*ಅಂತಾರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆ ಗೆ ಅವಳಿ ಪ್ರಶಸ್ತಿಯ ಗರಿ* *ಯೋಗೀಶ್ ಶೆಟ್ಟಿ ಜಪ್ಪು* ರವರಿಗೆ *ರಾಷ್ಟ್ರೀಯ ತೌಳವ ರತ್ನ* ಮತ್ತು *ಫ್ರ್ಯಾಂಕಿ ಡಿಸೋಜ ಕೊಳಲಗಿರಿ* ರವರಿಗೆ *ರಾಷ್ಟ್ರೀಯ ತುಳುನಾಡು ರಕ್ಷಣಾ ರತ್ನ ಪ್ರಶಸ್ತಿ*

ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಮತ್ತು ಕಲಾವಿದರ ಬೆಳಕು ಉಡುಪಿ ಇವರ ಸಹಯೋಗದಲ್ಲಿ *ರಾಷ್ಟ್ರೀಯ ಕಲಾ ಪ್ರತಿಭೋತ್ಸವ* ಕಾರ್ಯಕ್ರಮ ದಿನಾಂಕ 27- 04-2025 ರಂದು ಮದ್ಯಾಹ್ನ 2 ಗಂಟೆಗೆ ಶ್ರೀ ಕೃಷ್ಣ ಮಠ ಉಡುಪಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ಸೋಮಲಿಂಗೇಶ್ವರ ದೇವಋಷಿಗಳು ನಿಪನಾಳ ರವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಕೃಷ್ಣಮೂರ್ತಿ ಆಚಾರ್ಯ ರವರು ಉದ್ಘಾಟನಾ ಪರ ನುಡಿಗಳನ್ನಾಡಿದರು.

ಅಧ್ಯಕ್ಷತೆಯನ್ನು ಬಡವರ ಬಂಧು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಸಭಾ ಸದಸ್ಯರು ವಿಜಯ್ ಕೋಡವುರು , ಶಿವ ಕುಮಾರ್ ಕರ್ಜೆ , ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ರಾಜ್ಯಾಧ್ಯಕ್ಷ ಪಾಪಣ್ಣ ಉಡುಪಿ,
ಶ್ರೀ ಸೋಮಗೌಡ ಮಮ್ಮಿಗಟ್ಟಿ ಹುಬ್ಬಳ್ಳಿ , ಶ್ರೀ ಕನಕದಾಸ ಸಂಘಟನೆ ಅಧ್ಯಕ್ಷ ಹನುಮಂತ ಡೊಳ್ಳಿನ, ಕರಾಕರವೇ ಗೌರವ ಅಧ್ಯಕ್ಷ ಅಪ್ಪು ಪೂಜಾರಿ, ರಾಷ್ಟ್ರೀಯ ಮಾನವ ಹಕ್ಕು ಗಳ ತನಿಕ ಸಮಿತಿ ಬೆಂಗಳೂರು. ಶ್ರೀಮತಿ ಪ್ರೀತಿ ನಾಯ್ಕ್, ಎಪಿಎಂಸಿ ವರ್ತಕ ಸಂಘ ಕಾರ್ಯದರ್ಶಿ ಪ್ರಕಾಶ್ ಸಜ್ಜನ ,ಎ.ಶಾಜಿ ಕುಮಾರ್ ಉಡುಪಿ, ಶ್ರೀ ಮೀನಾಕ್ಷಿ ವಾಗಮೋರೆ
ಬೆಳಗಾವಿ, ಗೋವಿಂದಪ್ಪ ವಾಯ್ ಉತ್ತೂರ್ , ರಾಮಣ್ಣಕೆ ಅಡಗಲ್ , ಹನುಮಂತ ಜಿ ಗೋಡಿ , ಮುತ್ತಪ್ಪ ಕುರಿ , ಗೋವಿಂದಪ್ಪ ತ್ತೂರು , ಹನುಮಂತ. ಜಿ. ಗೋಡಿ, ಗೀತಾಧರಿ ಗೌಡ, ಮಂಜುಳಾ ಗಸ್ತಿ, ಶೈಲಾ ವಾಘ ಮೋಡೆ,ಷ ರೋಹಿಣಿ ಹಳಿಂಗಳಿ, ಸುಖದೇವಿ ನಾಯ್ಕ್ , ತೇಜಸ್ ಯಲ್ಲಟ್ಟಿ, ಮತ್ತಿತರ ಉಪಸ್ಥಿತಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು, ರವರಿಗೆ *ರಾಷ್ಟ್ರಿಯ ತೌಳವ ರತ್ನ ಪ್ರಶಸ್ತಿ* ಮತ್ತು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ರಾಗಿ ನಿಷ್ಠೆಯಿಂದ ಸಂಘಟನೆ ಬಲಪಡಿಸಲು ಶ್ರಮಿಸಿದ್ದು ಅವರ ಪ್ರಾಮಾಣಿಕತೆ ಗುರುತಿಸಿ ಫ್ರ್ಯಾಂಕಿ ಡಿಸೋಜ ಕೊಳಲಗಿರಿ* ರವರಿಗೆ *ರಾಷ್ಟ್ರೀಯ ತುಳುನಾಡು ರಕ್ಷಣಾ ರತ್ನ ಪ್ರಶಸ್ತಿ* ನೀಡಿ ಗೌರವಿಸಲಾಯಿತು
ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು
ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಆಯೋಜಕರು
ಸುರೇಶ್ ವಾಘಮೊಡೆ ಮತ್ತು ಕಲಾವಿದರ ಬೆಳಕು ಉಡುಪಿಯ ಪ್ರಮುಖ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.




