ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಇದರ ಜನಪರ, ಸಾಮಾಜಿಕ ಚಟುವಟಿಕೆಗಳಲ್ಲಿ ಸಂಪೂರ್ಣ ಸಹಕಾರ ಹಾಗು ಉಡುಪಿ ಜಿಲ್ಲಾ ಖಾಝಿ ಯಾಗಿದ್ದ ತಾಜುಲ್ ಫುಕಹಾಹ್ ಬೇಕಲ್ ಉಸ್ತಾದ್ ಇಬ್ರಾಹಿಂ ಮುಸ್ಲಿಯಾರ್ ಅವರ ಅನುಸ್ಮರಣೆ ನಿಮಿತ್ತ ನಡೆದ ಬೃಹತ್ ವಿದ್ವಾಂಸ, ಉಮರಾ ಸಮಾವೇಶಕ್ಕೆ ಸ್ಥಳಾವಕಾಶ ಹಾಗೂ ಸಂಪೂರ್ಣ ಸಹಕಾರ ನೀಡಿದ ಬದ್ರಿಯಾ ಜುಮುಅ ಮಸ್ಜಿದ್ ಮಲ್ಲಾರು – ಮಜೂರು ಆಡಳಿತ ಸಮಿತಿಗೆ ಸುನ್ನೀ ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಮೂಳೂರು ಸುನ್ನೀ ಸೆಂಟರ್ ನಲ್ಲಿ ನಡೆದ ಅಸಂಬ್ಲೇಜ್ ಕಾರ್ಯಕ್ರಮದಲ್ಲಿ ಉಪ ಖಾಝಿ ಅಬ್ದುರ್ರಹ್ಮಾನ್ ಮದನಿ ಯವರ ದಿವ್ಯ ಹಸ್ತದ ಮೂಲಕ
ಗೌರವ ಸಲ್ಲಿಸಲಾಯಿತು. ಗೌರವ ಸಮರ್ಪಣೆಯನ್ನು ಸ್ವೀಕರಿಸಿದ ಅಧ್ಯಕ್ಷ ಡಾ.ಎಂ.ಫಾರೂಕ್ ರವರು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಸಹಕಾರವು ಮುಂದುವರೆಯಲಿದೆ ಎಂದು ಡಾ.ಫಾರೂಕ್ ರವರು ತಿಳಿಸಿದರು.
ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕರ್ ನೇಜಾರ್,
ಕಾರ್ಯದರ್ಶಿ ಬಾವು ಹಾಜಿ ಮೂಳೂರು, ಖತೀಬ್ ಅಬ್ದುರ್ರಶೀದ್ ಸಖಾಫಿ, ಮೂಳೂರು ಮುದರ್ರಿಸ್ ಹಾಫಿಳ್ ಅಶ್ರಫ್ ಸಖಾಫಿ, ಸುನ್ನೀ ಉಲಮಾ ಒಕ್ಕೂಟದ ಕಾರ್ಯದರ್ಶಿ ಸುಲೈಮಾನ್ ಸಅದಿ, ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಹುಸೈನ್ ಪಡುಕೆರೆ
ಉಪಸ್ಥಿತರಿದ್ದರು. ಮಿತ್ತೂರು ಹಂಝ ಮದನಿ ಧ್ಯೇಯೋದ್ದೇಶ ತರಗತಿ ಮಂಡಿಸಿದರು.
ಸಂಘಟನಾ ಕಾರ್ಯದರ್ಶಿ ಕಲ್ಕಟ್ಟ ಅಬ್ದುರ್ರಹ್ಮಾನ್ ರಝ್ವೀ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಫುರ್ಖಾನೀ ಸ್ವಾಗತವನ್ನು, ಕಾರ್ಯದರ್ಶಿ ಎನ್.ಸಿ.ರಹೀಮ್ ಧನ್ಯವಾದವನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಎಂ ಜಮಾತ್ ಕಮಿಟಿ ಪರವಾಗಿ ಸಮಿತಿ ಕಾರ್ಯದರ್ಶಿ ಅಶ್ರಫ್ ಕರಂದಾಡಿ ಸದಸ್ಯರಾದ ರಝಕ್ ಕೊಪ್ಪ ಭಾಗವಹಿಸಿದ್ದರು
Trending
- ಮಲ್ಲಾರು–ಮಜೂರು ಬದ್ರಿಯಾ ಜುಮುಅ ಮಸೀದಿ ಆಡಳಿತ ಸಮಿತಿಗೆ ಗೌರವಾಭಿನಂದನೆ
- ವೃಕ್ಷ ಸಂತ್ರಸ್ತರಿಗೆ ತ್ವರಿತ ನ್ಯಾಯ, ಕೊಳಂಬೆ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ತುಳುನಾಡ ರಕ್ಷಣಾ ವೇದಿಕೆ ಮನವಿ
- ಸಕ್ರಿಯ ರಾಜಕಾರಣಕ್ಕೆ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಅಸೈಗೋಳಿ ಮರಳಿಕೆ; ಜೆಡಿಎಸ್ಗೆ ಮತ್ತಷ್ಟು ಬಲ
- ಹೊಂಡಕ್ಕೆ ಬಿದ್ದು ಪ್ರಾಣಾಪಾಯದಲ್ಲಿದ್ದ ಗೋವಿನ ರಕ್ಷಣೆ ಮಾಡಿದ ಬಾಲಕರು
- ಪತ್ರಿಕಾ ದಿನಾಚರಣೆ: ನೈಜ ಸುದ್ದಿಗಳೇ ಆರೋಗ್ಯಕರ ಸಮಾಜದ ಅಡಿಪಾಯ – ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ
- ನಾಗೋರಿ ದುರಂತ ಸ್ಥಳಕ್ಕೆ ಜೆಡಿಎಸ್ ನಿಯೋಗ ಭೇಟಿ: ಮೃತರ ಕುಟುಂಬಕ್ಕೆ ನ್ಯಾಯಸಮ್ಮತ ಪರಿಹಾರ, ಅಪಾಯದ ಪ್ರದೇಶಗಳಿಗೆ ಶಾಶ್ವತ ಸುರಕ್ಷತಾ ಕ್ರಮ ಕೈಗೊಳ್ಳಲು ಒತ್ತಾಯ
- ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮಲ್ಲಿಕಾ ಜೆ ರೈ ಅವರಿಗೆ ‘ಚುಟುಕು ಶ್ರೀ ರಾಜ್ಯ ಪ್ರಶಸ್ತಿ’ ಪ್ರದಾನ
- ಮಂಗಳೂರಿನ ನಾಗೋರಿ ಭೂಕುಸಿತ ದುರಂತ: ಮೃತರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು, ಅಪಾಯದ ಪ್ರದೇಶಗಳ ನಿವಾಸಿಗಳನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು – ತುಳುನಾಡ ರಕ್ಷಣಾ ವೇದಿಕೆ ಆಗ್ರಹ

