ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕದ ಸಭೆ ಜಯ ಪೂಜಾರಿ ಲಕ್ಷ್ಮಿ ನಗರ ರವರ ಅಧ್ಯಕ್ಷತೆಯಲ್ಲಿ ದಿನಾಂಕ 10-11-2024 ರಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ಜರಗಿತು . ಸಭೆಯಲ್ಲಿ ಕಾರ್ಮಿಕ ಘಟಕ ಬಲಪಡಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ಹಲವಾರು ಪ್ರಮುಖ ವಿಷಯಗಳ ಬಗ್ಗೆ ಕಾರ್ಮಿಕ ಘಟಕ ಜಿಲ್ಲಾ ಪದಾಧಿಕಾರಿಗಳ ಗಮನಸೆಳೆದರು ಹಾಗೂ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಉಡುಪಿ ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್, ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಶೋಭಾ ಪಾಂಗಳ, ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಲ ಆಮೀನ್, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಾಸ್ಟರ್ , ಕಾರ್ಮಿಕ ಘಟಕ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ , ಜೊತೆ ಕಾರ್ಯದರ್ಶಿ ಮೊಹಮ್ಮದ್ ಮಜೀದ್ , ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಮಹಿಳಾ ಜಿಲ್ಲಾ ಕೋಶಾಧಿಕಾರಿ ಸುನಂದ ಕೋಟ್ಯಾನ್ , ಮಹಿಳಾ ಮುಖಂಡರುಗಳಾದ ಜ್ಯೋತಿ ಉಡುಪಿ, ಮಮತಾ ಸುಶೀಲಾ ಜ್ಯೋತಿ ಸಾಸ್ತಾನ , ಲಕ್ಷ್ಮೀಬಾಯಿ ರವಿಜಾ ಶ್ಯಾಮಲ ನಿರ್ಮಲ ಸುಶೀಲ ನಂದನ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾಧವ ತೋಳಾರ್, ಪುರಂದರ ಕುಂದರ್ , ಬಿಕೆ ಮಂಜುನಾಥ್, ಬಿ ಬಾಲರಾಜ್ , ರಾಯಪ್ಪ ನಾಗಪ್ಪ , ಅಕ್ಕಮ್ಮ , ಅಕ್ಷತಾ , ಸರೋಜಾ ಮತ್ತಿತರರು ಸಂಘಟನೆಗೆ ಸೇರ್ಪಡೆಗೊಂಡರು, ಅವರನ್ನು ಶಾಲು ಹಾಕಿ ಸಂಘಟನೆ ಬರಮಾಡಿಕೊಳ್ಳಲಾಯಿತು.
Trending
- ಧರ್ಮಸ್ಥಳ : 27 ವರ್ಷಗಳ ಬಳಿಕ ಮಗನ ಸ್ಪರ್ಶ; ತಾಯಿಯ ಕಣ್ಣೀರಿನಲ್ಲಿ ಕರಗಿದ ನಿರೀಕ್ಷೆಯ ಕಥೆ
- ಪ್ರೇಯಸಿಯ ಹೆಸರಿನಲ್ಲಿ ಕರೆಸಿ ಯುವಕನ ಮೇಲೆ ಕ್ರೂರ ಹಲ್ಲೆ; ತುಮಕೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ
- ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಕದ್ರಿ ದೇವಸ್ಥಾನದಲ್ಲಿ ವಿಶೇಷ ರಂಗ ಪೂಜೆ
- ಫ್ಲೆಕ್ಸ್ ಅಳವಡಿಸುವವರ ವಿರುದ್ಧ ಕಾನೂನು ಕ್ರಮ ಜಿಲ್ಲಾಡಳಿತ ಎಚ್ಚರಿಕೆ
- ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಜೂನ್ 12ರಂದು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ
- ಸೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆ ಪಾರಂಭೋತ್ಸವ..
- ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬೂತ್ ಮಟ್ಟದ ಏಜೆಂಟ್ಗಳ ಕಾರ್ಯಾಗಾರ
- ರಾಜ್ಯಸಭಾ ಸ್ಥಾನಕ್ಕಾಗಿ ಯಾವುದೇ ವ್ಯಾಮೋಹವಿಲ್ಲ; ಜನಸೇವೆಯೇ ನನ್ನ ರಾಜಕೀಯ ಬದುಕಿನ ಮೂಲ ಧ್ಯೇಯ: ಹೆಚ್.ಡಿ. ದೇವೇಗೌಡ

