Author: Tulunada Surya

ಮಂಗಳೂರು: ‘ಸಮಾಜದ ಸಂಕಷ್ಟದ ಸಮಯದಲ್ಲಿ ಸ್ವಯಂ ಸ್ಫೂರ್ತಿಯಿಂದ ಮುನ್ನುಗ್ಗಿ ಕಾರ್ಯಪ್ರವೃತ್ತರಾಗುವ ತೀರಾ ಅಪರೂಪದ ವ್ಯಕ್ತಿಗಳಲ್ಲಿ ದಿ| ಜಲಂಧರ ರೈ ಪ್ರಮುಖರು. ಅವರು ಓರ್ವ ನಿಸ್ಪೃಹ ಸರ್ವ ಸಮರ್ಪಿತ ಕಾರ್ಯಕರ್ತ. ಕಾರ್ಕಳದ ಅಜೆಕಾರು ಮತ್ತು ಕೋಟೆಕಾರಿನ ಆನಂದಾಶ್ರಮ ಪ್ರೌಢ ಶಾಲೆಗಳಲ್ಲಿ ಜನಮನ ಗೆದ್ದ ಅಧ್ಯಾಪಕರಾಗಿ, ಸಾಮಾಜಿಕ ಸಂಘಟಕರಾಗಿ, ಕ್ರೀಡಾ ತರಬೇತುದಾರರಾಗಿ, ಯಕ್ಷಗಾನ ಕಲಾವಿದರಾಗಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹುಮುಖೀ ಸಾಧಕರಾಗಿ ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದ ಅವರು ನಾಡಿನಾದ್ಯಂತ ಸಂಚರಿಸಿದ ಧೀಮಂತ ನಾಯಕ; ಶ್ರೇಷ್ಠ ಮಾನವತಾವಾದಿ’ ಎಂದು ದಿ| ಜಲಂಧರ ರೈ ಅವರ ನಿಕಟವರ್ತಿ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೀರಿ ಕೋಟೆಕಾರ್ ಮತ್ತು ಶ್ರೀ ಗಣೇಶ ಭಜನಾ ಮಂದಿರ ಬೀರಿ ಆಶ್ರಯದಲ್ಲಿ ಆನಂದಾಶ್ರಮ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಹಿತೈಷಿಗಳ ಸಹಕಾರದೊಂದಿಗೆ ದಿ| ಎಸ್.ಜಲಂಧರ ರೈ ಅವರ 25 ನೇ ವರ್ಷದ ಪುಣ್ಯ ಸ್ಮರಣೆಗಾಗಿ ಸಂಕೊಳಿಗೆಯ ಶಕ್ತಿ ಮೈದಾನದಲ್ಲಿ…

Read More

ತುಳುನಾಡ ರಕ್ಷಣಾ ವೇದಿಕೆ (ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರು ಯೋಗಿಶ್ ಶೆಟ್ಟಿ ಜಪ್ಪು ಅವರು,ಬೆಂಗಳೂರು ತುಳುಕೂಟ (ರಿ) ಅಧ್ಯಕ್ಷರಾದ ಶ್ರೀ ಸುಂದರರಾಜ ರೈ ಅವರ ನಿಧನಕ್ಕೆ ಆಳವಾದ ಸಂತಾಪ ಸೂಚಿಸಿದ್ದಾರೆ. ಶ್ರೀ ಸುಂದರರಾಜ ರೈ ಇವರು ಇಂದು ನಮ್ಮನ್ನಗಲಿರುವುದು ತುಂಬಾ ದುಃಖದ ಸಂಗತಿ.ಅವರು ಬೆಂಗಳೂರು ಕಂಬಳದ ಯಶಸ್ಸಿಗಾಗಿ ಅಪಾರ ಶ್ರಮವಹಿಸಿ, ತುಳು ಭಾಷೆ ಮತ್ತು ಕರಾವಳಿ ಭಾಗದ ಆಚಾರ–ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ನಾವು ಜನಪರವಾಗಿ ನಿಲ್ಲುವ, ಜನಮನ ಗೆದ್ದ ನಿಜವಾದ ಕ್ರಿಯಾಶೀಲ ನಾಯಕನನ್ನು ಕಳೆದುಕೊಂಡಿದ್ದೇವೆ.ಅವರು ತುಳು ಹಾಗೂ ಕರಾವಳಿ ಪ್ರದೇಶದ ಜನರ ಹಕ್ಕುಗಳು, ಭಾವನೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸದಾ ಧ್ವನಿಯಾಗಿದ್ದರು.ಅವರ ಧೈರ್ಯ, ಸೇವಾಭಾವ ಮತ್ತು ನಿಸ್ವಾರ್ಥ ಹೋರಾಟ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಶ್ರೀ ಸುಂದರರಾಜ ರೈ ಅವರ ನಿಧನವು ಅತ್ಯಂತ ದುಃಖವನ್ನು ತಂದಿದ್ದು,ಅವರ ಕುಟುಂಬದವರು ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಯೋಗಿಶ್ ಶೆಟ್ಟಿ…

Read More

ಮಣಿಪಾಲ, ಅಕ್ಟೋಬರ್ 21 – ಮಸಾಜ್ ಪಾರ್ಲರ್‌ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಮಣಿಪಾಲ ಪೊಲೀಸರು ಕೊಡುಗೆ ನೀಡಿದ್ದಾರೆ. ಬಾಡಿ ಮಸಾಜ್ ಹೆಸರಿನಲ್ಲಿ ಮಹಿಳೆಯರನ್ನು ಬಳಸಿಕೊಂಡು ಅಕ್ರಮ ಲಾಭ ಗಳಿಸುತ್ತಿದ್ದೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು: ಇಮ್ರಾನ್ ಜೈಬಾಯ್ ಅಲಿಯಾಸ್ ಎಲಿಸಾ ದಾಳಿಯಲ್ಲಿ ನೊಂದ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದು, ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಭಾರತ ದಂಡ ಸಂಹಿತೆ 143 BNS ಕಲಂ, ಹಾಗೂ ITP (Immoral Traffic Prevention) ಕಾಯ್ದೆ ಅಡಿಯಲ್ಲಿ 3, 4, 5 ಮತ್ತು 6ನೇ ಸೆಕ್ಷನ್‌ಗಳು ಅನ್ವಯಿಸಲಾಗಿದೆ. ಮುಖ್ಯ ಆರೋಪಿಗಳು ಮಹೇಶ್ ಮತ್ತು ಅಶೋಕ್ ಎಂಬವರು, ತಮ್ಮ ಲಾಭಕ್ಕಾಗಿ “ಸೆಲೂನ್ & ಸ್ಪಾ ಬಾಡಿ ಮಸಾಜ್ ಸೆಂಟರ್” ನಡೆಸುತ್ತಿದ್ದು, ಇಮ್ರಾನ್ ಮತ್ತು ಎಲಿಸಾ ಅವರೊಂದಿಗೆ ಒಟ್ಟಾಗಿ ಈ ದಂಧೆಗೆ ಸಹಕರಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ.…

Read More

ಬೆಂಗಳೂರು: ವೈದ್ಯಕೀಯ ತಪಾಸಣೆಯ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಚರ್ಮರೋಗ ತಜ್ಞನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶನಿವಾರ ಸಂಜೆ ಅಶೋಕನಗರದ ಖಾಸಗಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಯುವತಿ ತನ್ನ ತಂದೆಯೊಂದಿಗೆ ಚರ್ಮದ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು ಭೇಟಿ ನೀಡಿದ್ದ ವೇಳೆ, ವೈದ್ಯ ಡಾ. ಪ್ರವೀಣ್ (ವಯಸ್ಸು 56) ತಪಾಸಣೆ ಸಂದರ್ಭದಲ್ಲಿ ಅನುಚಿತ ವರ್ತನೆ ನಡೆಸಿದ್ದಾರೆ ಎಂಬ ಆರೋಪ ದಾಖಲಾಗಿದೆ. ಪೊಲೀಸರ ಪ್ರಕಾರ, ತಪಾಸಣೆ ಸಮಯದಲ್ಲಿ ವೈದ್ಯರು ಸುಮಾರು 30 ನಿಮಿಷಗಳ ಕಾಲ ಯುವತಿಗೆ ಅಸಭ್ಯವಾಗಿ ವರ್ತಿಸಿದ್ದು, ವೈದ್ಯಕೀಯ ತಪಾಸಣೆಯ ಹೆಸರಿನಲ್ಲಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಯುವತಿ ವಿರೋಧಿಸಿದರೂ ವೈದ್ಯರು ಕಿರುಕುಳ ಮುಂದುವರಿಸಿದ್ದು, ನಂತರ ಖಾಸಗಿಯಾಗಿ ಭೇಟಿಯಾಗಲು ಹೋಟೆಲ್ ರೂಮ್ ಬುಕ್ ಮಾಡುವ ಮಾತು ಸಹ ನುಡಿದರೆಂದು ದೂರು ತಿಳಿಸುತ್ತದೆ. ಘಟನೆಯ ನಂತರ ಯುವತಿ ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳೀಯ ನಿವಾಸಿಗಳೊಂದಿಗೆ ಕ್ಲಿನಿಕ್ ಮುಂದೆ…

Read More

ಪುತ್ತೂರು (ದಕ್ಷಿಣ ಕನ್ನಡ):ಈಶ್ವರಮಂಗಳದಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಷರ್ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ದಾಳಿ ಮಾಡಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಸೆರೆಹಿಡಿದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಗುಂಡೇಟಿಗೆ ಒಳಗಾದ ಆರೋಪಿ ಕಾಸರಗೋಡು ಮೂಲದ ಅಬ್ದುಲ್ಲಾ (40) ಎಂದು ಗುರುತಿಸಲಾಗಿದೆ. ಅವನ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಅಬ್ದುಲ್ಲಾ ಐಷರ್ ವಾಹನದಲ್ಲಿ ಸುಮಾರು 10 ಜಾನುವಾರುಗಳನ್ನು ಅನಧಿಕೃತವಾಗಿ ಸಾಗಿಸುತ್ತಿದ್ದಾನೆ. ಪೊಲೀಸರು ನಿಲ್ಲಿಸಲು ಸೂಚಿಸಿದಾಗ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಸುಮಾರು 10 ಕಿ.ಮೀ.ವರೆಗೆ ನಡೆದ ಚೇಸ್ ವೇಳೆ, ಆರೋಪಿಯು ಪೊಲೀಸರ ಜೀಪಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಪಿಎಸ್‌ಐ ಅವರು ಆತ್ಮರಕ್ಷಣೆಗೆ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ವಾಹನಕ್ಕೆ ತಗುಲಿದ್ದು, ಮತ್ತೊಂದು ಅಬ್ದುಲ್ಲಾ ಕಾಲಿಗೆ ತಗುಲಿದೆ. ಗುಂಡೇಟಿನ ಬಳಿಕ ವಾಹನ ನಿಂತಾಗ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಅಬ್ದುಲ್ಲಾ…

Read More

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಾಖಲಾಗಿದ್ದ ಒಟ್ಟು ಒಂಬತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳಾ ಆರೋಪಿತೆಯನ್ನು ಬರ್ಕೆ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬರ್ಕೆ ಪೊಲೀಸ್ ಠಾಣೆಯ ಮೊಕದ್ದಮೆ ನಂ. 77/2025 (ಕಲಂ 316(2), 318(2), 3(5) BNS–2023) ಅಡಿಯಲ್ಲಿ ನಡೆದ ಪ್ರಕರಣದಲ್ಲಿ, ಮಂಗಳೂರಿನ ಎಂಪೈರ್ ಮಾಲ್‌ನಲ್ಲಿರುವ ಲ್ಯಾಪ್‌ಟಾಪ್ ಬಜಾರ್ ಅಂಗಡಿ ಮಾಲೀಕ ಜಯರಾಯ ಅವರು ಪಿರ್ಯಾದಿ ಆಗಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿತೆ ಫರಿದಾ ಬೇಗಂ @ ಫರಿದಾ (28), ಪತಿ ರಮಿಜ್ ರಾಜ್, ಮುತ್ತೂರು ಗ್ರಾಮ, ಮಂಗಳೂರು ತಾಲೂಕು ನಿವಾಸಿ — ತಮ್ಮ ಪರಿಚಿತನ ಮೂಲಕ ಮಾನ್ಯತೆ ಇಲ್ಲದ ಬ್ಯಾಂಕ್ ಚೆಕ್‌ಗಳನ್ನು ನೀಡಿ, ರೂ. 1,98,000 ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ಪಾವತಿಸದೇ ವಂಚನೆ ನಡೆಸಿದ್ದಾಳೆ. ತನಿಖಾಧಿಕಾರಿ ವಿನಾಯಕ ತೊರಗಲ್ ಹಾಗೂ ಮಹಿಳಾ ಸಿಬ್ಬಂದಿಯವರಿಂದ, ಪೊಲೀಸ್ ನಿರೀಕ್ಷಕ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ, ಆರೋಪಿತೆಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆಕೆಯನ್ನು ಅಕ್ಟೋಬರ್ 19,…

Read More

ಮಂಗಳೂರಿನಲ್ಲಿ ಜನಿಸಿದರೂ, ಮುಂಬೈಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವ ಪ್ರಭಾ ನಾರಾಯಣ್ ಸುವರ್ಣ ಅವರು ನಿಜವಾದ ಅರ್ಥದಲ್ಲಿ “ಬುಹುಮುಖ ಪ್ರತಿಭೆ” ಎಂದರೆ ಹೇಗಿರಬೇಕು ಎಂಬುದಕ್ಕೆ ಜೀವಂತ ಉದಾಹರಣೆ. ಬಾಲ್ಯದಿಂದಲೇ ಸಮಾಜಸೇವೆಯ ಹಂಬಲ ಬೆಳೆಸಿಕೊಂಡು, ಕಷ್ಟದ ಪರಿಸ್ಥಿತಿಯಲ್ಲಿಯೂ ತಂದೆ-ತಾಯಿ ಹಾಗೂ ಹಿರಿಯರ ಮೌಲ್ಯಾಧಾರಿತ ಸಂಸ್ಕಾರವನ್ನು ಅಳವಡಿಸಿಕೊಂಡು ಜೀವನ ಪಥದಲ್ಲಿ ಮುನ್ನಡೆದಿದ್ದಾರೆ. ತಂದೆ-ತಾಯಿಯ ಸುಕೃತಫಲದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಪಡೆದ ಅವರು, 35 ವರ್ಷಗಳ ಯಶಸ್ವಿ ಸೇವೆ ನಂತರ ವಾಲೆಂಟರಿ ರಿಟೈರ್ಮೆಂಟ್ ಪಡೆದು, ಇನ್ನಷ್ಟು ಉತ್ಸಾಹದಿಂದ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಸಮಾಜಸೇವೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಭಾ ಸುವರ್ಣ ಅವರು —• ಯಂಗ್ ಮೆನ್ಸ್ ನೈಟ್ ಹೈಸ್ಕೂಲ್‌ನಲ್ಲಿ ಗ್ರ್ಯಾಂಡ್ ಪ್ಯಾಟ್ರನ್,• ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ಸೇವಾಧಾರಿಯಾಗಿ,• ಜಾಗೃತಿ ಬಳಗ ಫೋರ್ಟ್ ಚಾಪ್ಟರ್ ಚೇರ್ ಪರ್ಸನ್ ಆಗಿ,• ಡಿಗ್ನಿಟಿ ಫೌಂಡೇಶನ್ ಗೌವರ್ನಿಂಗ್ ಕೌನ್ಸಿಲ್ ಸದಸ್ಯೆಯಾಗಿ,• ಮುಂಬೈ ಹಾಗೂ ಮಾತುಂಗ ಕನ್ನಡ ಸಂಘಗಳು,• ಸಾಯನ್ ಮೆಸಾನಿಕ್ ಲೇಡೀಸ್ ಆರ್ಗನೈಜೇಶನ್ನಲ್ಲಿ ಉಪಾಧ್ಯಕ್ಷೆಯಾಗಿ ಹಾಗೂ ಆಜೀವ ಸದಸ್ಯೆಯಾಗಿ,• ಟಾಟಾ ಮೆಮೋರಿಯಲ್ ಕ್ಯಾನ್ಸರ್…

Read More

ಉಳ್ಳಾಲ: ಇಂದು ನಾಟೆಕಲ್ ತಾಲೂಕು ಆಫೀಸ್ ಎದುರಗಡೆ ಇರುವ ಖದೀಜಾ ಕಾಂಪ್ಲೆಕ್ಸ್ ವಟಾರದಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಮತ್ತು ಬಾಲ ಪ್ರತಿಭೆ ಫಾತಿಮಾ ರಂಸೀನಾ ಅವರಿಗೆ ಸನ್ಮಾನ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಫ್ತಿಕಾರ್ ಫರೀದ್ ವಹಿಸಿದ್ದು, ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ವಿಭಾಗ-1 ರ ಕಾರ್ಮಿಕ ಅಧಿಕಾರಿ ಶ್ರೀ ಕುಮಾರ್ ಅವರು ಉದ್ಘಾಟಿಸಿದರು. ಅವರು ಅಸಂಘಟಿತ ಕಾರ್ಮಿಕರ ಕಾರ್ಡ್‌ ಹೇಗೆ ಮಾಡುವುದು ಮತ್ತು ಅದರ ಉಪಯೋಗಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬಾಸ್ ಅಲಿ ಅವರು ಅಧಿಕೃತವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸಂಘಟಿತ ಕಾರ್ಮಿಕ ಘಟಕ ಮತ್ತು ನೌಕರರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ನಾಟೆಕಲ್ ಕಾರ್ಯಕ್ರಮದ ಸ್ವಾಗತ ಭಾಷಣ ನೀಡಿದರು. ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ತಾ.ಪಂ. ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ರಾಜ್ಯ ಮಹಿಳಾ ಕಾಂಗ್ರೆಸ್…

Read More

ಮಂಗಳೂರು:ತುಳು ಭಾಷೆ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ದಿಟ್ಟ ಪರಿಚಯವನ್ನು ತುಳು ಸಾಹಿತ್ಯ ಓದಿನ ಮೂಲಕ ಪಡೆಯಬಹುದು ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ತಲಪಾಡಿಯ ಶಾರದಾ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಅಭಿಯಾನದ ಹತ್ತನೇ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ರಾಮಾಯಣ ಕಾಲದಿಂದ ಇಂದಿನ ಆಧುನಿಕ ದಿನಗಳವರೆಗೆ ತುಳು ಭಾಷೆ ಮತ್ತು ಜ್ಞಾನ ಪರಂಪರೆಯ ಸರಣಿಯನ್ನು ಈ ಸಾಹಿತ್ಯಗಳಲ್ಲಿ ಕಾಣಬಹುದು. ಓದಿನ ಮೂಲಕ ಇವುಗಳನ್ನು ಅರ್ಥೈಸಿಕೊಂಡು ನಮ್ಮದಾಗಿಸಿಕೊಳ್ಳಬಹುದು,” ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ. ಮೀನ ಜೆ. ಪಣಿಕ್ಕರ್ ಮಾತನಾಡಿ, “ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೆಚ್ಚುಗೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ದೃಷ್ಟಿಯಿಂದ ಈ ಕಾರ್ಯಕ್ರಮ ವಿಶಿಷ್ಟವಾದ ಪರಿಕಲ್ಪನೆಯಾಗಿದೆ,” ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು…

Read More

ಮಂಗಳೂರು, ಅ.18: ಕೆಲಸಗಳು ಸುಲಭದಲ್ಲಿ ನೆರವೇರುವುದಿಲ್ಲ. ನಿರಂತರ ಹೋರಾಟ, ಪ್ರಯತ್ನ ಹಾಗೂ ಎಲ್ಲರ ಒಗ್ಗಟ್ಟು ಇದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಅವರು ಶುಕ್ರವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ನಿವೃತ್ತ ನೌಕರರ ವೇದಿಕೆ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಭೆಯನ್ನು ಬೆಂಗಳೂರು ಕೇಂದ್ರ ಸಮಿತಿಯು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಜಂಟಿಯಾಗಿ ಆಯೋಜಿಸಿತ್ತು. ಸಿಎಂ ಮನೆ ಮುಂದೆ ಧರಣಿಗೆ ಚಿಂತನೆ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ. ಎಂ.ಪಿ.ಎ. ಷಣ್ಮುಖಯ್ಯ ಮಾತನಾಡಿ, “7ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಅನುಗುಣವಾಗಿ ನಿವೃತ್ತರಾದ ನೌಕರರಿಗೆ ನ್ಯಾಯ ದೊರೆಯದ ಸ್ಥಿತಿಯು ಉಂಟಾಗಿದೆ. ಇದೊಂದು ಸರಕಾರದಿಂದ ಮಾಡಿದ ಅನ್ಯಾಯ” ಎಂದು ವಿಷಾದ ವ್ಯಕ್ತಪಡಿಸಿದರು. “ಈ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಮೈಸೂರಿನ ಸಿಎಂ ನಿವಾಸ ಎದುರು ಧರಣಿ, ಮತ್ತು ಡಿಸೆಂಬರ್‌ನಲ್ಲಿ ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಪಾದಯಾತ್ರೆ ಮಾಡುವ ಯೋಜನೆಯಿದೆ” ಎಂದರು. “ಆರ್ಥಿಕವಾಗಿ ವಂಚನೆ ನಡೆಯುತ್ತಿದೆ”…

Read More