Saturday, July 27, 2024
spot_img
More

    Latest Posts

    ಜ.14 ರಂದು ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ ಒಂದು ಆತ್ಮಾಭಿಮಾನದ ಕಥನ ಸಾಕ್ಷ್ಯ ಚಿತ್ರ ಮತ್ತು ಕೃತಿ ಬಿಡುಗಡೆ

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಗಳ ಅದ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಮಂಗಳೂರು ವತಿಯಿಂದ ದೈವರಾಜ ಶ್ರೀ ಕೋಟೆದ ಬಬ್ಬು ಸ್ವಾಮಿ ಒಂದು ಆತ್ಮಾಭಿಮಾನದ ಕಥನ ಸಾಕ್ಷ್ಯ ಚಿತ್ರ ಮತ್ತು ಕೃತಿ ಬಿಡುಗಡೆ ಸಮಾರಂಭವು ದಿನಾಂಕ 14-01-2024 ಆದಿತ್ಯ ವಾರ ಸಂಜೆ ಗಂಟೆ ಸೀ ವ್ಯೂ ಹೋಟೆಲ್ ಲೇಡಿಹಿಲ್ ವೃತ್ತ ಮಂಗಳೂರಿನಲ್ಲಿ ನಡೆಯಲಿದೆ.

    ಅರ್ಚಕರಾದ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಪಡ್ಡೋಡಿತುಳು ಚಲನಚಿತ್ರ ನಿರ್ದೇಶಕರು, ಪೊರ್ಲು ಆರ್ಟ್‌ ಕುಡ್ಲ ಶ್ರೀ ಬಿ.ಕೆ. ಗಂಗಾಧರ ಕಿರೋಡಿಯನ್‌ ದೀಪ ಬೆಳಗಿಸಲಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್‌ (ರಿ) ಅಧ್ಯಕ್ಷರಾದ ಶ್ರೀ ಮೋಹನಾಂಗಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು. ಮುಖ್ಯ ಅಥಿತಿಗಳಾಗಿ ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ ಕಾಮತ್‌, ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಭರತ್‌ ಕುಮಾರ್‌, ಎಸ್‌.ಸಿ. ಎಸ್‌.ಟಿ, ಸಂಘಟನೆಗಳ ಒಕ್ಕೂಟದ ಅದ್ಯಕ್ಷರಾದ ಶ್ರೀ ಲೋಲಾಕ್ಷ ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್‌, ಚಿಲಿಂಬಿ ಆಡಳಿತ ಮೊಕ್ತೇಸರಾದ ಶ್ರೀ ವಿಶ್ವಾಸ್‌ದಾಸ್‌, ಉಡುಪಿ ಜಿಲ್ಲೆಯ ಬೆಳಪು ಕವನ್‌ ಇಂಡಸ್ಟ್ರೀಸ್‌ ಮಾಲಕರಾದ ಶ್ರೀ ದಿನಕರ್‌ ಬಾಬು, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಶ್ರೀ ಯೋಗೀಶ್‌ ಶೆಟ್ಟಿ ಜಪ್ಪು ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss