ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಕಾರ್ಮಿಕ ದಿನಾಚರಣೆಯು ಮೇ 1 ಗುರುವಾರ ಉಡುಪಿ ಬಸ್ ನಿಲ್ದಾಣ ಬಳಿಯ ಅಕ್ಷಯ ಟವರ್ ನಲ್ಲಿ ನಡೆಯಿತು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ಅವರು ದೀಪ ಬೆಳಗಿಸಿದ ರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ವಾಗತ ಭಾಷಣವನ್ನು ಮಾಡಿದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ರವರು ತುಳುನಾಡ ರಕ್ಷಣಾ ವೇದಿಕೆ ಕಳೆದ 16 ವರ್ಷಗಳಿಂದ ಯೋಗೀಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ ನೂರಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ .

ಪ್ರಾಸ್ತಾವಿಕ ಭಾಷಣ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬರವರು ಕಾರ್ಮಿಕರಿಗೆ ಅನ್ಯಾಯವಾದಾಗ ತುಳುನಾಡ ರಕ್ಷಣಾ ವೇದಿಕೆ ನಿರಂತರ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಟ್ಟಿದೆ.

ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ ರವರು ಕಾರ್ಮಿಕರ ಹಿತರಕ್ಷಣೆಗೆ ತುಳುನಾಡ ರಕ್ಷಣಾ ವೇದಿಕೆ ಸದಾ ಸಿದ್ದ ವಾಗಿರುತ್ತದೆ. ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಿಲ್ ಫೆರ್ನಾಂಡಿಸ್ ತುಳುನಾಡ ರಕ್ಷಣಾ ವೇದಿಕೆ ಬಲಪಡಿಸಲು ಸರ್ವರೂ ಕೈಗೂಡಿಸಿ ಬೇಕು ಎಂದರು.

ಜಿಲ್ಲಾ ಗೌರವ ಸಲಹೆಗಾರ ಸುಧಾಕರ್ ಅಮೀನ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ ಪೂಜಾರಿ, ಕುಂದಾಪುರ ತಾಲೂಕು ಅಧ್ಯಕ್ಷ ಸತೀಶ್ ಕಾರ್ವಿ, ಕಾಪು ಮಹಿಳಾ ಅಧ್ಯಕ್ಷೇ ಅನುಸೂಯ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಸುರೇಂದ್ರ ಪೂಜಾರಿ ಗೈದರು.

ಉತ್ತಮ ಕಾರ್ಮಿಕರಾಗಿ ಸೇವೆ ಸಲ್ಲಿಸಿದ ಸುಧಾಕರ್ ಅಮೀನ್, ಅಬುಬಕರ್ ಮದಿಪು , ಶ್ಯಾಮ ಪೂಜಾರಿ, ಸದಾನಂದ ರಾಜ್, ರಮೇಶ್ ನಾಯಕ್ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದ ಕುಂದಾಪುರ ತಾಲೂಕು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ್ ಕಾರ್ವಿ ಯವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ವಿದ್ಯಾಬ್ಯಾಸದಲ್ಲಿ ಗರಿಷ್ಠ ಮಟ್ಟ ಅಂಕ ಪಡೆದ ಅಂಜಲಿ ಯವರಿಗೆ ಸನ್ಮಾನ ಮಾಡಲಾಯಿತು. ಮತ್ತು ಅವಳ ಮುಂದಿನ ವಿದ್ಯಾಭ್ಯಾಸಕ್ಕೆ 10000 ರೂಪಾಯಿ ಸಹಾಯ ಧನ ವನ್ನು ಜಿಲ್ಲಾ ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್ ರವರು ನೀಡಿದರು.


ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ , ಜಿಲ್ಲಾ ಜೊತೆ ಕಾರ್ಯದರ್ಶಿ ಸುಭಾಶ್ ಸುದನ್ , ಜಿಲ್ಲಾ ಮಹಿಳಾ ಉಪಾಧ್ಯಕ್ಷ ಗುಲಾಬಿ, ಬ್ರಹ್ಮಾವರ ಗೌರವ ಅಧ್ಯಕ್ಷ ಸದಾಶಿವ ಬ್ರಹ್ಮಾವರ, ಜ್ಯೋತಿ ಆರ್ , ಪ್ರೀತಮ್ ಡಿಸೋಜಾ , ಯುವ ಘಟಕ ಉಪಾಧ್ಯಕ್ಷ ರಾಹುಲ್ ಪೂಜಾರಿ, ಸಂಜೀವ,
ಹರಿಣಾಕ್ಷಿ , ಜ್ಯೋತಿ ಗಿರೀಶ್ , ಜಯಲಕ್ಷ್ಮಿ , ಆನಂದ , ನಾಗರಾಜ್ ಸಂಗೀತ ಶೆಟ್ಟಿ , ರಂಜಿತ ಶೆಟ್ಟಿ , ರಿತೇಶ್ , ಕವಿತಾ ಹರೀಶ್ ಕುಂದಾಪುರ , ಅಕ್ಷಮ್ಮ , ಶ್ಯಾಮಲಾ, ರಮೇಶ್ ನಾಯಕ್ , ಪುಷ್ಪ ಜಿ ಕೆ , ಶಶಿಕಲಾ , ವಿನೋದ,
ಜೀನತ್, ಅಶ್ವಿನಿ , ಲಕ್ಷ್ಮಿ ರೋಹಿತ್ ,ಮೋಹಿನಿ , ಜ್ಯೋತಿ ಉಪ್ಪುರು, ಪ್ರಜ್ವಲ್, ನಾಗರಾಜ್ ಮತ್ತಿತರು ಉಪಸ್ಥಿತರಿದ್ದರು. ಶಂಕರ್ ಉಡುಪಿ ಛಾಯಚಿತ್ರ ಸೆರೆ ಹಿಡಿದರು. ಮಹಿಳಾ ಘಟಕ ಕೋಶಾಧಿಕಾರಿ ಸುನಂದ ಕೋಟ್ಯಾನ್ ಧನ್ಯವಾದ ಗೈದರು ಕಾರ್ಯಕ್ರಮ ಕೊನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕಾರ್ಮಿಕರೊಂದಿಗೆ ಸಹ ಭೋಜನ ಸವಿದರು. ಒಟ್ಟಾರೆಯಾಗಿ ಕಾರ್ಮಿಕ ದಿನಾಚರಣೆ ಅದ್ದೂರಿಯಾಗಿ ನಡೆಯಿತು

