ಪ್ರಶಸ್ತಿ ವಿಜೇತ ಖ್ಯಾತ ತುಳು ಸಾಹಿತಿ ಶ್ರೀಮತಿ ಜಯಂತಿ ಬಂಗೇರ ಇವರ ಪತಿ, ಮೂಡಬಿದ್ರಿ ಸಪಲಿಗ ಸೇವಾ ಸಂಘದ ಮಾಜಿ ಅಧ್ಯಕ್ಷರು , ಮೂಡಬಿದ್ರೆ ಸುಜಯ ಹಾಲೋ ಬ್ಲಾಕ್ ಇಂಡಸ್ಟ್ರಿ ಇದರ ಮಾಲಕರಾದ ಶ್ರೀ ಸದಾಶಿವ ಬಂಗೇರ (72 ವ ) ಇವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 09-03-2025 ರಂದು ನಿಧನ ಹೊಂದಿದರು. ಅಂತ್ಯಕ್ರಿಯೆ ಸಂಜೆ 7.30 ಕೆ ಜರುಗಿತು. ಮೃತರ ಪತ್ನಿ ತುಳು ಸಾಹಿತಿ, ಉಡಲ್ ತುಳು ತ್ರೈಮಾಸಿಕ ಪತ್ರಿಕೆ ಸಂಪಾದಕಿ ಜಯಂತಿ ಬಂಗೇರ, ಪುತ್ರ ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 13 ವರ್ಷ ಎಂ.ಆರ್.ಪಿ. ಎಲ್ ನಲ್ಲಿ ಉದ್ಯೋಗದಲ್ಲಿದರು. ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಾಗಿದ್ದರು. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರ ಅಗಲುವಿಕೆಯಿಂದ ದುಃಖತಪ್ತ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ . ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ,ತುಳು ವರ್ಲ್ಡ್ ಫೌಂಡೇಶನ್ ಡಾ. ರಾಜೇಶ್ ಆಳ್ವ, ತುಳು ಕೂಟ ಕುಡ್ಲ ಅಧ್ಯಕ್ಷೆ ಹೇಮ ದಾಮೋದರ್ ನಿಸರ್ಗ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ
Trending
- INDIA through my EYES’ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯಿ ಎಸ್. ವಿಜೇತೆ
- ಕರಂಬಾರು ಶಾಲೆಯಲ್ಲಿ ಸಂಭ್ರಮ ಸಡಗರದಿಂದ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ
- ಕೋರ್ದಬ್ಬು ದೈವದ ಪಾತ್ರಿ ಸೀನ ಪಾತ್ರಿ ನಂದಿಕೂರು ಮೆರೆಗ್ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ದ “ತುಳುವಾಲ ಕುಲಸಿರಿ – 2026” ಪ್ರಶಸ್ತಿ ಘೋಷಣೆ
- ಪುತ್ತೂರಿನ ಸಾನ್ವಿತಾ ಎಂ. ರೈ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ
- ಗ್ರೀನ್ ವ್ಯೂ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
- ಮಂಗಳೂರಿನ ಸಿಟಿ ಸೆಂಟರ್ KFC ಮಳಿಗೆಯಲ್ಲಿ 9 ತಿಂಗಳ ಹಿಂದಿನ ಮಾಂಸ ಪತ್ತೆ: ಆರೋಗ್ಯಾಧಿಕಾರಿಗಳಿಂದ ಮಳಿಗೆಗೆ ಬೀಗ
- ತಲ್ಲೂರಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಆಟೋ ಚಾಲಕರಿಗೆ ಸಿಹಿ ವಿತರಣೆ, ಶೇ.90 ಅಂಕ ಗಳಿಸಿದ ಸ್ಪಂದಿತ ಪೂಜಾರಿಗೆ ಡಾ. ರವೀಂದ್ರ ತಲ್ಲೂರು ಅವರಿಂದ ಸನ್ಮಾನ
- ಡಿ.ಕೆ. ಯೂಸ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ನ ನೂತನ ಕಾನೂನು ಸಲಹೆಗಾರರಾಗಿ ಶ್ರೀ ಸಿನಾನ್ ಸಿದ್ದೀಕ್ ನೇಮಕ

