ಮಂಗಳೂರು:ಏಪ್ರಿಲ್ 27 ರಿಂದ 30 ರವರೆಗೆ ಮಂಗಳೂರಿನ ಲಾಲ್ಬಾಗ್ನಲ್ಲಿ ನಡೆದ 24 ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್ಶಿಪ್ 2025 ರ ಸಬ್ ಜೂನಿಯರ್ ವಿಭಾಗದ ತೌಲೊ ಜಿಯನ್ಸೂವಿನಲ್ಲಿ ಕು.ಮನ್ವಿತ ಮನೋಜ್ ಕುಮಾರ್ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇಮ್ಮೋರ್ಟಲ್ಸ್ ಅಕಾಡಮಿಯ ಗುರುಗಳಾಗಿರುವ ರೋಹನ್. ಎಸ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿರುವ ಇವರು ಶ್ರೀ ರಾಮಾಶ್ರಮ ಆಂಗ್ಲ ಮಾದ್ಯಮ ಶಾಲೆ ಕೊಂಚಾಡಿಯಲ್ಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿರುತ್ತಾರೆ.
