ತಲಪಾಡಿ : ಭ್ಯಾರತಿ ಕವಿ, ಸಂಸ್ಕೃತಜ್ಞ ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀ ಸುಬ್ಬ ಪಕ್ಕಳ ಪಂಜಾಳ (80) ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾದರು.
ತಲಪಾಡಿಯ ಕಾರಂತರ ಪಾಲು ಮನೆಯವರಾಗಿ ಪ್ರಸಿದ್ಧರಾಗಿದ್ದ ಶ್ರೀ ಪಂಜಾಳ ಅವರು, ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದು, ನಂತರ ಶಿಕ್ಷಕರಾಗಿ ಹಾಗೂ ಪ್ರಾಂಶುಪಾಲರಾಗಿ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದರು.
1976 ರಿಂದ 1981ರವರೆಗೆ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ (ಈಗಿನ ಪಿ.ಎ. ಕಾಲೇಜು) ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ಬೆಂಗಳೂರು ಸರ್ಕಾರಿ ಕಾಲೇಜಿನಲ್ಲಿ ಮುಖ್ಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ತಲಪಾಡಿ–ದೇವಿಪುರ ಪರಿಸರದಲ್ಲಿ ಹಿರಿಯ ಶಿಕ್ಷಕರಾಗಿ ಗುರುತಿಸಿಕೊಂಡಿದ್ದ ಅವರು, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಜೀವನಕ್ಕೆ ದಾರಿ ತೋರಿದವರು. ನಿವೃತ್ತಿಯ ನಂತರವೂ ವಿವಿಧ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳೊಂದಿಗೆ ತಲೆ ಸಂಯೋಜಕರಾಗಿ ಕಾರ್ಯನಿರ್ವಹಿಸಿ, ಉಚಿತ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡುತ್ತಿದ್ದರು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದ ಅವರು, ತಮ್ಮ ಜೀವಿತಾವಧಿಯಲ್ಲೇ ದೇಹದಾನ ಮಾಡುವ ಕುರಿತು ಕರಾರು ಬರೆದು, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾನ ಮಾಡಿರುವುದು ಗಮನಾರ್ಹವಾಗಿದೆ.
ಮೃತರ ಅಂತಿಮ ಯಾತ್ರೆ ಅವರ ಕೋರಿಕೆಯಂತೆ ಪಿ.ಎ. ಕಾಲೇಜು ಸಮೀಪದ ಅವರ ಸ್ವಂತ ಮನೆಯಿಂದ ಇಂದು ಸಂಜೆ 5.30 ಗಂಟೆಗೆ ನೆರವೇರಲಿದೆ.
ಅವರ ನಿಧನದಿಂದ ಹಾರೋ ವಿಧದ ಸಮುದಾಯಕ್ಕೆ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
Trending
- ಲೈಂಗಿಕ ಕಿರುಕುಳ ಆರೋಪಕ್ಕೆ ಬಿಗಿ ಕ್ರಮ: ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಅಮಾನತು
- ಎಂಸಿಸಿ ಬ್ಯಾಂಕ್ ವ್ಯವಹಾರ ವಹಿವಾಟು ₹1,535 ಕೋಟಿಗೆ ಏರಿಕೆ : ಅಧ್ಯಕ್ಷ ಅನಿಲ್ ಲೋಬೊ
- ಶರಣಾಗಲು ಸಿದ್ಧನಿದ್ದ ವ್ಯಕ್ತಿಯ ಎನ್ಕೌಂಟರ್? ಭರತ್ ಭೂಷಣ ತಿವಾರಿ ಪ್ರಕರಣಕ್ಕೆ ಭಾರೀ ಟ್ವಿಸ್ಟ್ – ಪೊಲೀಸರ ಲೋಪ ಒಪ್ಪಿಕೊಂಡ ಎಡಿಜಿಪಿ, ಐವರು ಅಧಿಕಾರಿಗಳ ಅಮಾನತು!
- ಕಾಡಿನ ಮಧ್ಯೆ ಹೆಬ್ರಿ ಪೊಲೀಸ್ ಠಾಣೆ: ಸಾರ್ವಜನಿಕರು ಹಾಗೂ ಸಿಬ್ಬಂದಿ ಸಂಕಷ್ಟದಲ್ಲಿ – ಸ್ಥಳಾಂತರಕ್ಕೆ ಜೆಡಿಎಸ್ ಆಗ್ರಹ
- ಮಂಗಳೂರು ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ ಗಣ್ಯರ ಸಂತಾಪ
- ಹೊಸ ಪಡಿತರ ಚೀಟಿ ವಿತರಣೆಗೆ ಆಗ್ರಹಿಸಿ ಸಚಿವರಿಗೆ ಜೆಡಿಎಸ್ ನಿಯೋಗದಿಂದ ಮನವಿ ಸಲ್ಲಿಕೆ
- ಉದ್ಯಾವರ ಪಾಪನಾಶಿನಿ ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ; ಮೃತದೇಹ ಪತ್ತೆ
- ಸರ್ಕಾರಿ ಆಸ್ಪತ್ರೆಗಳಲ್ಲಿ ದಲ್ಲಾಳಿಗಳಿಗೆ ಬ್ರೇಕ್: ಆರೋಗ್ಯ ಸಚಿವರಿಂದ 24×7 ನೇರ ಸಹಾಯವಾಣಿ ಘೋಷಣೆ

