ಕಡಬ: ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ವೃದ್ಧರೋರ್ವರನ್ನು ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ ಅರ್ಧ ದಾರಿಯಲ್ಲೇ ಇಳಿಸಿಹೋದ ಘಟನೆ ಇಂದು ಕಡಬದಲ್ಲಿ ನಡೆದಿದೆ.
ಬೆಳಿಗ್ಗೆ 9.30 ಗಂಟೆಗೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಸುವಂತೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದಾಗ ಅರ್ಧ ದಾರಿಲ್ಲೇ ಇಳಿಸಿದ್ದಾನೆ ಎನ್ನಲಾಗಿದೆ.
ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು ವೃದ್ಧರು ಮನವಿ ಮಾಡಿಕೊಂಡರಾದರೂ, ಕ್ಯಾರೇ ಎನ್ನದ ಕಂಡಕ್ಟರ್ ಗೋಳಿಯಡ್ಕ ಎಂಬಲ್ಲಿ ಇಳಿಸಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಕಂಡಕ್ಟರ್ ನ ಈ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Trending
- ಬಿಎಸ್ಪಿ ದಕ್ಷಿಣ ಕನ್ನಡ ಜಿಲ್ಲಾ ಮಾಸಿಕ ಸಭೆ ಪೇಜಾವರ ಪೊರ್ಕೋಡಿಯಲ್ಲಿ ಯಶಸ್ವಿ
- ಉಡುಪಿ: ಕಟಪಾಡಿಯ ಕೌಸ್ತುಭ ರೆಸಿಡೆನ್ಸಿ ಕಟ್ಟಡದ ಕೊಳಚೆ ನೀರಿನ ಸರಿಯಾದ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ
- ಶ್ರೀ ಸುಂದರರಾಜ ರೈ ಅವರ ಶ್ರದ್ಧಾಂಜಲಿ — ಸಭೆ 30 ಅಕ್ಟೋಬರ್, ಉರ್ವ ತುಳು ಭವನ
- ಬಂಟರ ಸಂಘ ಬಜಪೆ ವಲಯದ ನೂತನ ಅಧ್ಯಕ್ಷರಿಗೆ ಅದ್ದೂರಿ ಸ್ವಾಗತ
- ಉಡುಪಿ: ಪಿಎಂಇಜಿಪಿ ಸಬ್ಸಿಡಿ ಸಾಲದ ಹೆಸರಿನಲ್ಲಿ ಕೋಟ್ಯಾಂತರ ವಂಚನೆ – ಆರೋಪಿ ಮಹಿಳೆ ಸೆರೆ
- ಹಿರಿಯ ನಟ ಸತೀಶ್ ಶಾ (74) ನಿಧನ
- ✨ ಮಂಗಳೂರಿನ ಎಮ್ಸಿಸಿ ಬ್ಯಾಂಕ್ನಲ್ಲಿ ಸಂಭ್ರಮಭರಿತ ದೀಪಾವಳಿ ಆಚರಣೆ
- ದಿ|ಜಲಂಧರ ರೈ ಸಮಾಜಕ್ಕಾಗಿ ಸರ್ವಸಮರ್ಪಿತ ಕಾರ್ಯಕರ್ತ, ಇಪ್ಪತ್ತೈದನೇ ವರ್ಷದ ಸಂಸ್ಮರಣಾ ಸಮಾರಂಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿಮತ
