್ಲಿ ಕಾಡದಿರಬೇಕಾದರೆ ಕೃಷಿ ಉಳಿಸಿ ಬೆಳೆಸುವುದು ಬಹಳ ಪ್ರಾಮುಖ್ಯತೆ ಯಾಗಿದೆ. ವಿದ್ಯಾರ್ಥಿಗಳು ಬಾರತ್ಯಾರು ಗೋಪಾಲ ಶೆಟ್ಟಿ ಯವರ ಗದ್ದೆಯಲ್ಲಿ ಭತ್ತನಾಟಿ ಕಾರ್ಯದಲ್ಲಿ ಪಾಲ್ಗೊಂಡು ಹರ್ಷ ಪಟ್ಟರು. ಉತ್ತಮ ವ್ಯವಸ್ಥೆ ಮಾಡಿಕೊಟ್ಟ ಗೋಪಾಲ್ ಶೆಟ್ಟಿ ಬಾರತ್ತ್ಯಾರು, ಎಸ್ ಡಿ ಎಂ. ಸಿ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬಾರತ್ತ್ಯಾರು ಮತ್ತು ರಾಜೇಶ್ ಶೆಟ್ಟಿ , ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ನಾರಾಯಣ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಉಪಾದ್ಯಕ್ಷರಾದ ಅಶೋಕ್ ಶೆಟ್ಟಿ ಕೋಡಿಮಾರು ಹಾಗೂ ಸಹಕರಿಸಿದ ಶ್ರೀಮತಿ ಗುಣವತಿ, ನಮ್ಮ ಶಾಲಾ…
ಬಂಟರ ಸಂಘ ಕಾವಳಕಟ್ಟೆ ವಲಯಪದಗ್ರಹಣ ಆಟಿದ ಕೂಟ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಇಂದು ಕೆದ್ದಳಿಕೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ತುಕಾರಾಂ ಶೆಟ್ಟಿ, ನಿವೃತ್ತ ಪಶುಪಾಲನ ಕಾರ್ಯಕರ್ತರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ವಾಮದಪದವು ವಲಯದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಕೇದಗೆ ಮತ್ತು ಉಪಾಧ್ಯಕ್ಷರಾದ ಯಶೋಧರ್ ಶೆಟ್ಟಿ ದಂಡೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದಶ್ರೀ ಸೀತಾರಾಮ್ ಶೆಟ್ಟಿ ಸೇವಾ ಉಪಸ್ಥಿತರಿದ್ದರು. ವಲಯದ ಅಧ್ಯಕ್ಷರಾದ ಶ್ರೀ ಮೋಹನ್ ಶೆಟ್ಟಿ ನರ್ವಲ್ದಡ್ಡ, ಗೌರವಾಧ್ಯಕ್ಷರಾದ ಜಗನ್ನಾಥ್ ಶೆಟ್ಟಿ ಕೆದ್ದಳಿಕೆ ,ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ ಬಿಯಂತಬೆಟ್ಟು, ಲೋಕನಾಥ್ ಶೆಟ್ಟಿ ಬಂಗೇರಕೆರೆ, ಸದಾನಂದ ಪೂಂಜಾ ದೈಕಿನಕಟ್ಟೆ, ಪ್ರಕಾಶ್ ವಿ ಶೆಟ್ಟಿ ಮಧ್ವ, ಸುಂದರ್ ಶೆಟ್ಟಿ ಶಾಂತಿ ನಿಲಯ, ಯುವ ವಿಭಾಗದ ಅಧ್ಯಕ್ಷರಾದ ಕಿಶೋರ್ ಕುಮಾರ್ ರೈ, ಉಷಾ ಪ್ರಕಾಶ್ ಶೆಟ್ಟಿ ಮಧ್ವ ಕಾಡಬೆಟ್ಟು ಹಾಗೂ ವಲಯದ ಪ್ರಮುಖರು ಭಾಗವಹಿಸಿದ್ದರು.ಕಾರ್ಯಕ್ರಮದ ನಿರೂಪಣೆ ಯನ್ನು ನಾಗೇಶ್ ರೈ ಬೆಂಗತ್ತೋಡಿ, ಗಣೇಶ್ ಶೆಟ್ಟಿ ಸೇವಾ ನಡೆಸಿಕೊಟ್ಟರು.ಪ್ರಾರ್ಥನೆಯನ್ನು ಕು.…
ಮಂಗಳೂರು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ಮಂಗಳಾದೇವಿ ಬಳಿಯ “ಕಾಂತಿ ಚರ್ಚ್ ಹಾಲ್ ನಲ್ಲಿ ಇಂದು ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಪಾಂಡೇಶ್ವರ ಉಪ ಪೋಲಿಸ್ ನೀರಿಕ್ಷಕರಾದ ಮಾರುತಿ.ಪಿ ಯವರು ನೆರವೇರಿಸಿದರು. ಬಳಿಕ ಮಾತನಾಡಿದ ಡಾ.ಅರುಣ್ ಉಳ್ಳಾಲ್ ರವರು ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಹೊತ್ತು ಆಟಿ ತಿಂಗಳು ಮತ್ತೆ ಬಂದಿದೆ.ಆಟಿ ತಿಂಗಳು ಎಂದರೆ ಸುಮಾರು ಜುಲೈ ತಿಂಗಳಿನಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಂದು ಶುರುವಾಗಿ ಮುಂದಿನ ಸಿಂಹ ಸಂಕ್ರಮಣದ ವರೆಗೆ. ತುಳು ನಾಡಿನ ಜನರಿಗೆ ಪ್ರತಿಯೊಂದು ತಿಂಗಳು ವಿಶಿಷ್ಟವೇ ವಿಶೇಷವೇ. ಆಟಿ ತಿಂಗಳು ಕೂಡ ಒಂದು ರೀತಿಯಲ್ಲಿ ಪವಿತ್ರವೇ. ಯಾಕೆಂದರೆ ಹಬ್ಬಗಳು ಆರಂಭವಾಗುವುದು ಆಟಿ ತಿಂಗಳ ಆಟಿ ಅಮಾವಾಸ್ಯೆಯಿಂದಲೇ.ಆರ್ಟಿ ತಿಂಗಳಲ್ಲಿ ಕಷ್ಟದ ತಿಂಗಳಾದರೂ ಅದು ಇಷ್ಟದ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ಅಂದರೆ ಒಂದೇ ಸವನೆ ಮಳೆ ಸುರಿಯುತ್ತಿತ್ತು .ಹಾಗಾಗಿ ಆಟಿ ತಿಂಗಳು ಹೇಗಿರುತ್ತದೋ ಎಂಬ ಭಯ ಜನರನ್ನು ಮೊದಲೇ ಕಾಡುತ್ತಿತ್ತು.ಸುರಿಯುವ ಮಳೆ…
ರಾಷ್ಟ್ರಮಟ್ಟದ ಮಾಸ್ಟರ್ಸ್ ಪುರುಷರು ಮತ್ತು ಮಹಿಳೆಯರು ಕ್ಲಾಸಿಕ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್-2025 02 ರಿಂದ 07 ರವರೆಗೆ ಕೋಝಿಕ್ಕೋಡ್ನ ಕೇರಳ ವಿ.ಕೆ. ಕೃಷ್ಣ ಮೆನನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ 66 ಕೆಜಿ ವಿಭಾಗದ ಮಾಸ್ಟರ್ 1 ವಿಭಾಗದಲ್ಲಿ ಒಟ್ಟು 480 ಕೆಜಿ ಭಾರವನ್ನು ಎತ್ತಿ 1ಚಿನ್ನ 2 ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. ಹಾಗೂ ರಾಷ್ಟ್ರಮಟ್ಟದ ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ 222.5 ಬಾರವನ್ನು ಎತ್ತಿ 5ನೇ ರಾಷ್ಟ್ರೀಯ ನೂತನ ದಾಖಲೆ ಸ್ಥಾಪಿಸುತ್ತಾರೆ. ಹಾಗೂ ತನ್ನ ದಾಖಲೆ ತಾನೇ 4ನೇ ಬಾರಿಗೆ ಮುರಿದ ಹೆಗ್ಗಳಿಕೆ ಡಾ.ಸತೀಶ್ ಖಾರ್ವಿ ಅಂತರಾಷ್ಟ್ರೀಯ ಪವರ್ ಲಿಫ್ಟಿರ್ ಕ್ರೀಡಾಪಟು ಇವರು ನ್ಯೂ ಹರ್ಕ್ಯುಲೇಸ್ ಜಿಮ್ ನ ಹಾಗೂ ಕುಂದಾಪುರ ಘಟಕದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾಗಿರುತ್ತಾರೆ. 2019 ನೇ ವರ್ಷದಲ್ಲಿ 210 ಕೆಜಿ, ಬಾರವನ್ನೆತ್ತಿ ದಾಖಲೆ, 2021 ನೇ ವರ್ಷದಲ್ಲಿ 217.5 ಕೆ.ಜಿ ಭಾರವನೆತ್ತಿ ದಾಖಲೆ, 2022 ನೇ ವರ್ಷದಲ್ಲಿ 220 ಕೆ.ಜಿ ಭಾರವನೆತ್ತಿ ದಾಖಲೆ, 2023 ನೇ ವರ್ಷದಲ್ಲಿ…
ಬೆಂಗಳೂರು, ಆಗಸ್ಟ್ 3, 2025 — ಒಕಿನಾವನ್ ಶೋಟೋಕಾನ್ ಕರಾಟೆ ಚಾಂಪಿಯನ್ಶಿಪ್ 2025 ಅನ್ನು ಆಗಸ್ಟ್ 3ರಂದು ಯಲಚೆನಹಳ್ಳಿ ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನಲ್ಲಿ ಅಂತರ್ ಶಾಲಾ ಸ್ಪರ್ಧೆಯು ಆಯೋಜಿಸಲಾಯಿತು. ಈ ಸ್ಪರ್ಧೆಯಲ್ಲಿ, ಮಿತ್ತಬಾಗಿಲು ಗ್ರಾಮದ, ಆಚಾರಿಬೆಟ್ಟು ಮನೆಯ “ಶ್ರೀಯುತ ಟಿಲ್ಲರ್ ಡಿಕಯ್ಯ ಗೌಡ”ರ ಮೊಮ್ಮಕ್ಕಲಾದ, ಬೆಂಗಳೂರು ನಗರದಲ್ಲಿ ವಾಸವಾಗಿರುವ ‘ವಿನಯಚಂದ್ರ’ ರವರ ಅವಳಿ ಮಕ್ಕಳಾದ “ಎ. ವಿಭಾಷ್ ವಿನಯಚಂದ್ರ” ಮತ್ತು “ಎ. ವಿಭಾ ವಿನಯಚಂದ್ರ” ಅವರು ಪ್ರಭಾವಶಾಲಿ ಪ್ರದರ್ಶನ ನೀಡಿದ್ದು, ತಲಾ ಎರಡು ಪದಕ ಮತ್ತು ಟ್ರೋಪಿಗಳನ್ನು ಗೆಲ್ಲುವ ಮೂಲಕ ಟೂರ್ನಮೆಂಟ್ ಟ್ರೋಫಿಯನ್ನು ಪಡೆದಿದ್ದಾರೆ. ಇವರಿಗೆ ರಾಜೇಂದ್ರ ಬಾಬು ಮತ್ತು ಗೀತಾ ಎಂಬ ತರಬೇತಿದಾರರ ಮಾರ್ಗದರ್ಶನ ಲಭಿಸಿದೆ. ವಿಭಾಷ್ ಮತ್ತು ವಿಭಾ ಇಬ್ಬರೂ ಜೆ.ಪಿ.ನಗರದ ಸನ್ ಜುಪಿಟರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇವರ ಕರಾಟೆ ಸಾಧನೆಯು ಶಾಲೆಯು ಹಾಗೂ ತರಬೇತಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರವಾಗಿದೆ. ಇವರ ತಂದೆ “ಶ್ರೀಯುತ. ವಿನಯಚಂದ್ರ” ಕರ್ನಾಟಕ ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು,…
ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಅಂದರ್ ಬಾಹರ್ ಸ್ಥಳ ದಲ್ಲಿ ಆಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಸಾರಾಂಶ : ಬ್ರಹ್ಮಾವರ ಪೊಲಿಸ್ ಠಾಣಾ ಸರಹದ್ದಿನ ವಾರಂಬಳ್ಳಿ ಗ್ರಾಮದ ಓಝೋನ್ ಲಾಡ್ಜನ 2 ನೇ ಮಹಡಿಯ ರೂಮ್ ಒಂದರಲ್ಲಿನ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟದ ಅಡ್ಡೆಗೆ ಬ್ರಹ್ಮಾವರ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರು ಧಾಳಿ ನಡೆಸಿ 1)ಗೋಪಾಲ ನಾಯ್ಕ, ಕುಳ್ಳಂಜೆ ಗ್ರಾಮ, ಕುಂದಾಪುರ, 2) ರಮೇಶ್, ಕಾವೂರು ಗ್ರಾಮ, ಮಂಗಳೂರು, 3) ಅಭಿಲಾಷ, ಕಾವೂರು ಗ್ರಾಮ, ಮಂಗಳೂರು 4) ವಿಕ್ರಮ್, ಕಾವೂರು ಗ್ರಾಮ, ಮಂಗಳೂರು, 5) ರತ್ನಾಕರ ಶೆಟ್ಟಿ, ಕೊರ್ಗಿ ಗ್ರಾಮ, ಕುಂದಾಪುರ, 6) ಮೊಹಮ್ಮದ್ ಹುಸೇನ್, ಮಣಿಪಾಲ, ಉಡುಪಿ ಎಂಬುವವರನ್ನು ವಶಕ್ಕೆ ಪಡೆದಿದ್ದು, ಆಟಕ್ಕೆ ಬಳಸಿದ ನಗದು ರೂ. 2,38,000/-, ಆರೋಪಿತರ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
