ತುಳುನಾಡ ಸೂರ್ಯ ನ್ಯೂಸ್ : ರಾಷ್ಟ್ರೀಯ ಹೆದ್ದಾರಿ 66 ರ ಅವ್ಯವಸ್ಥೆ, ಸಂತೆಕಟ್ಟೆ ಮತ್ತು ಬ್ರಹ್ಮಾವರ ಇಲ್ಲಿನ ಹತ್ತು ಹಲವು ಸಮಸ್ಯೆಗಳ ಬಗ್ಗೆ ಉಡುಪಿ ಜಿಲ್ಲಾ ತುಳುನಾಡು ರಕ್ಷಣಾ ವೇದಿಕೆ ನಿಯೋಗ ಇಂದು ಮಿನಿ ವಿಧಾನಸೌಧ ಬ್ರಹ್ಮಾವರದಲ್ಲಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣರಿಗೆ ಮತ್ತು ಹೈವೇ ಪ್ರಾಧಿಕಾರ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲೆಯ ಜನರ ಸಮಸ್ಯೆ ನಿವಾರಿಸಲು ನಿರಂತರ ಜನರ ದ್ವನಿಯಾಗಿ ತುಳುನಾಡ ರಕ್ಷಣಾ ವೇದಿಕೆಯು ಹೋರಾಟ ಮಾಡುತ್ತಾ ಬಂದಿದೆ.
ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾಧ್ಯಕ್ಷರಾದ ಕೃಷ್ಣಕುಮಾರ್, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜೆ ಜಿಲ್ಲೆಯ ಸಮಸ್ಯಗಳ ಬಗ್ಗೆ ಮಾತನಾಡಿದರು. ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾದ ಅಜರುದ್ದೀನ್, ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ , ಕೋಶಾಧಿಕಾರಿಯಾದ ಸುನಂದ, ಕಾಪು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಅನುಸೂಯ, ಸಾಹಬುದ್ದೀನ್, ಮಜೀದ್, ಪ್ರೀತಮ್, ಸಂಗೀತ ಶೆಟ್ಟಿ, ಜ್ಯೋತಿ,ರಂಜಿತ ಶೆಟ್ಟಿ ವಿನೋದ, ರಜತ ಮತ್ತಿತರರು ಉಪಸ್ಥಿತರಿದ್ದರು…
©2021 Tulunada Surya | Developed by CuriousLabs