ಕಡಬ: ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ವೃದ್ಧರೋರ್ವರನ್ನು ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ ಅರ್ಧ ದಾರಿಯಲ್ಲೇ ಇಳಿಸಿಹೋದ ಘಟನೆ ಇಂದು ಕಡಬದಲ್ಲಿ ನಡೆದಿದೆ.
ಬೆಳಿಗ್ಗೆ 9.30 ಗಂಟೆಗೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಸುವಂತೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದಾಗ ಅರ್ಧ ದಾರಿಲ್ಲೇ ಇಳಿಸಿದ್ದಾನೆ ಎನ್ನಲಾಗಿದೆ.
ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು ವೃದ್ಧರು ಮನವಿ ಮಾಡಿಕೊಂಡರಾದರೂ, ಕ್ಯಾರೇ ಎನ್ನದ ಕಂಡಕ್ಟರ್ ಗೋಳಿಯಡ್ಕ ಎಂಬಲ್ಲಿ ಇಳಿಸಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಕಂಡಕ್ಟರ್ ನ ಈ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Trending
- ರಾಮಾಪುರದಲ್ಲಿ ಭೀಕರ ಹತ್ಯೆ ಶಂಕೆ: ಕಾರಿನೊಳಗೆ ಸುಟ್ಟು ಕರಕಲಾದ ಶವ ಪತ್ತೆ, ಮಾಜಿ ಶಾಸಕ ಪುತ್ರನಾಗಿರಬಹುದೆಂಬ ಅನುಮಾನ
- ಅಯ್ಯಪ್ಪ ವ್ರತದಾರಿಗಳಿಂದ ಕೇರಳ ಪಂಪತೀರದಲ್ಲಿ ತುಳು ಧ್ವಜ ಹಾರಿಸಿ ನಾಡಿನ ಸಂಸ್ಕೃತಿ-ಪರಂಪರೆ ಸಾರಿದ ಆದಿ ಮಹೇಶ್ವರಿ ಅಯಪ್ಪ ಭಕ್ತ ವ್ರಂದ ತಂಡದವರು
- ಕೋಟಿಮುರ – ಸರಿಪಳ್ಳ 1.80 ಕೋಟಿ ರೂ. ವಿಶೇಷ ಅನುದಾನದಲ್ಲಿ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ
- ಮಂಗಳೂರು ಮೂಲಸೌಕರ್ಯ, ಎಕ್ಸ್ಪ್ರೆಸ್ವೇ, ರೈಲು ಯೋಜನೆಗಳಿಗೆ ವೇಗ ನೀಡಲು ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹ
- ಹಿಂದೂ, ಸಿಖ್, ಬೌದ್ಧ ಹೊರತು ಬೇರೆ ಧರ್ಮಕ್ಕೆ ಮತಾಂತರವಾದರೆ SC ಹಕ್ಕು ರದ್ದು ಸುಪ್ರೀಂ ಕೋರ್ಟು ಐತಿಹಾಸಿಕ ತೀರ್ಪು ಪ್ರಕಟ
- ಅಖಿಲ ಭಾರತ ತುಳು ಒಕ್ಕೂಟ ಕಾರ್ಯಕಾರಿ ಸಭೆ ಯಶಸ್ವಿ
- ಬೆಂಗಳೂರು: ಸರ್ಕಾರಿ ಉದ್ಯೋಗದ ಹೆಸರಿನಲ್ಲಿ ₹25 ಕೋಟಿ ವಂಚನೆ – ದಂಪತಿ ಬಂಧನ
- ಮಂಗಳೂರು: ಸಿಸಿಬಿ ಬಲೆಗೆ MDMA ಜಾಲ – ಮೂವರು ಆರೋಪಿಗಳ ಬಂಧನ
