ವೀಣಾ ಡೆಕೋರ್ & ಇವೆಂಟ್ಸ್ ಮಾಲಕರಾದ ನವೀನ್ ಚಂದ್ರ ಸಾಲ್ಯಾನ್ ಮಾಲಕತ್ವದ V.d trophy 2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಕರಂಬಾರು ಕೊಪ್ಪಲ ಕ್ರಿಡಾಂಗಣದಲ್ಲಿ ನಡೆಯಿತು. ಕ್ರಿಕೆಟ್ ಪಂದ್ಯಾಟ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೋರೇಷನ್ ಮಾಲಕರ ಸಂಘದ ಅಧ್ಯಕ್ಷರಾದ ತುಷಾರ್ ಸುರೇಶ್ ಉದ್ಘಾಟಿಸಿ ಕ್ರೀಡಾ ಕೂಟಕ್ಕೆ ಶುಭ ಹ್ಯಾರೆಸಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಡಾ ಸ್ಫೂರ್ತಿ ಮುಖ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಸುರೇಶ್ ಪೂಜಾರಿ ಉಪಾಧ್ಯಕ್ಷರು ದ.ಕ ಜಿಲ್ಲಾ ಪ್ಲವರ್ ಡೇಕೋರೇಶನ್ ಯುನಿಯನ್, ಸುರೇಶ್ ಪೂಜಾರಿ ಕೊಪ್ಪಲ, ಗಣೇಶ್ ಅರ್ಬಿ ಮಾಜಿ ಅಧ್ಯಕ್ಷರು ಮಳವೂರು ಗ್ರಾಮ ಪಂಚಾಯತ್, ಶ್ರೀನಿವಾಸ ಕಾವೂರು ಮಾಲಕರು ಕಚ್ಚೂರ್ ಮಾಲ್ಡಿ ಕ್ಯಾಂಟಿನ್, ಸುರೇಂದ್ರ ಕಾಮತ್ ಕೆಂಜಾರು, ಸ್ವಾನಿ ಅಂಚನ್ ಪ್ಲವರ್ ಡೇಕೋರೇಶನ್ ಮಾಲಕರು ಉಪಸ್ಥಿತಿರಿದ್ದರು ಕಾರ್ಯಕ್ರಮ ವನ್ನು ರಾಕೇಶ್ ಕುಂದರ್ ನಿರೂಪಿಸಿದರು ವಿನಯ್ ಸಾಲ್ಯಾನ್ ವಂದಿಸಿದರು.
