ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕದ ಸಭೆ ಜಯ ಪೂಜಾರಿ ಲಕ್ಷ್ಮಿ ನಗರ ರವರ ಅಧ್ಯಕ್ಷತೆಯಲ್ಲಿ ದಿನಾಂಕ 10-11-2024 ರಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ಜರಗಿತು . ಸಭೆಯಲ್ಲಿ ಕಾರ್ಮಿಕ ಘಟಕ ಬಲಪಡಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ಹಲವಾರು ಪ್ರಮುಖ ವಿಷಯಗಳ ಬಗ್ಗೆ ಕಾರ್ಮಿಕ ಘಟಕ ಜಿಲ್ಲಾ ಪದಾಧಿಕಾರಿಗಳ ಗಮನಸೆಳೆದರು ಹಾಗೂ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಉಡುಪಿ ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್, ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಶೋಭಾ ಪಾಂಗಳ, ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಲ ಆಮೀನ್, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಾಸ್ಟರ್ , ಕಾರ್ಮಿಕ ಘಟಕ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ , ಜೊತೆ ಕಾರ್ಯದರ್ಶಿ ಮೊಹಮ್ಮದ್ ಮಜೀದ್ , ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಮಹಿಳಾ ಜಿಲ್ಲಾ ಕೋಶಾಧಿಕಾರಿ ಸುನಂದ ಕೋಟ್ಯಾನ್ , ಮಹಿಳಾ ಮುಖಂಡರುಗಳಾದ ಜ್ಯೋತಿ ಉಡುಪಿ, ಮಮತಾ ಸುಶೀಲಾ ಜ್ಯೋತಿ ಸಾಸ್ತಾನ , ಲಕ್ಷ್ಮೀಬಾಯಿ ರವಿಜಾ ಶ್ಯಾಮಲ ನಿರ್ಮಲ ಸುಶೀಲ ನಂದನ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾಧವ ತೋಳಾರ್, ಪುರಂದರ ಕುಂದರ್ , ಬಿಕೆ ಮಂಜುನಾಥ್, ಬಿ ಬಾಲರಾಜ್ , ರಾಯಪ್ಪ ನಾಗಪ್ಪ , ಅಕ್ಕಮ್ಮ , ಅಕ್ಷತಾ , ಸರೋಜಾ ಮತ್ತಿತರರು ಸಂಘಟನೆಗೆ ಸೇರ್ಪಡೆಗೊಂಡರು, ಅವರನ್ನು ಶಾಲು ಹಾಕಿ ಸಂಘಟನೆ ಬರಮಾಡಿಕೊಳ್ಳಲಾಯಿತು.
Trending
- ಉಡುಪಿಯಲ್ಲಿ ಸಹಕಾರಿ ಸೊಸೈಟಿ ಸಿಇಒ ಆತ್ಮಹತ್ಯೆ ,ಅಂಬಲಪಾಡಿ ಫ್ಲಾಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಸಾವಿನ ಹಿಂದಿನ ಕಾರಣ ನಿಗೂಢ
- ‘ರೌಟ್ಲೆಜ್’ ನಿಂದ ಮಹತ್ವದ ಪುಸ್ತಕ ಬಿಡುಗಡೆ:’21ನೇ ಶತಮಾನದ ಭಾರತದಲ್ಲಿ ಅಸ್ಪೃಶ್ಯತೆ’
- ಡೇವಿಡ್ ಡಿಸೋಜ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ 10 ದಿನಗಳ ಪೊಲೀಸ್ ಕಸ್ಟಡಿ
- ಡಾ.ಮಾಲತಿ ಶೆಟ್ಟಿ ಮಾಣೂರು ರವರಿಗೆ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ
- ಮೂಡುಬಿದಿರೆ: ಕ್ವಾರಿ ಕೋರೆಗೆ ಉರುಳಿದ ಲಾರಿ; ಅದೃಷ್ಟವಶಾತ್ ಜೀವಹಾನಿ ಇಲ್ಲ
- ತುಳು ಕೂಟ ಬೆದ್ರಕ್ಕೆ ನೂತನ ಸಾರಥ್ಯ, ಅಧ್ಯಕ್ಷರಾಗಿ ತುಳು ಸಾಹಿತಿ ಜಯಂತಿ ಎಸ್. ಬಂಗೇರ, ಕಾರ್ಯದರ್ಶಿಯಾಗಿ ಚೇತನಾ ಹೆಗ್ಡೆ ಆಯ್ಕೆ
- ಮಂಗಳೂರು ದಕ್ಷಿಣ ಜೆಡಿಎಸ್ ಕ್ಷೇತ್ರದ ಸಭೆ ಪಕ್ಷ ಸಂಘಟನೆ ಬಲಪಡಿಸಲು ಒಗ್ಗಟ್ಟಿನ ಕಾರ್ಯಕ್ಕೆ ಕರೆ
- ಕೋಟಿ ಕೋಟಿ ಹಣದ ವಂಚನೆ ಜಾಲಕ್ಕೆ ಪೊಲೀಸರ ಬೇಟೆ: ದಂಪತಿ ಬಂಧನ,₹2 ಲಕ್ಷದಿಂದ ₹20 ಲಕ್ಷದವರೆಗೆ ಹಣ ಪಡೆದು ವಂಚನೆ ಆರೋಪ | ಡ್ರೈಫ್ರೂಟ್ಸ್–ಅಗರಬತ್ತಿ ಉದ್ಯೋಗದ ಆಮಿಷ | ಹಣವೂ ಇಲ್ಲ, ಕೆಲಸವೂ ಇಲ್ಲ!

