ದುಬೈ: ಯುಎಇ ನಲ್ಲಿ ಕಳೆದ ಮೂರು ದಶಕಗಳಿಂದ ಕರ್ನಾಟಕ ಸಂಘಟನೆಗಳ ಪರ ಕ್ರೀಡಾ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿಕೊಂಡು ಬಂದಿರುವ ಉತ್ತಮ ಕ್ರೀಡಾ ಸಂಘಟಕರಾದ ನೊಯಲ್ ಡಿ.ಅಲ್ಮೆಡಾ ಅವರಿಗೆ ಕನ್ನಡ ಸಂಘ ಅಲೈನ್ ವತಿಯಿಂದ “ಗಲ್ಫ್ ಕ್ರೀಡಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಳೆದ ಎರಡು ದಶಕಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಿ ಕೊಂಡು ಬಂದಿರುವ ಕರ್ನಾಟಕ ಸಂಘಟನೆಗಳ ಪೈಕಿ ಕನ್ನಡ ಸಂಘ ಅಲೈನ್ ಕೂಡ ಒಂದು. ಇದರ 22ನೇ ವಾರ್ಷಿಕೋತ್ಸವದ ಅಂಗವಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಅಲೈನ್ ನ ರಾಡಿಸ್ಸನ್ ಬ್ಲೂ ಹೋಟೆಲ್ ನಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದ ಸಂಘಟನೆಯಲ್ಲಿ ಅತ್ಯುತ್ತಮ ಸೇವೆಗೈದ ನೊಯಲ್ ಡಿ.ಅಲ್ಮೇಡಾ ಅವರಿಗೆ “ಗಲ್ಫ್ ಕ್ರೀಡಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯು.ಎ.ಇ. ಹಿರಿಯ ಉದ್ಯಮಿ ಡಾ. ಬಿ.ಆರ್. ಶೆಟ್ಟಿ, ಗೌರವ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮತ್ತು ಅಲೈನ್ ಜೂನಿಯರ್ ಸ್ಕೂಲ್ ನ ಮುಖ್ಯಸ್ಥರಾದ ಅರ್ಶದ್ ಶರೀಫ್,ಬಿನ್ ಡಾರ್ವಿಶ್ ಗ್ರೂಪ್ ನ ಮುಖ್ಯಸ್ಥರಾದ ಮಹ್ಮದ್ ಇಬ್ರಾಹಿಂ, ಐ.ಎಸ್.ಸಿ. ಅಲೈನ್ ಅಧ್ಯಕ್ಷ ರಸ್ಸೆಲ್, ಕರ್ನಾಟಕ ಸಂಘದ ಶಾರ್ಜಾದ ಅಧ್ಯಕ್ಷ ಸತೀಶ್ ಪೂಜಾರಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ ಸಲಹೆಗಾರರಾದ ಸುಂದರರಾಜ್ ಬೇಕಲ್ , ಅಲೈನ್ ಕನ್ನಡ ಸಂಘದ ಮುಖ್ಯ ಸಂಘಟಕರಾಗಿರುವ ವಿಮಲ್ ಕುಮಾರ್,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಮೇಶ್ ಕುಮಾರ್, ಡಾ.ಪ್ರದೀಪ್, ದೇವಿಪ್ರಸಾದ್ ಶೆಟ್ಟಿ,ವಿಕಾಸ್ ಶೆಟ್ಟಿ, ವಿನೋದ್ ಮಥಾಯಸ್, ನಿತೀನ್, ಶ್ರೀಧರ್, ಶ್ರೀಮತಿ ದಿವ್ಯ ಶಶಿ, ಶಿಲ್ಪಾ ನಂಜುಂಡಸ್ವಾಮಿ,ಸಮೀನಾ ಫಾರುಕ್,ಡಾ.ದಿವ್ಯತಾ ಮೊದಲಾದವರು ಉಪಸ್ಥಿತರಿದ್ದರು.
