ಬ್ರಹ್ಮಾವರ ತಾಲೂಕಿನ ಕೋಟ ಸಮೀಪ ಅಕ್ರಮ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಕೋಟ ಪೊಲೀಸರು ಭೇದಿಸಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕೋಟ ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣದ ಬಳಿ ನಡೆದ ದಾಳಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಏಪ್ರಿಲ್ 2ರಂದು ಸಂಜೆ 5.45ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ಮಹಾಂತೇಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಮೊಬೈಲ್ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, Kolkata Knight Riders (KKR) ಮತ್ತು Sunrisers Hyderabad (SRH) ತಂಡಗಳ ನಡುವಿನ ಐಪಿಎಲ್ ಟಿ20 ಪಂದ್ಯಕ್ಕೆ ಸಂಬಂಧಿಸಿದಂತೆ ಅಕ್ರಮ ಬೆಟ್ಟಿಂಗ್ ನಡೆಸುತ್ತಿರುವುದು ಪತ್ತೆಯಾಯಿತು.
ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ಆದಿತ್ಯ ಶೆಟ್ಟಿ (28) ಎಂದು ಗುರುತಿಸಲ್ಪಟ್ಟಿದ್ದಾನೆ. ನೂಜಿಯ ಸಂದೀಪ ಗಾಣಿಗನ ಸೂಚನೆಯಂತೆ “PARKER” ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್ಸೈಟ್ ಮೂಲಕ ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದುದಾಗಿ ಆತ ಒಪ್ಪಿಕೊಂಡಿದ್ದಾನೆ.
ಹೆಚ್ಚುವರಿ ವಿಚಾರಣೆಯಲ್ಲಿ, ಇತ್ತೀಚೆಗೆ ನಡೆದ Lucknow Super Giants (LSG) ಮತ್ತು Delhi Capitals ನಡುವಿನ ಪಂದ್ಯದಲ್ಲೂ ಇದೇ ರೀತಿಯಲ್ಲಿ ಬೆಟ್ಟಿಂಗ್ ಹಣ ಸಂಗ್ರಹಿಸಿ, ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಆರೋಪಿಯಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಇನ್ನೊಬ್ಬ ಪ್ರಮುಖ ಆರೋಪಿಯಾದ ಸಂದೀಪ ಗಾಣಿಗನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 57/2026 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕಲಂ 78 KP Act, 112 BNS ಹಾಗೂ 66(D) IT Act ಅಡಿಯಲ್ಲಿ ತನಿಖೆ ಮುಂದುವರಿಯುತ್ತಿದೆ.
Trending
- ಕೋಟದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಬಯಲು – ಒಬ್ಬ ಬಂಧನ, ಮತ್ತೊಬ್ಬನಿಗಾಗಿ ಶೋಧ ಮುಂದುವರಿಕೆ
- ಪುತ್ತೂರು : “ನ್ಯಾಯ ಸಿಗದಿದ್ದರೆ ಧ್ವಜಸ್ತಂಭದ ಮುಂದೆ ಧರಣಿ” – ಸಂತ್ರಸ್ತೆಯ ತಾಯಿ ಎಚ್ಚರಿಕೆ
- ಉಡುಪಿ: ಸುದೀಪ್ ರೈ ಆತ್ಮಹತ್ಯೆ ಪ್ರಕರಣ – ಆರೋಪಗಳಿಗೆ ಪತ್ನಿ ಸೌಮ್ಯ ಶೆಟ್ಟಿ ತಿರುಗೇಟು, ನಿಷ್ಪಕ್ಷಪಾತ ತನಿಖೆಗೆ ಆಗ್ರಹ
- ಮಂಗಳೂರು: ಗ್ರಾಮೀಣ ಸ್ವಚ್ಛತೆಗೆ ಕಠಿಣ ಕ್ರಮ – ನಿಯಮ ಉಲ್ಲಂಘನೆಗೆ ದಂಡ, ಎಫ್ಐಆರ್ ಎಚ್ಚರಿಕೆ
- ಮಂಜೇಶ್ವರದಲ್ಲಿ ಬಿಜೆಪಿ ಪರ ಚುನಾವಣಾ ಅಖಾಡಕ್ಕಿಳಿದ ಶಾಸಕ ಕಾಮತ್ :-
- ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಬಜ್ಪೆ: ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ
- 🛳️ ಮುಂಬೈ–ಲಕ್ಷದ್ವೀಪ ಸಮುದ್ರಯಾನ: ಯಕ್ಷಗಾನದೊಂದಿಗೆ ಭರ್ಜರಿ ಸಾಂಸ್ಕೃತಿಕ ಸಂಭ್ರಮ -ಕಾರ್ನೂರು ಮೋಹನ್ ರೈ
- ಕೊಳಲಗಿರಿಯಲ್ಲಿ ಪಿಂಕ್ ಸೂಪರ್ ಮೂನ್ ಸಂಭ್ರಮ: ಸಾರ್ವಜನಿಕರಿಗೆ ಅಪೂರ್ವ ಅನುಭವ

