Close Menu
ತುಳುನಾಡ ಸೂರ್ಯತುಳುನಾಡ ಸೂರ್ಯ
    What's Hot

    ತುಳುನಾಡ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಪ್ರಶಾಂತ್ ರೈ ಮರುವಂಜ ದಂಪತಿಗೆ ಸನ್ಮಾನ

    18 May 2025

    ಅಕ್ರಮ ಮರಳು ಸಂಗ್ರಹ : ಪೊಲೀಸರಿಂದ ದಾಳಿ…!!

    15 May 2025

    ಮಂಗಳೂರು : ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

    15 May 2025
    Facebook WhatsApp Telegram
    Trending
    • ತುಳುನಾಡ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಪ್ರಶಾಂತ್ ರೈ ಮರುವಂಜ ದಂಪತಿಗೆ ಸನ್ಮಾನ
    • ಅಕ್ರಮ ಮರಳು ಸಂಗ್ರಹ : ಪೊಲೀಸರಿಂದ ದಾಳಿ…!!
    • ಮಂಗಳೂರು : ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
    • ಕೋಟ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ : ಇಬ್ಬರು ಸಾವು..!
    • ಕಾರ್ಕಳ : ಶಸ್ತ್ರ ಚಿಕಿತ್ಸೆ ವೇಳೆ ಮಹಿಳೆ ಮೃತ್ಯು : ವೈದ್ಯರ ವಿರುದ್ಧ ಸಂಬಂಧಿಕರ ಆಕ್ರೋಶ…!!
    • ಮೇ 16 ರಂದು ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ
    • ಕಡಲು ಕೊರೆತ ಕಾಮಗಾರಿ:ಸ್ಥಳೀಯರ ವಿಶ್ವಾಸ ತೆಗೆದುಕೊಳ್ಳಲು ಸ್ಪೀಕರ್ ಸೂಚನೆ
    • ಎಳನೀರು-ದಿಡುಪೆ ರಸ್ತೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವರಿಂದ ಮುಖ್ಯಮಂತ್ರಿಗಳಿಗೆ ಮನವಿ
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಕ್ರೀಡೆ
    Facebook YouTube
    ತುಳುನಾಡ ಸೂರ್ಯತುಳುನಾಡ ಸೂರ್ಯ
    Monday, May 19
    • ಮುಖ ಪುಟ
    • ಸ್ಥಳೀಯ
    • ರಾಜ್ಯ
    • ದೇಶ-ವಿದೇಶ
    • ಮನೋರಂಜನೆ
    • ಅಪರಾಧ
    • ತಂತ್ರಜ್ಞಾನ
    • ಕ್ರೀಡೆ
    • ಇತರೆ
    • ಬ್ರೇಕಿಂಗ್ ನ್ಯೂಸ್ 🔥
    ತುಳುನಾಡ ಸೂರ್ಯತುಳುನಾಡ ಸೂರ್ಯ
    Home » ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ

    ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ

    Tulunada SuryaBy Tulunada Surya9 May 2025 ಸುದ್ದಿ No Comments2 Mins Read
    Share
    Facebook WhatsApp
    Share on:

    ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯುಳ್ಳ ಈ ಮಹಾನ್ ಸಾನಿಧ್ಯವು ಗುರುಪುರ ಫಲ್ಗುಣಿ ನದಿ ತಟಾಕದಲ್ಲಿ ಕಂಗೊಳಿಸುತ್ತಿದ್ದು ಮೇ ತಿಂಗಳ 15, 16 ಮತ್ತು 17ರಂದು ಈ ಮಹಾಚೈತನ್ಯದ ಪ್ರತಿಷ್ಠೆ ಮತ್ತು ಪಂಚಕಲ್ಯಾಣಯುಕ್ತವಾದ ಬ್ರಹ್ಮಕಲಶ ಮಹೋತ್ಸವ ಸಂಭ್ರಮವು ವೇದೋಕ್ತ ವಿಧಿ-ವಿಧಾನಗಳಂತೇ ಜರಗಲಿರುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ತಿಳಿಸಿದ್ದಾರೆ.

    ದೇವರ ಮೂರ್ತಿಗೆ ಸ್ವತಃ ತಮ್ಮ ಕೈಯಾರ ಕಲಶಾಭಿಷೇಕ ಮಾಡುವ ಅವಕಾಶವಿದ್ದು ದೇವಸ್ಥಾನದಲ್ಲಿ ಸ್ನಾನ ಘಟಕ,ಧ್ಯಾನ ಕೇಂದ್ರ ಕೂಡ ವಿದ್ದು ವಸತಿ ಗೃಹದ ನಿರ್ಮಾಣವಾಗಿದೆ.ಪುರಾತನ ಕಾಲದ ತೀರ್ಥಬಾವಿ ಇದೆ,ಬಡ ಕುಟುಂಬಗಳಿಗೆ ಮದುವೆ ಕಾರ್ಯಕ್ರಮಗಳಿಗೆ ಉಚಿವಾಗಿ ಸಭಾಂಗಣ ನೀಡಲು ನಿರ್ಧಾರಿಸಿದ್ದಾರೆಂದು ತಿಳಿಸಿದ್ದಾರೆ.

    ಗುರುಪುರ ಎಂಬ ಹೆಸರೇ ಹೇಳುವಂತೆ ಆಧ್ಯಾತ್ಮಿಕ ಸಾಧಕರು ನೆಲೆಸಿ ಲೋಕಮುಖಿಯಾಗಿ ತಪಸ್ಸನ್ನಾಚರಿಸಿದ ಪ್ರದೇಶವಾಗಿದೆ. ಈ ಪ್ರದೇಶದ ದಕ್ಷಿಣ ಭಾಗದಲ್ಲಿ ಪವಿತ್ರ ಫಲ್ಗುಣಿ (ಗುರುಪುರ) ನದಿಯು ಪಶ್ಚಿಮವಾಹಿನಿಯಾಗಿ ಜೀವರಾಶಿಯ ಪೋಷಕಿಯಾಗಿ ಹರಿಯುತ್ತಿದ್ದಾಳೆ. ಈ ಪವಿತ್ರ ನದಿಯ ತಟಾಕಕ್ಕೆ ಶತಶತಮಾನಗ ಶತಶತಮಾನಗಳ ಹಿಂದೆ ಉತ್ತರಭಾರತದ ಉಜ್ಜಯಿನಿಯಿಂದ ಬಂದ ಪ್ರಖರ ಆಧ್ಯಾತ್ಮ ಸಾಧಕರೊಬ್ಬರು ಈ ಸ್ಥಳದ ವಿಶೇಷತೆಯನ್ನು ತಮ್ಮ ತಪೋಬಲದಿಂದ ಅರಿತುಕೊಂಡು ತಮ್ಮ ಲೋಕಮುಖ ಉದ್ದೇಶಕ್ಕೆ ಈ ನೆಲವನ್ನು ತಪೋಭೂಮಿಯಾಗಿ ಆರಿಸಿಕೊಂಡು ಶ್ರೀ ಮಹಾಕಾಲನ ಬ್ರಹಾದಾಕಾರದ ಮಣ್ಣಿನ ಲಿಂಗವನ್ನು ನಿರ್ಮಿಸಿ ಅದಕ್ಕೆ ಪೂರಕವಾದ ತೀರ್ಥಕೆರೆಯನ್ನು ನಿರ್ಮಿಸಿದರು. ಇಷ್ಟು ಮಾತ್ರವಲ್ಲದೇ ತಮ್ಮ ತಪೋಬಲವನ್ನು ದಾರೆಯೆರೆದು ಶ್ರೀ ಮಹಾಕಾಲನ ಜ್ಯೋತಿರ್ಲಿಂಗ ಸ್ಥಾಪನಾ ಉದ್ದೇಶದಿಂದ ಬಹಳ ವರ್ಷಗಳ ಕಾಲ ತಮ್ಮ ತಪಸ್ಸಾಧನೆಯನ್ನು ಮುಂದುವರಿಸಿದರು ಎಂದು ಗೋಳಿದಡಿಗುತ್ತು ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿಯವರು ತಿಳಿಸಿದರು.

    ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ವೇದಕೃಷಿಕ ಬ್ರಹ್ಮಋಷಿ ಶ್ರೀ ಕೆ.ಎಸ್. ನಿತ್ಯಾನಂದರು ಅಪ್ರತಿಮ ಲೋಕಮುಖ ಸಾಧಕರಾಗಿದ್ದು ಅವರು ತಮ್ಮಲ್ಲಿರುವ ಅಪೂರ್ವ ವಿದ್ಯಾಸಾಧನೆಯಿಂದ ಈ ಮಹಾನ್ ಸಾನಿಧ್ಯದ ಇರುವಿಕೆಯನ್ನು ಗುರುತಿಸಿ ಈ ಮಹಾನ್ ಸಾನಿಧ್ಯದ ಮಹತ್ವ, ಉದ್ದೇಶ ಮತ್ತು ಲೋಕಮುಖಿಯಾಗಿ ಸ್ಪಂಧಿಸುವ ಗುಣಗಳನ್ನು ನಿಖರವಾಗಿ ಗುರುತಿಸಿ, ಶತಶತಮಾನಗಳಿಂದ ನದಿತಟಾಕದ ಭೂಗರ್ಭದಲ್ಲಿ ಸುಪ್ತವಾಗಿರುವ ಈ ಮಹಾನ್ ಚೈತನ್ಯವನ್ನು ಪ್ರಸಕ್ತ ಕಾಲದ ಗುಣಗಳಿಗೆ ಅನುಗುಣವಾಗಿ ಯಾವ ರೀತಿಯಲ್ಲಿ ಪುನರುತ್ಥಾನಗೊಳಿಸಿ ಲೋಕಕಲ್ಯಾಣಕ್ಕಾಗಿ ಸಮರ್ಪಿಸಬೇಕು. ಎಂದು ನಿಖರವಾಗಿ ನಿರ್ಣಯಿಸಿ ನಮಗೆ ನಿರ್ದೇಶನ ನೀಡಿ ಆದ್ಯವಾಗಿ ಈ ಸ್ಥಳದಲ್ಲಿ ತುಲಾಯಂತ್ರವನ್ನು ಸ್ಥಾಪಿಸಿ ಮುಂದಕ್ಕೆ ಈ ಮಹಾ ಚೈತನ್ಯವನ್ನು ಪುನರುತ್ಥಾನ ಯಾವ ರೀತಿಯಲ್ಲಿ ರೂಪುಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆಂದು ತಿಳಿಸಿದ್ದಾರೆ‌ .

    ಗುರು ನಿತ್ಯಾನಂದರವರ ಮಾರ್ಗದರ್ಶನದಂತೆ ಈ ಮೂರ್ತಿ ಶಿಲಾಕೆಲಸವನ್ನು ಬೆಳ್ತಂಗಡಿ ನಿವಾಸಿ ವೆಂಕಟೆಶ್ ರವರ ಶಿಷ್ಯ ಕುಮಾರವಶರ್ಮಾ ಎಂದು ತಿಳಿಸಿದರು. ಶ್ರೀ ಗುರುಮಹಾಕಾಲೇಶ್ವರ ದೇವರ 45 ಅಡಿ ಎತ್ತರದ ಸಾನಿಧ್ಯವು (ಪೀಠ ಮತ್ತು ಏಕಶಿಲಾ ಮೂರ್ತಿ ಸಹಹಿತ) ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿದ್ದು ಇದೀಗ ಈ ಸಾನಿಧ್ಯವು ಪ್ರತಿಷ್ಠೆ ಮತ್ತು ಪಂಚಕಲ್ಯಾಣಯುಕ್ತವಾದ ಬ್ರಹ್ಮಕಲಶ ಮಹೋತ್ಸವಕ್ಕೆ ಸಜ್ಜಾಗಿ ನಿಂತಿದೆ ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಯಶವಂತ್ ಸಾಲಿಯಾನ್, ನಾರಾಯಣ ಪ್ರಭು, ಸತೀಶ್ ಕಾವ, ಉಷಾ ಪ್ರಸಾದ್ ಶೆಟ್ಟಿ, ಸುನೀಲ ಪ್ರಭಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ್ ಸಾಮಾನಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.

    Share on:

    Keep Reading

    ತುಳುನಾಡ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಪ್ರಶಾಂತ್ ರೈ ಮರುವಂಜ ದಂಪತಿಗೆ ಸನ್ಮಾನ

    ಮಂಗಳೂರು : ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

    ಕೋಟ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ : ಇಬ್ಬರು ಸಾವು..!

    Editors Picks
    Latest Posts
    Facebook YouTube

    News

    • ಅಪರಾಧ
    • ಇತರೆ
    • ಕ್ರೀಡೆ
    • ತಂತ್ರಜ್ಞಾನ
    • ದೇಶ-ವಿದೇಶ

    NEWS

    • ಬ್ರೇಕಿಂಗ್ ನ್ಯೂಸ್
    • ಬ್ರೇಕಿಂಗ್ ನ್ಯೂಸ್
    • ಅಪರಾಧ
    • ಮನೋರಂಜನೆ
    • ರಾಜ್ಯ

    TAGS

    • Featured
    • Top News

    Quick Links

    • Home
    • About
    • Contact Us
    • Privacy Policy
    • Terms & Conditions

    ©2024 Tulunada Surya. Developed by DMP

    Type above and press Enter to search. Press Esc to cancel.