ಪ್ರಶಸ್ತಿ ವಿಜೇತ ಖ್ಯಾತ ತುಳು ಸಾಹಿತಿ ಶ್ರೀಮತಿ ಜಯಂತಿ ಬಂಗೇರ ಇವರ ಪತಿ, ಮೂಡಬಿದ್ರಿ ಸಪಲಿಗ ಸೇವಾ ಸಂಘದ ಮಾಜಿ ಅಧ್ಯಕ್ಷರು , ಮೂಡಬಿದ್ರೆ ಸುಜಯ ಹಾಲೋ ಬ್ಲಾಕ್ ಇಂಡಸ್ಟ್ರಿ ಇದರ ಮಾಲಕರಾದ ಶ್ರೀ ಸದಾಶಿವ ಬಂಗೇರ (72 ವ ) ಇವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 09-03-2025 ರಂದು ನಿಧನ ಹೊಂದಿದರು. ಅಂತ್ಯಕ್ರಿಯೆ ಸಂಜೆ 7.30 ಕೆ ಜರುಗಿತು. ಮೃತರ ಪತ್ನಿ ತುಳು ಸಾಹಿತಿ, ಉಡಲ್ ತುಳು ತ್ರೈಮಾಸಿಕ ಪತ್ರಿಕೆ ಸಂಪಾದಕಿ ಜಯಂತಿ ಬಂಗೇರ, ಪುತ್ರ ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 13 ವರ್ಷ ಎಂ.ಆರ್.ಪಿ. ಎಲ್ ನಲ್ಲಿ ಉದ್ಯೋಗದಲ್ಲಿದರು. ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಾಗಿದ್ದರು. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರ ಅಗಲುವಿಕೆಯಿಂದ ದುಃಖತಪ್ತ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ . ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ,ತುಳು ವರ್ಲ್ಡ್ ಫೌಂಡೇಶನ್ ಡಾ. ರಾಜೇಶ್ ಆಳ್ವ, ತುಳು ಕೂಟ ಕುಡ್ಲ ಅಧ್ಯಕ್ಷೆ ಹೇಮ ದಾಮೋದರ್ ನಿಸರ್ಗ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ
Trending
- ರೆಡ್ಕ್ರಾಸ್ನಿಂದ ವಿಶ್ವ ರಕ್ತದಾನಿಗಳ ದಿನಾಚರಣೆನಿರಂತರ ರಕ್ತದಾನದಿಂದ ಆರೋಗ್ಯಪೂರ್ಣ ಹೃದಯಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಮಾಹಿತಿ
- ಮಳೆ ಹಾನಿಗೆ ಯಾವುದೇ ಸಾವು ನೋವುಗಳಾಗದಂತೆ ಎಚ್ಚರಿಕೆ ವಹಿಸಿ – ಜಿಲ್ಲಾಡಳಿತಕ್ಕೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ಗುಡ್ಡ ಕುಸಿತವಾದ ಸ್ಥಳಗಳಲ್ಲಿ ನ್ಯಾಷನಲ್ ಹೈವೇ ಅವರೊಂದಿಗೆ ಸಂಪರ್ಕದಲ್ಲಿದ್ದು ತೆರವು ಕಾರ್ಯಾಚರಣೆ ಕೈಗೊಳ್ಳಿ
- ಪ್ರವಾಹ ಪೀಡಿತ ಪ್ರದೇಶದ ಶಾಶ್ವತ ಪರಿಹಾರಕ್ಕೆ ಕ್ರಮ:- ಶಾಸಕ ಕಾಮತ್
- ಮಂಗಳೂರು: ಮಳೆ ಬಿರುಸು ಹಿನ್ನಲೆ ; ದ.ಕ. ಜಿಲ್ಲೆಯ ಅಂಗನವಾಡಿಯಿಂದ ಪಿಯು ತರಗತಿವರೆಗೆ ಜೂನ್ 16 ಸೋಮವಾರ (ಇಂದು) ರಜೆ ಘೋಷಿಸಿ ಡಿಸಿ ಪರಿಷ್ಕೃತ ಆದೇಶ
- ಗಜಾನನ ಕ್ರಿಕೆಟರ್ಸ್ ಟೀಸರ್ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ತುಳು ಸಿನೆಮಾ.
- ಮಂಗಳೂರು: ರಸ್ತೆಗಳಿಗೆ ಉಕ್ಕಿ ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿದ ಮಳೆ ನೀರು
- ಮಂಗಳೂರಿನಲ್ಲಿ ಸ್ಪೆಷಲ್ ಆಕ್ಷನ್ ಪೋರ್ಸ್ ಕಾರ್ಯಪಡೆ ಕಚೇರಿ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್
- ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ರಾಗಿ ಅಧಿಕಾರ ಸ್ವೀಕರಿಸಿದ ದಕ್ಷ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್