- ಸೌಂದರ್ಯ ಸ್ಪರ್ಧೆ: ಮುಲ್ಕಿಯ ಶಿಖಾ ಸಿಶೀಲ್ ಗೆ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟ
- ಫೆಬ್ರವರಿ 22ರಂದು ಸಂಜೆ 5 ಗಂಟೆಗೆ ಕುಮಾರಿ ಶ್ರೇಯ ರಾವ್ ಸಣ್ಣಯ್ಯರ ಭರತನಾಟ್ಯ ರಂಗಪ್ರವೇಶ ಸಮಾರಂಭ
- ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು
- ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ ಆರೋಪಿ ಸರೆ
- ಖ್ಯಾತ ಶಿಕ್ಷಣ ತಜ್ಞ, ದೀರ್ಘದೃಷ್ಟಿಯ ಶಿಕ್ಷಣ ಸಂಸ್ಥಾಪಕ ಹಾಗೂ ಉದ್ಯಮಿ ಡಾ. ಸಿಎ ಎ. ರಾಘವೇಂದ್ರ ರಾವ್ ನಿಧನ
- ಯಶ್ ಪಾಲ್ ಸುವರ್ಣ ನಿತೇಶ್ ರಾಣೆ ಭೇಟಿ ಅಂತಾರಾಜ್ಯ ಮೀನುಗಾರಿಕೆ ಸಮಸ್ಯೆ ಪರಿಹಾರಕ್ಕೆ ಭರವಸೆ
- ದಲಿತ ಮಹಿಳೆಯ ಗಂಬೀರ ಆರೋಪ ಸಿ.ಐ.ಡಿ. ತನಿಖೆ ಒಪ್ಪಿಸಿ ಆರೋಪಿತನ ಹಾಗೂ ಸಂಬಂಧಿತ ವ್ಯಕ್ತಿಗಳ ದೂರವಾಣಿ ಕರೆಗಳ ಪರಿಶೀಲನೆ ಮಾಡುವಂತೆ ತುಳುನಾಡ ರಕ್ಷಣಾ ವೇದಿಕೆ ಪ್ರಶಾಂತ್ ಭಟ್ ಕಡಬ ಆಗ್ರಹ
- ಮಂಗಳೂರು: ದರ್ಶನ ಪಾತ್ರಿ ಮುಂಡ್ಕೂರು ಜಾರಿಗೆಕಟ್ಟೆ ದಿವಾಕರ ಪೂಜಾರಿ ದೈವಾರಾಧನೆ ಕ್ಷೇತ್ರದಲ್ಲಿ ಮಾದರಿ ಸೇವಕ : ಮುಲ್ಕಿ ಕರುಣಾಕರ ಶೆಟ್ಟಿ
Author: Tulunada Surya
ಮುಲ್ಕಿ : ತುಳು ಭಾಷೆ ಬೊಕ್ಕ ಸಂಸ್ಕೃತಿನ್ ಒರಿಪರೆ ಬೋಡಾದ್ 14 ವರ್ಷರ್ದ್ ದುಂಬು “ಟೈಮ್ಸ್ ಆಫ್ ಕುಡ್ಲ” ಪತ್ರಿಕೆನ್ ಪುಟ್ಟು ಪಾಡ್ದ್ 2025 ನೇ ಜನವರಿ 30 ತಾರೀಕ್ಗ್ ದೇವೆರೆ ಪಾದ ಸೇರಿನ “ತುಳುವ ನೇಸರೆ” ಬಿರ್ದ್ ಪಡೆತಿನ ಸಂಸ್ಥಾಪಕೆ, ತುಳು ಪೊರ್ಂಬಾಟಗಾರೆ ದಿ. ಶಶಿರಾಜ್ ಬಂಡಿಮಾರ್ ಮೆರೆನ ನೆಂಪು ಲೇಸ್ ಐತಾರ ಕಾಂಡೆ ಪುನರೂರು ಕಾಂಪ್ಲೆಕ್ಸ್ ಸ್ವಾಗತ್ ಹೋಟೆಲ್ದ ಚಾವಡಿಡ್ ನಡತ್ಂಡ್. ಸುರುಕ್ಕು ಬೈದಿ ಬಿನ್ನೆರ್ ಮಾತೆರ್ಲ ದಿ. ಶಶಿರಾಜ್ ಬಂಡಿಮಾರ್ ಮೆರೆನ ಭಾವಚಿತ್ರೊಗು ಪುರ್ಪ ಪಾಡ್ದ್ ಗೌರವ ಮಲ್ತೆರ್.ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಲೇಸ್ದ ಅಧ್ಯಕ್ಷತೆ ವಹಿಸ್ದಿತ್ತೆರ್. ಈ ಪೊರ್ತುಡು ಪಾತೆರ್ನ ಆರ್, ತುಳು ಬಾಷೆಗಾದ್ ಶಶಿ ಬಂಡಿಮಾರ್ ಪೊರ್ಂಬಾಟ ಮಲ್ದಿನಾರ್. ತುಳುನು ಒರಿಪಾವುನ ನಮ್ಮ ಕರ್ತವ್ಯ. ಭಾಷಾವಾರು ಪ್ರಾಂತ್ಯ ಆನಗ ತುಳುಕ್ಕು ಅನ್ಯಾಯ ಆತ್ಂಡ್. ಅವೆನ್ ಸರಿ ಮಲ್ಪರೆ ನಮ ಮಾತೆರ್ಲ ಒಟ್ಟು ಸೇರೊಡು . ನಮ್ಮ ಅಪ್ಪೆ ಬಾಸೆದ ಪತ್ರಿಕೆನ್ ಒರಿಪಾವುನ ಕೆಲಸ ಮಲ್ಪೊಡು…
ಮುಂಬೈ:ಬಾಲಿವುಡ್ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಐವರು ಯುವಕರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ‘ಶೆಟ್ಟಿ ಟವರ್’ ನಿವಾಸದ ಮೇಲೆ ಶನಿವಾರ ತಡರಾತ್ರಿ ಅಪರಿಚಿತರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದಾಳಿಯ ಬಳಿಕ ಶಂಕಿತರು ಪುಣೆಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಸುಳಿವಿನ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪುಣೆಯ ವಾರ್ಜೆ ಪೊಲೀಸ್ ಠಾಣೆ ಸಿಬ್ಬಂದಿ ಭಾನುವಾರ ಮಧ್ಯಾಹ್ನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮನ್ ಆನಂದ್ ಮರೋಟೆ (27), ಆದಿತ್ಯ ಜ್ಞಾನೇಶ್ವರ ಗಾಯಕೆ (19), ಸಿದ್ಧಾರ್ಥ್ ದೀಪಕ್ ಯೆನ್ಪುರೆ (20), ಸಮರ್ಥ ಶಿವಶಂಕರ್ ಪೊಮಾಜಿ (18) ಮತ್ತು ಸ್ವಪ್ನಿಲ್ ಬಂಡು ಸಕತ್ (23) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಪುಣೆಯ ನಿವಾಸಿಗಳಾಗಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳಿಗೆ ಯಾವುದೇ ಹಿಂದಿನ ಕ್ರಿಮಿನಲ್ ಹಿನ್ನೆಲೆ…
ಬ್ರಹ್ಮಾವರ:ನಿನ್ನೆ ಸಾಯಂಕಾಲ ಸಾಹೇಬ್ರಕಟ್ಟೆಯಿಂದ ಬ್ರಹ್ಮಾವರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಬಾರ್ಕೂರು ಬ್ರಿಡ್ಜ್ ಸಮೀಪ ಸಂಜೆ ಸುಮಾರು 4 ಗಂಟೆಯ ವೇಳೆಗೆ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಒಂದು ಬ್ಯಾಗ್ನ್ನು ರೋಶನ್ ಡಿಸೋಜ ಅಮ್ಮುಂಜೆ ಗಮನಿಸಿದರು.ತಕ್ಷಣವೇ ಬ್ಯಾಗ್ನ್ನು ತೆರೆದು ಪರಿಶೀಲಿಸಿದಾಗ, ಅದರೊಳಗೆ ಬಟ್ಟೆಗಳು ಹಾಗೂ ಬೆಲೆಬಾಳುವ ಚಿನ್ನಾಭರಣಗಳು ಇರುವುದನ್ನು ಕಂಡುಬಂದಿತು. ಯಾವುದೇ ಸಂಶಯಕ್ಕೆ ಆಸ್ಪದ ಕೊಡದೆ, ಅದೇ ಕ್ಷಣದಲ್ಲಿ ಈ ವಿಷಯವನ್ನು ತಮ್ಮ ವಾಟ್ಸಪ್ ಸ್ಟೇಟಸ್ ಹಾಗೂ ವಿವಿಧ ಗ್ರೂಪ್ಗಳ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡರು.ದೇವರ ಕೃಪೆಯಿಂದ ಹಾಗೂ ಸಾಮಾಜಿಕ ಜಾಲತಾಣದ ಸಹಕಾರದಿಂದ, ಬ್ಯಾಗ್ನ ನೈಜ ವಾರಸುದಾರರು ದಾವಣಗೆರೆಯವರು ಎಂಬುದು ಪತ್ತೆಯಾಗಿದ್ದು, ವಸ್ತುಗಳನ್ನು ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ತುಳುನಾಡ ರಕ್ಷಣಾ ವೇದಿಕೆ ಮುಖಂಡ ರೋಶನ್ ಡಿಸೋಜ ಅಮ್ಮುಂಜೆ “ಇದನ್ನು ಸಾಧನೆ ಎಂದು ತೋರಿಸಿಕೊಳ್ಳಲು ನಾನು ಹಂಚಿಕೊಂಡಿಲ್ಲ. ಬೇರೆಯವರ ವಸ್ತು ನಮಗೆ ಬೇಡ ಎಂಬ ಮನಸ್ಥಿತಿಯಿಂದಲೇ ಈ ನಡೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ವಸ್ತು ಕಳೆದುಕೊಂಡಾಗ ಆಗುವ ನೋವು ಎಷ್ಟು ದೊಡ್ಡದು ಅನ್ನೋದು ಅದನ್ನು ಅನುಭವಿಸಿದವರಿಗೇ ಗೊತ್ತು. ಆ ನೋವಿನ ಶಾಪ…
ತುಳುನಾಡ ಸೂರ್ಯ ನ್ಯೂಸ್, ದೊಡ್ಡಬಳ್ಳಾಪುರ ಪ್ರೀತಿ–ಮದುವೆ ಎಂಬ ಮುಖವಾಡದ ಹಿಂದೆ ಹಣದ ಬೇಟೆ? ಪ್ರೀತಿ, ನಂಬಿಕೆ ಮತ್ತು ಮದುವೆ ಎಂಬ ಪವಿತ್ರ ಸಂಬಂಧಗಳನ್ನು ಅಸ್ತ್ರವಾಗಿ ಮಾಡಿಕೊಂಡು ಪುರುಷರನ್ನು ವಂಚಿಸಿದ ಗಂಭೀರ ಆರೋಪಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಹಿಳೆಯೊಬ್ಬರ ವಿರುದ್ಧ ಕೇಳಿಬಂದಿವೆ. ದೊಡ್ಡಬಳ್ಳಾಪುರ ತಾಲೂಕಿನ ಸುಧಾರಾಣಿ ಎಂಬ ಮಹಿಳೆಯ ವಿರುದ್ಧ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಇದೀಗ ಜಿಲ್ಲೆ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿ–ಪ್ರೇಮ; ಮದುವೆ – ಆದರೆ ಉದ್ದೇಶ ಒಂದೇ? ಸುಧಾರಾಣಿ ಮದುವೆ ಎಂಬ ನೆಪದಲ್ಲಿ ಹಣವಿರುವ ಪುರುಷರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾಳೆ ಎಂಬ ಆರೋಪಗಳು ಗಂಭೀರ ಸ್ವರೂಪ ಪಡೆದಿವೆ. ಪ್ರೀತಿ–ಪ್ರೇಮದ ನಾಟಕವಾಡಿ ಮದುವೆಯಾಗುವುದು, ನಂತರ ವೈಯಕ್ತಿಕ ಸಮಸ್ಯೆಗಳು, ಚಿಕಿತ್ಸೆ, ಕುಟುಂಬದ ತುರ್ತು ಅಗತ್ಯಗಳನ್ನು ಮುಂದಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ಸಂಪರ್ಕ ಕಡಿತ ಮಾಡುವುದು – ಇದೇ ಆಕೆಯ ಕಾರ್ಯಪದ್ಧತಿ ಎಂದು ಆರೋಪಿಸಲಾಗಿದೆ. ಮೊದಲ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋದ ಸುಧಾರಾಣಿ?…
ಉಡುಪಿ:ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ಮಹತ್ವದ ಸಭೆಯು ದಿನಾಂಕ 01-02-2026 ರಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರ ಅದ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಂಘಟನೆಯ ಉಡುಪಿ ಜಿಲ್ಲೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಿಳಾ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೂತನ ಸದಸ್ಯರಾಗಿ ಮಹೇಶ್ ಪೂಜಾರಿ ಕೊಳಲಗಿರಿ, ನಾಗೇಶ್ ಭಂಡಾರಿ ಹಾವಂಜೆ , ಸುಮಿತ್ರ ಮದ್ವನಗರ ಮತ್ತಿತರ ಪ್ರಮುಖರು ಸೇರ್ಪಡೆಗೊಂಡರು. ಸಭೆಯಲ್ಲಿ ತುಳುನಾಡದ ಭಾಷೆ, ಸಂಸ್ಕೃತಿ, ಜಾನಪದ ಪರಂಪರೆ ಹಾಗೂ ಜನಪರ ಸಮಸ್ಯೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಸಂಘಟನೆಯ ಬಲವರ್ಧನೆ, ಗ್ರಾಮ–ಗ್ರಾಮಗಳಲ್ಲಿ ಘಟಕಗಳ ರಚನೆ, ಯುವಕರ ಹಾಗೂ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಾಮಾಜಿಕ ಹೋರಾಟಗಳು ಹಾಗೂ ಕಾರ್ಯಕ್ರಮಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಧ್ಯೇಯ–ಉದ್ದೇಶಗಳನ್ನು ಕಾರ್ಯಕರ್ತರಿಗೆ ವಿವರಿಸಲಾಯಿತು. ತುಳುನಾಡದ ಅಸ್ತಿತ್ವ, ಹಕ್ಕುಗಳು ಹಾಗೂ ಸಂಸ್ಕೃತಿಯ…
ತುಳುನಾಡ ಸೂರ್ಯ ಕ್ರೈಂ ನ್ಯೂಸ್ : ಸಮಾಜದಲ್ಲಿ ಶಿಕ್ಷಕ ಎಂಬ ಪದಕ್ಕೆ ಗೌರವ, ನಂಬಿಕೆ ಮತ್ತು ನೈತಿಕತೆ ಎಂಬ ಅರ್ಥಗಳು ಸಹಜವಾಗಿ ಅಂಟಿಕೊಂಡಿರುತ್ತವೆ. ಮಕ್ಕಳ ಭವಿಷ್ಯ ರೂಪಿಸುವವನು, ಮೌಲ್ಯಗಳನ್ನು ಕಲಿಸುವವನು ಎಂಬ ಭಾವನೆ ಜನಮನದಲ್ಲಿ ಗಟ್ಟಿಯಾಗಿರುತ್ತದೆ. ಆದರೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಆನೆಮಜಲು ಎಂಬ ಪುಟ್ಟ ಹಳ್ಳಿಯಿಂದ ಹೊರಟ ಒಬ್ಬ ಶಿಕ್ಷಕ, ಇದೇ ನಂಬಿಕೆಯನ್ನು ತನ್ನ ಅತಿ ಭೀಕರ ಅಪರಾಧಗಳಿಗೆ ಆಯುಧವನ್ನಾಗಿ ಮಾಡಿಕೊಂಡನು ಎಂಬುದು ನಮ್ಮ ಸಮಾಜದ ಪಾಲಿಗೆ ಅತ್ಯಂತ ಕಟುವಾದ ಸತ್ಯ. ಮೋಹನ್ ಕುಮಾರ್ – ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ. ಹೊರಗೆ ನೋಡಲು ಸಾಮಾನ್ಯ ವ್ಯಕ್ತಿ. ಆದರೆ ಆತನ ಒಳಗಿನ ವಿಕೃತ ಮನಸ್ಸು, ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸುವಂತಹ ಸರಣಿ ಕೊಲೆಗಳ ಮೂಲಕ ಹೊರಹೊಮ್ಮಿತು. ‘ಸೈನೈಡ್ ಮೋಹನ್’ ಎಂಬ ಹೆಸರು ಅಪರಾಧ ಲೋಕದಲ್ಲಿ ಮಾತ್ರವಲ್ಲ, ಮಾನವೀಯತೆಯ ಇತಿಹಾಸದಲ್ಲೇ ಒಂದು ಭಯಾನಕ ಅಧ್ಯಾಯವಾಗಿ ಉಳಿಯಿತು. ನಂಬಿಕೆಯೇ ಆಯುಧ, ಮೋಸವೇ ತಂತ್ರ ಮೋಹನ್ ಬಳಸಿಕೊಂಡ ಪ್ರಮುಖ ಅಸ್ತ್ರವೇ ನಂಬಿಕೆ.…
ಉಡುಪಿ: ಪೋಪ್ ಲಿಯೋ XIV ಅವರು ಉಡುಪಿ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ರೆವ್. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜ ಅವರನ್ನು ನೇಮಕ ಮಾಡಿದ್ದಾರೆ. ಈ ಕುರಿತು ಶನಿವಾರ, ಜನವರಿ 31, 2026ರಂದು ರೋಮ್ನಿಂದ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ) ಅಧಿಕೃತ ಘೋಷಣೆ ಹೊರಬಿದ್ದಿದೆ. ಇದೇ ಸಂದರ್ಭದಲ್ಲಿ ಉಡುಪಿ ಕಲ್ಯಾಣಪುರದ ಅವರ್ ಲೇಡಿ ಆಫ್ ಮಿಲಾಗ್ರಿಸ್ ಕತೆಡ್ರಲ್ನಲ್ಲಿಯೂ ಈ ಘೋಷಣೆ ಪ್ರಕಟಿಸಲಾಯಿತು. ನೇಮಕಕ್ಕೂ ಮೊದಲು ಅವರು ಶಿರ್ವದ ಅವರ್ ಲೇಡಿ ಆಫ್ ಹೆಲ್ತ್ ಚರ್ಚ್ನ ಪಾರಿಷ್ ಪ್ರೀಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರೆವ್. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜ ಅವರು ಆಗಸ್ಟ್ 19, 1962ರಂದು ಉಡುಪಿ ಜಿಲ್ಲೆಯ ಉಚ್ಚಿಲ (ಯರ್ಮಲ್)ದಲ್ಲಿ ಲಾರೆನ್ಸ್ ಡಿ’ಸೋಜ ಮತ್ತು ಸೆಸಿಲಿಯಾ ಡಿ’ಸೋಜ ದಂಪತಿಗಳಿಗೆ ಜನಿಸಿದರು. ಆಳವಾದ ಕ್ರೈಸ್ತ ನಂಬಿಕೆ ಮತ್ತು ಮೌಲ್ಯಗಳಿಂದ ಬೆಳೆದ ಕುಟುಂಬದಲ್ಲಿ ಎಂಟು ಸಹೋದರ-ಸಹೋದರಿಯರಲ್ಲಿ ಅವರು ಒಬ್ಬರು. ಅವರ ಹಿರಿಯ ಸಹೋದರಿಯರಾದ ವೆರೋನಿಕಾ ಡಿ’ಸೋಜ ಮತ್ತು ಕ್ರಿಸ್ಟಿನ್ ಡಿ’ಸೋಜ…
ತುಮಕೂರು :ಕಾನೂನು ಕಾಪಾಡಬೇಕಾದವರೇ ಲಂಚದ ಜಾಲಕ್ಕೆ ಸಿಲುಕಿರುವ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿ, ಪಿಎಸ್ಐ ಚೇತನ್ ಕುಮಾರ್ ಅವರು ಒಟ್ಟು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರ ಮೊದಲ ಹಂತವಾಗಿ 40 ಸಾವಿರ ರೂ. ಲಂಚ ಪಡೆಯುವ ವೇಳೆ, ಲೋಕಾಯುಕ್ತ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲೇ ದಾಳಿ ನಡೆಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ, ಪಿಎಸ್ಐ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ವಿಸ್ತೃತ ತನಿಖೆ ಮುಂದುವರಿದಿದೆ. ➡️ ಲಂಚಮುಕ್ತ ಆಡಳಿತದ ಮಾತುಗಳ ನಡುವೆಯೇ, ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರ ಮತ್ತೊಮ್ಮೆ ಬಹಿರಂಗವಾಗಿದೆ.
ಗಗನಚುಂಬಿ ಕಟ್ಟಡಗಳು, ಐಷಾರಾಮಿ ಹೋಟೆಲ್ಗಳು, ರೆಸಾರ್ಟ್ಗಳು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದ ಮೂಲಕ ತಮ್ಮದೇ ಆದ ಸಾಮ್ರಾಜ್ಯ ನಿರ್ಮಿಸಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಚೇರ್ಮೆನ್ ಸಿಜೆ ರಾಯ್ ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ಉದ್ಯಮ ವಲಯವನ್ನು ಬೆಚ್ಚಿಬೀಳಿಸಿದೆ. ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಹತ್ವದ ವಾಣಿಜ್ಯ ಮತ್ತು ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದ ಸಿಜೆ ರಾಯ್, ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಉದ್ಯಮಶೀಲತೆಯ ಮೂಲಕ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯನ್ನು ಕಟ್ಟಿಕೊಂಡಿದ್ದರು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹೋಟೆಲ್, ಆತಿಥ್ಯ ಹಾಗೂ ಮನರಂಜನಾ ಕ್ಷೇತ್ರಗಳಲ್ಲಿಯೂ ಅವರು ಪ್ರಮುಖ ಹೆಸರು ಆಗಿದ್ದರು. ಜನಪ್ರಿಯ ಬಿಗ್ ಬಾಸ್ ಕಾರ್ಯಕ್ರಮ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿ ಸಾರ್ವಜನಿಕರ ಗಮನ ಸೆಳೆದಿದ್ದರು. ಪ್ರಾಥಮಿಕ ಮಾಹಿತಿಯಂತೆ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ತೀವ್ರ ಮನಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಕೆಲವು ಸಮಯದಿಂದ…
ಕೊಡಗು :ಮೂರ್ನಾಡುಆಪ್ತಮಿತ್ರ ಬಳಗ ಮೂರ್ನಾಡು ಇವರ ಸೇವಾರ್ಥವಾಗಿ ನಡೆಯುವ “ಮೂರ್ನಾಡು ಯಕ್ಷೋತ್ಸವ” ಕಾರ್ಯಕ್ರಮವು ಫೆಬ್ರವರಿ 1ರಂದು ಆದಿತ್ಯವಾರ ಸಂಭ್ರಮದಿಂದ ನಡೆಯಲಿದೆ. ಯಕ್ಷಗಾನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜನಸಾಮಾನ್ಯರಿಗೆ ಇನ್ನಷ್ಟು ಸಮೀಪಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಸಂಜೆ 6.00 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮೂರ್ನಾಡುವಿನಲ್ಲಿ ನಡೆಯಲಿದ್ದು ಯಕ್ಷಗಾನ ಪ್ರೇಮಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಯಕ್ಷೋತ್ಸವದ ಮುಖ್ಯ ಆಕರ್ಷಣೆಯಾಗಿ ಶ್ರೀ ಹನುಮಗಿರಿ ಮೇಳದವರಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಧಾರ್ಮಿಕ, ಪೌರಾಣಿಕ ಮಹತ್ವ ಹೊಂದಿರುವ ಈ ಪ್ರಸಂಗವು ಭಕ್ತರಿಗೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ನೀಡಲಿದೆ. ಕಾರ್ಯಕ್ರಮದಲ್ಲಿ ತಮಗೆಲ್ಲರಿಗೂ ಆತಿಥ್ಯವಿರಲಿದೆ. ಯಕ್ಷಗಾನ ಕಲಾವಿದರ ನೈಪುಣ್ಯ, ವೇಷಭೂಷಣ, ಸಂಗೀತ ಹಾಗೂ ಸಂಭಾಷಣೆಯ ಸೊಗಡಿನಿಂದ ಕಾರ್ಯಕ್ರಮವು ರಾತ್ರಿಯಿಡೀ ರಂಗೇರಲಿದೆ. ಈ ಹಿನ್ನೆಲೆಯಲ್ಲಿ ಆಪ್ತಮಿತ್ರ ಬಳಗ ಮೂರ್ನಾಡು ವತಿಯಿಂದ ಯಕ್ಷಗಾನ ಅಭಿಮಾನಿಗಳು, ಕಲಾಸಕ್ತರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
